ಗೋಣಿಕೊಪ್ಪ: ಮತದಾರರ ಜಾಗೃತಿ ಅಭಿಯಾನ
Team Udayavani, Mar 23, 2019, 12:30 AM IST
ಮಡಿಕೇರಿ: ಗೋಣಿ ಕೊಪ್ಪಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ವತಯಿಯಂದ ಮತದಾರರ ಜಾಗೃತಿ ಅಭಿಯಾನ ಗೋಣಿಕೊಪ್ಪದಲ್ಲಿ ನಡೆಯಿತು ಮತದಾರರ ಜಾಗೃತಿಯ ಘೋಷಣೆಯ ಫಲಕಗಳೊಂದಿಗೆ ಶಾಲೆಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕ ರೊಂದಿಗೆ ಮೆರವಣಿಗೆಯು ಪಟ್ಟಣದ ಮುಖ್ಯ ರಸ್ತೆ ಯಲ್ಲಿ ಸಾಗಿ ನಂತರ ಗೋಣಿಕೊಪ್ಪಲುವಿನ ಬಸ್ಸು ನಿಲ್ದಾಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸುತ್ತಲು ನಿಂತು ಅಲ್ಲಿಯೇ ಮತದಾನದ ಜಾಗೃತಿಯ ಕಾರ್ಯಕ್ರಮದ ವಿಚಾರವನ್ನು ಶಾಲೆಯ ದೈಹಿಕ ಶಿಕ್ಷಕರಾದ ರಮಾನಂದ ಅವರು ಸಾರ್ವಜನಿಕರಿಗೆ ತಿಳಿಯಪಡಿಸಿದರು. ಶಾಲೆಯ ವಿದ್ಯಾರ್ಥಿನಿ ಕುಮಾರಿ ಮೊನಿಕ ಮತದಾರರ ಜಾಗೃತಿ ಅಭಿಯಾನದ ಮಹತ್ವವನ್ನು ತಿಳಿಸಿದರು.
ಅದೇ ಸಂದರ್ಭ ದಲ್ಲಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ಬಿ.ಆರ್. ಸತೀಶ್ ಜನಸಮೂಹ ಹಾಗೂ ವಿದ್ಯಾರ್ಥಿಗಳ ಮುಂದೆ ಸ್ಥಳದಲ್ಲಿಯೇ ಮತದಾನದ ಜಾಗೃತಿ ಬಿಂಬಿಸುವುದನ್ನು ಕ್ಯಾನ್ವಸ್ನ ಮೇಲೆ ಚಿತ್ರಿಸಿದರು.”ನಮ್ಮ ಮತ ನಮ್ಮ ಹಕ್ಕು” ಎಂಬ ಘೋಷಣೆಯನ್ನು ಬರೆದರು ಅಲ್ಲಿ ನೆರೆದಿದ್ದ ಜನರ ಮುಂದೆ ಶಾಲೆಯ ಮುಖ್ಯೋಪಾದ್ಯಾಯರಾದ ಕೆ.ಆರ್.ಶಶಿಕಲಾ ಅವರು ಸತೀಶ್ ಅವರು ಚಿತ್ರಿಸಿದ ಬೆರಳಿನ ಚಿತ್ರಣಕ್ಕೆ ಬಣ್ಣ ಹಚ್ಚಿ ಓಟು ಮಾಡುವುದರ ಮೂಲಕ ಮತದಾನದ ಜಾಗೃತಿ ಕಾರ್ಯ ಜನರಿಗೆ ಮನ ತಲುಪುವಂತೆ ಮಾಡಿದರು. ಅನಂತರ ಸರ್ವರು ಮತದಾನವನ್ನು ಮಾಡುವಂತೆ ತಿಳಿಯಪಡಿಸಿದರು.ಗೋಣಿಕೊಪ್ಪ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಜ್ಯೋತಿಶ್ವರಿ ಮಾತನಾಡಿ ಮತದಾನವು ನಮ್ಮ ಹಕ್ಕು ಪ್ರತಿಯೊಬ್ಬರೂ ಎ. 18 ರಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತಾಗಬೇಕು ಎಂದು ಕೋರಿದರು.