Sirsi: ರಾಮ ಮಂದಿರ ವಿಚಾರವನ್ನು ರಾಜಕೀಯಗೊಳಿಸಬಾರದು: ಅನಂತಕುಮಾರ ಹೆಗಡೆ
Team Udayavani, Jan 10, 2024, 1:30 PM IST
ಶಿರಸಿ: ರಾಮ ಮಂದಿರ ಉದ್ಘಾಟನೆ ಕೇವಲ ದೇವಾಲಯದ ಉದ್ಘಾಟನೆ ಅಲ್ಲ ಬದಲಾಗಿ ಹಿಂದೂಗಳ ಮಹಾ ಶಕ್ತಿ ಅನಾವರಣ. ಬಿ.ಕೆ.ಹರಿಪ್ರಸಾದ್ ಅವರ ಹೇಳಿಕೆಯ ಮಟ್ಟಕ್ಕೆ ಇಳಿದು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ರಾಮ ಮಂದಿರ ವಿಚಾರವನ್ನು ರಾಜಕೀಕರಣಗೊಳಿಸಬಾರದು. ಧರ್ಮ ಮತ್ತು ಸಂಸ್ಕೃತಿ ರಾಜಕೀಯ ರೇಖೆ ಮೀರಿದ್ದು. ರಾಮ ಭಕ್ತರಿಗೆ ಎಲ್ಲರಿಗೂ ಆಹ್ವಾನವಿದೆ. ಆಹ್ವಾನ ಬಂದೇ ಹೋಗಬೇಕಿಲ್ಲ. ಆಹ್ವಾನ ಬರುವ ತನಕ ಬಂದಿಲ್ಲ ಎನ್ನುವದು, ಬಂದ ಬಳಿಕ ಹೋಗುವದಿಲ್ಲ ಎನ್ನುವುದು ಹೀಗೆ ಡೊಂಬರಾಟ ಮಾಡಬಾರದು ಎಂದು ಹೇಳಿದರು.
ರಾಮ ಮಂದಿರ ಸಮಸ್ತ ಹಿಂದೂ ಸಮಾಜದ ಮಂದಿರ. ಬಿಜೆಪಿ ಅಥವಾ ಸರಕಾರದ ಮಂದಿರವಲ್ಲ ಎಂದರು.
ಶತಮಾನಗಳ ಇತಿಹಾಸಕ್ಕೆ ಭವ್ಯ ಗೆಲುವು ಸಿಕ್ಕಿದೆ. ಸಾವಿರ ವರ್ಷಗಳಿಂದ ಹಿಂದೂ ಸಮಾಜದ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ ಅತ್ಯಾಚಾರ ಬದಲಾಗಿ ಸಮಾಜ ಎದ್ದು ನಿಂತಿದೆ. ಹಿಂದೂ ಸಮಾಜ ಸಾತ್ವಿಕ ಶಕ್ತಿ ಅನಾವರಣವಾಗುತ್ತಿದೆ. ಒಂದು ಸಮಾಜ ಹೇಗೆ ನಿಲ್ಲುತ್ತದೆ ಎಂಬುದಕ್ಕೆ ಇದೊಂದು ನಿದರ್ಶನ. ಪ್ರತ್ಯಕ್ಷ, ವೈಚಾರಿಕ ಸಂಘರ್ಷ ಎಲ್ಲವನ್ನೂ ಮೆಟ್ಟಿ ನಿಂತ ಘಟಕ ಎಂದರು.
ದೇಶದ ಪರಂಪರೆ, ಸಂಸ್ಕೃತಿ, ಧರ್ಮ, ಇತಿಹಾಸದ ಆಳವಾದ ನಂಬಿಕೆ ಇದ್ದವರಿಗೆ ಇದೊಂದು ಸಮಾರೋಹ. ಈ ಸಮಾಜ ಮೇಲೆ ಸ್ವಂತ ಶಕ್ತಿಯ ಮೇಲೆ ಎದ್ದು ನಿಂತಿದೆ ಎಂದು ಹೇಳಿದರು.
ಈ ವೇಳೆ ಚಂದ್ರು ಎಸಳೆ, ಮೋಹನದಾಸ ನಾಯಕ ಇತರರು ಇದ್ದರು.
ಇದನ್ನೂ ಓದಿ: Heart Attack: ಕ್ರಿಕೆಟ್ ಆಡುವ ವೇಳೆ ಹೃದಯಾಘಾತ… ಆಸ್ಪತ್ರೆ ದಾರಿಯಲ್ಲೇ ಕೊನೆಯುಸಿರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ