ಸಂತ್ರಸ್ತರಿಗೆ ನೆರವು ಸಂಗ್ರಹ-ವಿತರಣೆ
•ವಿವಿಧ ಸ್ವಯಂ ಸೇವಾ ಸಂಸ್ಥೆಗಳಿಂದ ಜಿಲ್ಲೆಯ ಪ್ರವಾಹ ಪೀಡಿತರಿಗಾಗಿ ಅಕ್ಕಿ-ಬೇಳೆ-ಕಾಳು ಸಂಗ್ರಹ
Team Udayavani, Aug 17, 2019, 12:06 PM IST
ಅಂಕೋಲಾ: ತಾಲೂಕಿನ ನೆರೆ ಸಂತ್ರಸ್ತರಿಗೆ ತಮ್ಮ ಉದಾತ್ತ ಕೈಂಕರ್ಯದ ಮೂಲಕ ಜೆಸಿಐ ಮಾದರಿಯಾಗಿದ್ದು ಇತರ ಸ್ವಯಂ ಸೇವಾ ಸಂಸ್ಥೆಗಳು ಸಹ ಸೇವೆ ಮಾಡುವ ಮನೋಭಾವನೆ ಇದ್ದರೆ ಸಂತ್ರಸ್ತರು ಧೃತಿಗೆಡುವ ಅವಶ್ಯಕತೆ ಇಲ್ಲ ಎಂದು ತಾಪಂ ಅಧ್ಯಕ್ಷೆ ಸುಜಾತಾ ಗಾಂವಕರ ಹೇಳಿದರು.
ಅವರು ಶುಕ್ರವಾರ ಜೂಗ, ಕರ್ಕಿತುರಿ, ಶೇಡಿಕಟ್ಟ ಮೋಟನ್ ಕುರ್ವಾ ಪ್ರದೇಶಗಳಲ್ಲಿ ನೆರೆ ಸಂತ್ರಸ್ತರಿಗೆ ಜೆಸಿಐ ತಂದಿರುವ ಸಾಮಾನು ಸರಂಜಾಮುಗಳನ್ನು ವಿತರಿಸಿ ಮಾತನಾಡಿದರು. ತಾಲೂಕಿನ 33 ಹಳ್ಳಿಗಳು ನೆರೆಯಿಂದ ತತ್ತರಿಸಿದ ಸಂದರ್ಭದಲ್ಲಿ ಜೆಸಿ ಸಂಸ್ಥೆ ಸಹಕಾರ ನೀಡಿದೆ. ಜೆಸಿಐ ವಲಯಾಧ್ಯಕ್ಷ ಅಶೋಕ್ ಚುಂತರ್ ತಂಡ ಸುಳ್ಯ, ಭಟ್ಕಳ, ಕುಂದಾಪುರದಿಂದ ಸಂಗ್ರಹಿಸಿದ ಸಾಮಗ್ರಿಗಳನ್ನು ಜನರಿಗೆ ವಿತರಿಸಿರುವುದು ಶ್ಲಾಘನೀಯ ಎಂದರು.
ಜೆಸಿಐ ಅಧ್ಯಕ್ಷ ಅಶೋಕ್ ಮಾತನಾಡಿ ಮನುಷ್ಯರು ತೊಂದರೆಯಲ್ಲಿದ್ದಾಗ ಇನ್ನೊಬ್ಬರು ಸಹಾಯ ಮಾಡುವುದು ಧರ್ಮ. ಯಾವುದೇ ವ್ಯಕ್ತಿಗಳ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವುದಕ್ಕಿಂತ ಕಷ್ಟಕಾಲದಲ್ಲಿ ನೆರವಾಗಬೇಕು ಎಂದರು. ತಾಲೂಕಿನ ವಾಸರೆ, ಕುದ್ರಿಗೆ, ಕೊಡ್ಸಣಿ, ಆಂದ್ಲೆ, ಜೂಗ, ಕರ್ಕಿತುರಿ, ಮೋಟನ್ ಕುರ್ವೆ, ಶೇಡಿಕಟ್ಟಾ, ಬಳಲೆ ಭಾಗಗಳಲ್ಲಿ ನೆರೆ ಸಂತ್ರಸ್ತರಿಗೆ ದಿನನಿತ್ಯ ಬಳಕೆ ವಸ್ತುಗಳನ್ನು ಪೂರೈಸಿದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ, ಕಾರ್ಯದರ್ಶಿ ಸುಭಾಷ್ ಕಾರೇಬೈಲ್, ತಾಪಂ ಸದಸ್ಯೆ ಶಾಂತಿ ಆಗೇರ, ವಾಸರ್ ಕುದ್ರಿಗೆ, ಗ್ರಾಪಂ ಉಪಾಧ್ಯಕ್ಷ ಪ್ರದೀಪ್ ವಾಸರೆ, ಮೊಗಟಾ ಉಪಾಧ್ಯಕ್ಷ ದೇವಾನಂದ ನಾಯಕ, ಜೆಸಿಐ ವಲಯ ಉಪಾಧ್ಯಕ್ಷ ಜಬ್ಬರ್ ಬಟ್ಕಳ, ಕುಂದಾಪುರ ಸಿಟಿ ಜೆಸಿಐ ಸ್ಥಾಪಕ ಹುಸೇನ ಹೈಕಾಡಿ, ಭಟ್ಕಳ ಜೆಸಿಐ ಸದಸ್ಯರಾದ ಸುರೇಶ್ ಪೂಜಾರಿ, ಈಶ್ವರ್ ನಾಯ್ಕ, ಜಗದೀಶ್ ಮೊಗವೀರ ಸುಳ್ಯ, ಯೋಗೀಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?