ಈದ್ ಉಲ್ ಫಿತರ್ ಸಂಭ್ರಮ-ಸಡಗರ
•ಮಸೀದಿ-ಈದ್ಗಾ ಮೈದಾನಗಳಲ್ಲಿ ವಿಶೇಷ ಪ್ರಾರ್ಥನೆ•ಬೀದಿಗಳಲ್ಲಿ ಅದ್ಧೂರಿ ಮೆರವಣಿಗೆ •ಮೌಲಾನರಿಂದ ಶಾಂತಿ ಸಂದೇಶ
Team Udayavani, Jun 6, 2019, 10:43 AM IST
ಕಾರವಾರ: ಕೋಡಿಬಾಗದ ಫುರ್ಖಾನ್ ಮಸ್ಜಿದ್ನಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕಾರವಾರ: ಜಿಲ್ಲೆಯ ಎಲ್ಲೆಡೆ ಒಂದು ತಿಂಗಳ ಉಪವಾಸ ವ್ರತದ ನಂತರ ಈದ್ -ಉಲ್-ಫಿತರ್ ಆಚರಿಸಲಾಯಿತು. ಕಾರವಾರದಲ್ಲಿನ ಎಲ್ಲ ಮಸೀದಿಗಳಲ್ಲಿ ಬೆಳಗ್ಗೆಯೇ ಮುಸಲ್ಮಾನ ಬಾಂಧವರು ಪ್ರಾರ್ಥನೆ ಸಲ್ಲಿಸಿದರು. ನಂತರ ಶುಭಾಶಯ ವಿನಿಮಯ ಮಾಡಿಕೊಂಡರು. ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಅಕ್ಕಪಕ್ಕದ ಸಮುದಾಯದ ಮನೆಯವರಿಗೆ ಪಾಯಸ ನೀಡಿ ಈದ್ ಸಂತಸ ಹಂಚಿಕೊಂಡರು.
ನಗರದ ಕೋಡಿಬಾಗದ ಫುರ್ಖಾನ್ ಮಸ್ಜಿದ್ನಲ್ಲಿ ಬೆಳಗ್ಗೆ 7:15ಕ್ಕೆ ಸರಿಯಾಗಿ ಈದ್-ಉಲ್-ಫಿತರ್ ಹಬ್ಬದ ನಿಮಿತ್ತ ಪ್ರಾರ್ಥನೆ ಸಲ್ಲಿಸಲಾಯಿತು. ಮೌಲಾನಾ ಅಲೀಮ್ ಅತೀಕುಲ್ ರೆಹಮಾನ ಪ್ರಾರ್ಥನೆ ನೆರವೇರಿಸಿಕೊಟ್ಟರು. ನಮಾಝ್ನ ನಂತರ ಎಲ್ಲರನ್ನು ಉದ್ದೇಶಿಸಿ ಪ್ರವಚನ ನೀಡಿದ ಅವರು, ರಂಜಾನ್ ತಿಂಗಳು ಮುಸ್ಲಿಮ್ ಬಾಂಧವರಿಗೆ ಪವಿತ್ರವಾದ ತಿಂಗಳು. ಒಂದು ತಿಂಗಳು ಸಂಪೂರ್ಣವಾಗಿ ಶ್ರದ್ಧೆ ಹಾಗೂ ಭಕ್ತಿಯಿಂದ ಉಪವಾಸ ಆಚರಿಸಿ ತಮ್ಮ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಹಸಿವು ಹಾಗೂ ಬಾಯಾರಿಕೆಯ ಅರಿವನ್ನು ಸ್ವತಃ ತಿಳಿದುಕೊಂಡು ಬಡವರಿಗೆ ದಾನ ಮಾಡಿ ಪುಣ್ಯವನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಮುಸ್ಲಿಮ್ ಬಾಂಧವರು ಭೇದ ಭಾವ ಮರೆತು ಜೀವನದಲ್ಲಿ ಅಲ್ಲಾಹನು ತೋರಿಸಿಕೊಟ್ಟ ಮಾರ್ಗದಲ್ಲೇ ನಡೆದು ಎಲ್ಲರಿಗೂ ನೆರವಾಗಬೇಕು. ಈ ತಿಂಗಳಲ್ಲಿ ಆದಷ್ಟು ದಾನಧರ್ಮ ಮಾಡಬೇಕು. ಬಡವರೂ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುವಂತೆ ಮಾಡುವುದು ಇಸ್ಲಾಂ ಧರ್ಮದ ಕರ್ತವ್ಯವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಪರಸ್ಪರ ಸೌಹಾರ್ದತೆಯಿಂದ ಬಾಳುವುದರ ಮೂಲಕ ದೇಶದೆಲ್ಲಡೆ ಶಾಂತಿನೆಲೆಸುವಂತೆ ಮಾಡೋಣ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.
ಫುರ್ರ್ಖನ್ ಮಸ್ಜಿದ್ನ ಕಾರ್ಯದರ್ಶಿ ಎಂ.ಎಂ. ಶರೀಫ್, ರಾಷ್ಟ್ರ ಪ್ರಶಸ್ತಿ ವಿಜೇತ ನಜೀರ್ ಅಹಮದ್ ಯು. ಶೇಖ್, ಮಾಜಿ ಅಧ್ಯಕ್ಷ ಮೊಹಮ್ಮದ್ ರಫಿ ಮಿರ್ಜಾನ್ಕರ್, ವಕೀಲರಾದ ಎಸ್.ಎ. ಖಾಝಿ, ಡಾ| ನಯೀಮ್ ಮುಕಾದಮ್, ಅಬ್ದುಲ್ ರೆಹಮಾನ್, ಫೈಸಲ್ ಮುಕಾದಮ್, ಬಶೀರ್ ಶೇಖ್, ಮೊಹಮ್ಮದ್ ಹಸನ್, ಆಝಾದ್ ಯುಥ್ ಕ್ಲಬ್ನ ಕಾರ್ಯದರ್ಶಿ ಮೊಹಮ್ಮದ್ ಉಸ್ಮಾನ್ ಶೇಖ್, ಜಂಟಿ ಕಾರ್ಯದರ್ಶಿ ಫೌಜಿ ಮಿರ್ಜಾನ್ಕರ್, ನಿಝಾಮುದ್ದಿನ್ ಶೇಖ್, ಆದಂ ಖಾನ್, ಫೈಸಲ್ ಮುಕಾದಂ, ರಿಯಾಝ್ ಮಿರ್ಜಾನ್ಕರ್ ಮತ್ತಿತರ ಪ್ರಮುಖರು ಹಾಗೂ ಮುಸ್ಲಿಮ್ ಬಾಂಧವರು ಇದ್ದರು. ಮಹಿಳೆಯರಿಗೂ ಪ್ರಾರ್ಥನೆಗಾಗಿ ವಿಶೇಷ ಸ್ಥಳದ ಅವಕಾಶ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?