![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಇನ್ನು 61 ದಿನ ಮೀನುಗಾರಿಕೆ ಬಂದ್: ಲಂಗರು ಹಾಕಿದ ಬೋಟುಗಳು!
Team Udayavani, Jun 3, 2024, 5:13 PM IST
![ಇನ್ನು 61 ದಿನ ಮೀನುಗಾರಿಕೆ ಬಂದ್: ಲಂಗರು ಹಾಕಿದ ಬೋಟುಗಳು!](https://www.udayavani.com/wp-content/uploads/2024/06/Boat-620x357.jpg)
■ ಉದಯವಾಣಿ ಸಮಾಚಾರ
ಕಾರವಾರ: ಮಳೆಗಾಲ ಆರಂಭವಾದದ್ದೇ ತಡ ಮೀನುಗಾರಿಕೆ ಉದ್ಯಮ ಸಹ ವಿರಾಮ ತೆಗೆದುಕೊಂಡಿದೆ. ಮಳೆಗಾಲದಲ್ಲಿ
ಮೀನುಗಳು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುವ ಸಮಯವಾದ ಕಾರಣ ಜೂನ್ -ಜುಲೈನಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ಸರ್ಕಾರ ಸಹ ನಿಷೇಧ ಹೇರುತ್ತಾ ಬಂದಿರುವುದು ವಾಡಿಕೆ.
ಜೂನ್ ಪ್ರಾರಂಭವಾಗುತ್ತಿದ್ದಂತೆ, ಆಳ ಸಮುದ್ರದಲ್ಲಿ ಮೀನು ಬೇಟೆಯಾಡುತ್ತಿದ್ದ ಯಾಂತ್ರಿಕ ಬೋಟ್ಗಳು ದಡ ಸೇರಿದವು.
ಕಾರವಾರ, ಮುದಗಾ, ಬೇಲೇಕೇರಿ, ತದಡಿ, ಕಾಸರಕೋಡು, ಭಟ್ಕಳ ಬಂದರು ಸೇರಿದಂತೆ ಜಿಲ್ಲೆಯ ಒಂಬತ್ತು ಬಂದರುಗಳಲ್ಲಿ ಮೀನುಗಾರಿಕಾ ಚಟುವಟಿಕೆ ಸ್ತಬ್ಧಗೊಂಡಿದೆ. ಪರ್ಶಿಯನ್, ಟ್ರಾಲರ್ ಬೋಟ್ ಗಳಲ್ಲಿ ಕೆಲಸ ಮಾಡುವ ಒಡಿಶಾ, ಆಂಧ್ರ ಹಾಗೂ ಉತ್ತರ ಕರ್ನಾಟಕದ ಕಾರ್ಮಿಕರು ತಮ್ಮ ಸ್ವಂತ ಊರು, ರಾಜ್ಯಕ್ಕೆ ತೆರಳಿದ್ದಾರೆ. ಅಂದಾಜು 25 ಸಾವಿರ ಕಾರ್ಮಿಕರು ವಲಸೆ ಬಂದು ಮೀನುಗಾರಿಕೆಯಲ್ಲಿ ನಿರತರಾಗುತ್ತಾರೆ.
ಉಳಿದಂತೆ ಜಿಲ್ಲೆಯ 25 ಸಾವಿರ ಕಾರ್ಮಿಕರು, ಬೋಟ್ ಮಾಲೀಕರು, ಅವರ ಸಿಬ್ಬಂದಿ ಬಲೆ ರಿಪೇರಿ, ಬೋಟ್ ರಿಪೇರಿ, ನವೀಕರಣದಂಥ ಕೆಲಸಗಳನ್ನು ಮಳೆಗಾಲದಲ್ಲಿ ಮಾಡಿಕೊಳ್ಳುತ್ತಾರೆ. ಈ ಕಾರ್ಯ ಈಗ ನಿರಂತರವಾಗಿ ನಡೆದಿದೆ.
ಪರ್ಶಿಯನ್ ಬೋಟ್ 1,113: ಇನ್ನು ಜಿಲ್ಲೆಯಲ್ಲಿ ಪರ್ಶಿಯನ್ ಬೋಟ್ 1,113 ಇದ್ದು, ಅವು ಬಂದರಿನ ಧಕ್ಕೆಗೆ ಬಂದಿವೆ.
4027 ಟ್ರಾಲರ್ ಬೋಟ್ಗಳು ಬಂದರಿನಲ್ಲಿ ಲಂಗರು ಹಾಕಿವೆ. ಇವುಗಳನ್ನು ಹೊರತು ಪಡಿಸಿ, ಸಣ್ಣ ಪ್ರಮಾಣದ ಯಂತ್ರ ಜೋಡಿಸಿ ಎರಡು ಜನ ಸಿಬ್ಬಂದಿ ಸೇರಿ ಮಾಡುವ ಯಾಂತ್ರಿಕೃತ ಮೀನುಗಾರಿಕಾ ದೋಣಿಗಳು 5000ಕ್ಕೂ ಹೆಚ್ಚಿವೆ. ಈಚಿನ ವರ್ಷಗಳಲ್ಲಿ ಮತ್ಸ್ಯ ಸಂಪತ್ತು ಕ್ಷೀಣಿಸುತ್ತಿದ್ದು, ಮೀನುಗಾರಿಕೆ ಸಹ ಸಮುದ್ರ ಸಂಪತ್ತಿನ ಅದೃಷ್ಟವನ್ನು ಅವಲಂಬಿಸಿದೆ ಎಂದು ಫಿಶ್ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ತಿಳಿಸಿದ್ದಾರೆ.
ಸರ್ಕಾರ ಹತ್ತು ಹಲವು ನೆರವು ಘೋಷಣೆ ಪರಿಣಾಮ ಮೀನುಗಾರರ ಬದುಕು ಸ್ವಲ್ಪ ಚೇತರಿಕೆ ಇದೆ. ಮಳೆಗಾಲದಲ್ಲಿ ಸರ್ಕಾರದ ನಿಯಮ ಮೀರಿ ಆಳ ಸಮುದ್ರಕ್ಕೆ ತೆರಳಿ, ಬೋಟ್ ಅವಘಡವಾದರೆ, ಸರ್ಕಾರದ ಪರಿಹಾರ ದೊರೆಯುವುದಿಲ್ಲ. ಹಾಗಾಗಿ ನಿಷೇಧದ ಅವಧಿಯಲ್ಲಿ ಮೀನುಗಾರರು ಸರ್ಕಾರದ ನಿಯಮ ಪಾಲಿಸಬೇಕು ಎಂದು ಮೀನುಗಾರಿಕೆ ಪ್ರಭಾರ ಉಪ ನಿರ್ದೇಶಕ ಪ್ರತೀಕ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಜೂನ್ ಆರಂಭದಿಂದ ಮೀನುಗಾರಿಕೆ ಬಂದ್ ಆಗಿದ್ದು, ಮೀನುಗಾರರಿಗೆ ಇದು ವಿಶ್ರಾಂತಿ ಸಮಯವಾಗಿದೆ.
ಮಳೆಗಾಲದಲ್ಲಿ ಮೀನುಗಾರಿಕೆ ಸಾಧ್ಯವಿಲ್ಲ. ಏಂಡಿ ಬಲೆ ಬಳಸಿ ಸಾಂಪ್ರದಾಯಿಕ ಮೀನುಗಾರಿಕೆ ಮಾಡಬಹುದು. ಅದು ಸಮುದ್ರ
ದಡದ ಮೀನುಗಾರಿಕೆ. ಇದು ಸಹ ಮಳೆ ವಿರಾಮದ ಅವಧಿಯಲ್ಲಿ. ಉಳಿದಂತೆ ಯಾಂತ್ರಿಕ ಬೋಟ್ಗಳಿಗೆ ಹಾಗೂ ಮೀನುಗಾರರಿಗೆ ಇದು ವಿಶ್ರಾಂತಿ ಕಾಲ. ವರ್ಷದ ಎರಡು ತಿಂಗಳು ನೆಮ್ಮದಿ ಸಮಯ. ಉಳಿದಂತೆ ನಾವು ಸಮುದ್ರದ ಜೊತೆ ಸದಾ ಸಂಘರ್ಷದಲ್ಲಿ ಇರುತ್ತೇವೆ.
·ಸತೀಶ್ ತಾಂಡೇಲ್, ಹೊನ್ನಾವರ
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Shirur landslide; Green signal for National highway traffic in three or four days?](https://www.udayavani.com/wp-content/uploads/2024/07/1-27-150x83.jpg)
Shirur landslide; ರಾ.ಹೆದ್ದಾರಿ ಸಂಚಾರಕ್ಕೆ ಮೂರ್ನಾಲ್ಕು ದಿನಗಳಲ್ಲಿ ಗ್ರೀನ್ ಸಿಗ್ನಲ್ ?
![Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ](https://www.udayavani.com/wp-content/uploads/2024/07/shiruu-150x83.jpg)
Shirur Landslide; ನದಿಯಾಳದ ಕಾರ್ಯಾಚರಣೆಗೆ ನದಿ ನೀರಿನ ವೇಗ ಅಡ್ಡಿ
![1-ccc-aa](https://www.udayavani.com/wp-content/uploads/2024/07/1-ccc-aa-150x94.jpg)
Shiruru hill collapse; 10 ದಿನದಿಂದ ಇಲ್ಲೇ ಇದ್ದೇನೆ : ಟೀಕೆಗಳಿಗೆ ಶಾಸಕ ಸೈಲ್ ಬೇಸರ
![1–eewr-aa-aa](https://www.udayavani.com/wp-content/uploads/2024/07/1-eewr-aa-aa-150x91.jpg)
Shiruru hill collapse; ಮಣ್ಣು ತೆಗೆಯುವ ಕಾರ್ಯಾಚರಣೆ ವೇಳೆ ಸಿಕ್ಕ ಹೋಟೆಲ್ ಅವಶೇಷಗಳು
![1–eewr-aa](https://www.udayavani.com/wp-content/uploads/2024/07/1-eewr-aa-150x89.jpg)
Shiruru hill collapse; ನದಿಯ ನಾಲ್ಕು ಕಡೆ ಅವಶೇಷಗಳು ಬೆಳಕಿಗೆ:ಇಂದ್ರಬಾಲನ್ ನಂಬಿಯಾರ್
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.