ಜನರ ಹೃದಯದಲ್ಲಿದ್ದಾನೆ ದೇವರು


Team Udayavani, May 14, 2019, 4:14 PM IST

nc-5

ಕಾರವಾರ: ನಮ್ಮ ನಡುವೆ ಮಾನವೀಯತೆ ಬದುಕಿದೆ ಎಂಬುದಕ್ಕೆ ಇಲ್ಲಿನ ಕತೆ ಸಾಕ್ಷಿಯಾಗಿದೆ. ಗೋವಾದ ಪ್ರವಾಸಿಗರು ಹುಬ್ಬಳ್ಳಿಗೆ ಹೋಗುವಾಗ ದಾರಿಯಲ್ಲಿ ನೀರು ಕುಡಿಯಲು ನಿಂತು ಬಡವರ ಕಷ್ಟ ಕೇಳಿ, ಅದನ್ನೇ ಸೋಶಿಯಲ್ ಮೀಡಿಯಾ(ಫೇಸ್‌ ಬುಕ್‌)ದಲ್ಲಿ ಹಾಕಿ, ನೆರವು ಕೋರಿದ್ದಕ್ಕೆ ನೂರಾರು ಜನರು ಮತ್ತು ಗದಗ ಕನ್ನಡ ವೈಶ್ಯ ವೆಲ್ಫೇರ್‌ ಟ್ರಸ್ಟ್‌ ಅಗಸೂರಿನ ರಾಮಚಂದ್ರ ಶೆಟ್ಟಿ ಮತ್ತು ಅವರ ವಯೋವೃದ್ಧ ತಾಯಿ ಸರೋಜಿನಿ ಶೆಟ್ಟಿ ಅವರ ನೆರವಿಗೆ ಬಂದಿದೆ.

ಹದಿನೈದು ದಿನಗಳ ಹಿಂದೆ ಗೋವಾ ಮೂಲದವರು ಹುಬ್ಬಳ್ಳಿಗೆ ಪ್ರವಾಸ ಮಾಡುತ್ತಿದ್ದರು. ದಾರಿ ಮಧ್ಯೆ ಅಂಕೋಲಾದ ಅಗಸೂರಿನಲ್ಲಿ ಗೂಡಂಗಡಿ ಎದುರು ವಾಹನ ನಿಲ್ಲಿಸಿ ಕುಡಿಯುವ ನೀರನ್ನು ರಾಮಚಂದ್ರ ಶೆಟ್ಟಿ (45) ಅವರಿಂದ ಪಡೆದರು. ಹಾಗೂ ಅವರ ಕಷ್ಟ ಆಲಿಸಿದರು. ರಾಮಚಂದ್ರ ಅವರು ತಮಗಿರುವ ದೃಷ್ಟಿ ಸಮಸ್ಯೆ ಹಾಗೂ ತಾಯಿಯ ವಯೋ ಸಹಜ ಕಾಯಿಲೆ ವಿವರಿಸಿದರು.

75 ವರ್ಷದ ತಾಯಿಗೆ ಆರೋಗ್ಯ ಸಮಸ್ಯೆ, ಅಂಕೋಲಾಕ್ಕೆ ಚಿಕಿತ್ಸೆಗೆ ಕರೆದೊಯ್ಯಬೇಕು. ಅರ್ಥಿಕ ಸಂಕಷ್ಟ, ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕುಸಿದು ಹೋದದ್ದನ್ನು ಹಾಗೂ ಗ್ರಾಮಸ್ಥರು ನೆರವಿಗೆ ಬಂದು ಪುಟ್ಟ ಮನೆ ನಿರ್ಮಿಸಿಕೊಟ್ಟದ್ದನ್ನು ಹೇಳಿಕೊಂಡರು. ಇದನ್ನು ಆಲಿಸಿದ ಗೋವಾದ ಎರಡು ಮೂರು ಜನ ಪ್ರವಾಸಿಗರು, ರಾಮಚಂದ್ರ ಅವರಿಗೆ ತಮ್ಮಿಂದ ಆದ ನೆರವು ಮಾಡಿದರು. ಅಲ್ಲದೇ ರಾಮಚಂದ್ರ ಹಾಗೂ ಅವರ ವಯೋವೃದ್ಧ ತಾಯಿಯ ಕಷ್ಟ ವಿವರಿಸಿ, ನೆರವಿಗೆ ಬರುವಂತೆ ಸೋಶಿಯಲ್ ಮೀಡಿಯಾದಲ್ಲಿ ವಿನಂತಿಸಿದರು.

ಚರ್ಚ್‌, ಮಸೀದಿ, ದೇವಸ್ಥಾನಗಳಿಗೆ ಹಣಕಾಸು ನೆರವು, ದಾನ ನೀಡುವ ಬದಲು ಕಣ್ಣಿನ ದೃಷ್ಟಿದೋಷದ ನಡುವೆಯೂ ಛಲದಿಂದ ಬದುಕುವ ರಾಮಚಂದ್ರ ಶೆಟ್ಟಿ ಅವರಿಗೆ ನೆರವಾಗಿ ಎಂದು ಮನವಿ ಮಾಡಲಾಯಿತು. ತಕ್ಷಣ ವಿಳಾಸ, ಬ್ಯಾಂಕ್‌ ಆಕೌಂಟ್ ಪಡೆದ ಹೃದಯವಂತ ಜನರು ಆರ್ಥಿಕ ನೆರವು ನೀಡಿದ್ದಾರೆ.

ಹೀಗೆ ಹರಿದು ಬಂದ ಆರ್ಥಿಕ ನೆರವಿನಿಂದ ತಾಯಿಯ ಬ್ಯಾಕ್‌ ಬೋನ್‌ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ರಾಮಚಂದ್ರ ಶೆಟ್ಟಿ ಮುಂದಾಗಿದ್ದಾರೆ. ಅಲ್ಲದೇ ಗದಗ ನಗರದ ಕನ್ನಡ ವೈಶ್ಯ ವೆಲ್ಫೇರ್‌ ಟ್ರಸ್ಟ್‌ ಒಂದು ಲಕ್ಷ ರೂ. ದೇಣಿಗೆ ನೀಡಲು ಮುಂದೆ ಬಂದಿದೆ.

ವಾರದಲ್ಲಿ ಆರ್ಥಿಕ ನೆರವು ಮಾಡುವುದಾಗಿ ಟ್ರಸ್ಟ್‌ನ ಸದಸ್ಯರಾದ ದೀಪಕ್‌ ಶೆಟ್ಟಿ ಪ್ರಕಟಿಸಿದ್ದಾರೆ. ವ್ಯಾಪಾರಕ್ಕೆ ಅನುಕೂಲವಾಗುವಂತೆ ಶೆಡ್‌ವೊಂದು ಸಜ್ಜಾಗಿದ್ದು, ರಾಮಚಂದ್ರ ಅವರ ಮನೆಯ ಪಕ್ಕವೇ ಅದನ್ನು ಸ್ಥಾಪಿಸಲಾಗಿದೆ. ಸಣ್ಣ ಕಿರಾಣಿ ಅಂಗಡಿ ನಡೆಸುತ್ತಾ ಜೀವನ ಮಾಡುತ್ತಿದ್ದ ರಾಮಚಂದ್ರ ಶೆಟ್ಟಿ ಅವರು ನೆರವಾದ ಜನಗಳ ಹೃದಯದಲ್ಲಿ ದೇವರು ಕಂಡಿದ್ದಾನೆ. ಸಮಾಜದಲ್ಲಿ ಮಾನವೀಯತೆ ಬದುಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಗದಗ ಕನ್ನಡ ವೈಶ್ಯ ವೆಲ್ಫೇರ್‌ ಟ್ರಸ್ಟ್‌ ನಿಂದ 1ಲಕ್ಷ ರೂ. ನೆರವು

ಟಾಪ್ ನ್ಯೂಸ್

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ

12-mng

Neha ಹತ್ಯೆ ಪ್ರಕರಣ; ಎನ್‌ಐಎ ತನಿಖೆ; ಮಹಿಳೆಯರು ಕಿರುಕತ್ತಿ ಹೊಂದಲು ಅವಕಾಶ:ವಿಎಚ್‌ಪಿ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

6-

Bhatkal Theft: ನಗರ, ಗ್ರಾಮೀಣ ಪ್ರದೇಶದ ಹಲವೆಡೆ ಮುಂಜಾನೆ ಸರಣಿ ಕಳ್ಳತನ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.