ಫ್ರಾನ್ಸ್ ನಲ್ಲಿ ಚಿನ್ನ ಗೆದ್ದ ಪ್ರೇರಣಾಗೆ ಶಿರಸಿಯಲ್ಲಿ ನಾಗರಿಕ ಸಮ್ಮಾನ
ಈ ಸಾಧನೆಗೆ ತೃಪ್ತಿ ಪಡಬಾರದು, ಒಲಿಂಪಿಕ್ ಸಾಧನೆ ಆಗಬೇಕು: ಸ್ಪೀಕರ್ ಕಾಗೇರಿ
Team Udayavani, May 23, 2022, 6:52 PM IST
ಶಿರಸಿ: ಫ್ರಾನ್ಸ್ ದೇಶದ ನಾರ್ಮುಂಡಿಯಲ್ಲಿ ನಡೆದ ವಿಶ್ವ ಮಕ್ಕಳ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬಂಗಾರ ಪದಕ ವಿಜೇತ ಪ್ರೇರಣಾ ನಂದಕುಮಾರ ಶೇಟ್ ಗೆ ನಗರದ ಲಯನ್ಸ್ ಶಿಕ್ಷಣ ಸಂಸ್ಥೆಯಲ್ಲಿ ನಾಗರಿಕ ಸಮ್ಮಾನ ಮಾಡಲಾಯಿತು.
ನಾಗರಿಕ ಸಮ್ಮಾನ ನಡೆಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ, ಜಿಲ್ಲೆಯ ಹೆಮ್ಮೆ ಅಭಿಮಾನ ಪಡೆಯುವ ಸಾಧನೆ ಆಗುತ್ತಿದೆ. ಪ್ರೇರಣಾ ಸಾಧನೆ ಆ ಸಾಲಿನಲ್ಲಿ ಸೇರಿದೆ. ಈ ಸಾಧನೆಗೆ ತೃಪ್ತಿ ಪಡೆಯದೇ ಮುಂದೆ ಹೋಗಬೇಕು. ಒಲಿಂಪಿಕ್ ಸಾಧನೆ ಆಗಬೇಕು. ಸಂತೋಷ ಪಡಬೇಕು, ಆದರೆ ತೃಪ್ತಿ ಪಡಬಾರದು. ಗುರಿ ತಲುಪುವ ತನಕ ನಿರಂತರ ಮುನ್ನಡೆಯಬೇಕು. ಸರಕಾರದಿಂದ ಎರಡು ಲ.ರೂ. ಪ್ರೋತ್ಸಾಹ ಕೊಡಲಾಗುತ್ತದೆ. ಕಾಲೇಜಿನ ಓದಿನ ವೆಚ್ಚ ಕೂಡ ಭರಿಸುತ್ತದೆ. ಅಮೃತ ಕ್ರೀಡಾದತ್ತು ಯೋಜನೆಯಲ್ಲಿ ಒಲಿಂಪಿಕ್ ಸಿದ್ದತೆಗೆ 75 ಕ್ರೀಡಾಳುಗಳಲ್ಲಿ ಪ್ರೇರಣಾಳನ್ನೂ ಆಯ್ಕೆ ಮಾಡಲಾಗುತ್ತದೆ ಎಂದರು.
ಲಯನ್ ರವಿ ಹೂವಿನಮನೆ, ಸಾಧನೆ ಮಾಡುವದರ ಜೊತೆ ನಿರಂತರ ಉಳಿಸಿಕೊಳ್ಳುವ ಕಾರ್ಯ ಕೂಡ ಆಗಬೇಕು ಎಂದರು.ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್ ವಿಜಿ ಭಟ್ ಮಾತನಾಡಿ, ಪ್ರೇರಣಾ ರಾಷ್ಟ್ರದ ಕೀರ್ತಿ ಬೆಳಗಲಿ ಎಂದರು.
ಡಿವೈಎಸ್ಪಿ ರವಿ ನಾಯಕ, ಬಿಇಓ ಎಂ.ಎಸ್.ಹೆಗಡೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಲಯನ್ಸ್ ಅಧ್ಯಕ್ಷ ಉದಯ ಸ್ವಾದಿ, ಲಯನ್ಸ್ ಗೌರವಾಧ್ಯಕ್ಷ ರವಿ ನಾಯಕ, ನಂದಕುಮಾರ ಶೇಟ್, ಸ್ವಾತಿ ಶೇಟ್, ಗುರುರಾಜ ಹೆಗಡೆ, ಮನಿಷ್ ಇತರರು ಇದ್ದರು.
ಸೀತಾ ಭಟ್ಟ ಸನ್ಮಾನ ಪತ್ರ ವಾಚಿಸಿದರು. ಮುಖ್ಯಾಧ್ಯಾಪಕ ಶಶಾಂಕ ಹೆಗಡೆ ಸ್ವಾಗತಿಸಿದರು. ವಿ.ಎಂ.ಭಟ್ಟ ನಿರ್ವಹಿಸಿದರು. ವಿನಯ ಬಸವನಕಟ್ಟೆ ವಂದಿಸಿದರು. ನಗರದ ಪ್ರಮುಖ ಸಂಘಟನೆಗಳು ಚಿನ್ನದ ಹುಡುಗಿಯನ್ನು ಅಭಿನಂದಿಸಿದರು. ಫ್ರಾನ್ಸ್ ನಿಂದ ಶಿರಸಿಗೆ ಆಗಮಿಸಿದ ಪ್ರೇರಣಾಳನ್ನು ನಿಲೆಕಣಿಯಿಂದ ಮೆರವಣಿಗೆಯಲ್ಲಿ ಬರ ಮಾಡಿಕೊಳ್ಳಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ