ಪರಮಾನತ್ಮನ ಸಾಕ್ಷಾತ್ಕಾರದಿಂದ ಮನುಷ್ಯ ಜನ್ಮಕ್ಕೆ ಧನ್ಯತಾ ಭಾವ: ಸ್ವರ್ಣವಲ್ಲೀ ಶ್ರೀ

ಬನವಾಸಿ, ತವನಂದಿ, ಬದನಗೋಡು ಸೀಮಾ ಶಿಷ್ಯರು ಚಾತುರ್ಮಾಸ್ಯ ಸೇವೆ

Team Udayavani, Jul 6, 2023, 7:31 PM IST

1-asdasdasd

ಶಿರಸಿ: ಮನುಷ್ಯನಾದವನಿಗೆ ಅವನ ಇಡೀ ಜೀವತ ಅವಧಿಯ ಬಗ್ಗೆ ಧನ್ಯತಾ ಭಾವ ಬರಬೇಕು. ಅದು ಬರುವದು ಪರಮಾತ್ಮನಲ್ಲಿ ಭಕ್ತಿ ಇಟ್ಟಾಗ ಹಾಗೂ ಅದು ಬೆಳೆದು ಬೆಳೆದು ಪರಮಾತ್ಮನ ಸಾಕ್ಷಾತ್ಕಾರ ಆದಾಗ. ಆಗ ಧನ್ಯತಾ ಭಾವ ಬರುತ್ತದೆ ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ನುಡಿದರು.

ಅವರು ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆಸುತ್ತಿರುವ 33 ನೇ ಚಾತುರ್ಮಾಸ್ಯ ವೃತಾಚರಣೆಯ ಹಿನ್ನಲೆಯಲ್ಲಿ ಗುರುವಾರ ತಾಲೂಕಿನ ಬನವಾಸಿ, ತವನಂದಿ ಹಾಗೂ ಬದನಗೋಡು ಭಾಗದ ಶಿಷ್ಯರು ಸಲ್ಲಿಸಿದ ಸೇವೆ, ಭಿಕ್ಷೆ ಸ್ವೀಕರಿಸಿ ಆಶೀರ್ವಚನ ನುಡಿದರು.

ಪ್ರತಿಯೊಬ್ಬರಿಗೂ ಜೀವನದಲ್ಲಿ ಧನ್ಯತೆ ಪಡೆಯಬೇಕು. ಸಾರ್ಥಕತೆ, ಕೃತಜ್ಞತೆ ಪಡೆಯಬೇಕು ಎಂಬುದು ಇರುತ್ತದೆ. ಎಲ್ಲರೂ ಇದನ್ನು ಅಪೇಕ್ಷೆ ಪಡುತ್ತಾರೆ. ಧನ್ಯತೆ ಎಂದರೆ ಏನು? ಮಾಡಬೇಕಾದ ಕೆಲಸವನ್ನು ಮಾಡಿ ಮುಗಿಸಿದಾಗ ಈ ಭಾವ ಬರುತ್ತದೆ. ಮನುಷ್ಯುನಾಗಿ ಹುಟ್ಟಿ ಮಾಡಬೇಕಾದ ಕೆಲಸ ಮಾಡಿದಾಗ ಏನು ಆತ್ಮ ಸಂತೋಷ, ಸಂತೃಪ್ತಿ ಸಿಗುತ್ತದೋ ಅದೇ ಅದೇ ಧನ್ಯುತೆ. ಕರ್ತವ್ಯ ಪೂರ್ಣವಾಗಿ ಮುಗಿಸಿದಾಗ ಸಂತೋಷ ಆಗುತ್ತದೆ. ಅದೇ ಧನ್ಯತೆ ಎಂದರು.

ಮದ್ಯಮ ವರ್ಗದಲ್ಲಿ ಮಗಳ ಮದುವೆ ಆದಾಗ, ಮನೆ ಕಟ್ಟಿ ಮುಗಿದಾಗ ಈ ಭಾವ ಸಹಜವಾಗಿ ಅಲ್ಲಲ್ಲಿ ಬರುತ್ತದೆ. ಆದರೆ, ನಾಔಉ ಹೇಳುವದು ಇಷ್ಟೇ ಅಲ್ಲ, ಇನ್ನೂ ಮುಂದೆ ಹೋಗಿ ಮನುಷ್ಯನಾಗಿ ಹುಟ್ಟಿದ್ದು ಸಾರ್ಥಕತೆ ಆಯಿತು ಎಂಬ ಭಾವನೆ ಬೇಕು. ಅದು ಪರಮಾತ್ಮನಲ್ಲಿನ ಭಕ್ತಿ, ಅದು ಬೆಳೆದಯು ಸಾಕ್ಷಾತ್ಕಾರ ಆದಾಗ ಧನ್ಯತೆ ಬರುತ್ತದೆ. ಆಗ ಆ ಭಾವ ಬರುತ್ತದೆ ಎಂದು ಹೇಳಿದರು.
ಪರಮಾಣತ್ಮನ ಕಡೆ ಭಕ್ತಿ ಬೆಳೆದು ಮನುಷ್ಯನಿಗೆ ಸಾಕ್ಷಾತ್ಕಾರ ಆದರೆ, ಮುಕ್ತಿಯ ದಾರಿ ತೆರೆದುಕೊಳ್ಳುತ್ತದೆ. ಸಂಸಾರದ ಬಂಧ ಕಳೆದು ಆನಂದ ಬರುತ್ತದೆ. ಆ ಧನ್ಯತೆ ಭಾವ ಪಡೆಯುವ ಪ್ರಯತ್ನದಲ್ಲಿ ನಿರತರಾಗಬೇಕು. ಆಗ ಮರಣದ ಭಯ ಇರುವದಿಲ್ಲ. ಅದನ್ನು ಪಡೆಯದೇ ಇದ್ದವರಿಗೆರ ಮರಣದ ಭಯ ಬರುತ್ತದೆ ಎಂದೂ ವಿಶ್ಲೇಷಿಸಿದದರು.

ಪರಿಪೂರ್ಣತೆ ಕೃತಜ್ಞತೆ ಇದ್ದರೆ, ಪರಮಾತ್ಮನ ಸಾಕ್ಷಾತ್ಕಾರ ಆದವರು ಮರಣವನ್ನು ದ್ವೇಷ ಮಾಡದೇ ಆತ್ಮೀಯರಂತೆ ಕಾಣುತ್ತಾನೆ. ಇದು ಬಹಳ ವಿಶೇಷ. ಅತಿಥಿಯಂತೆ ಮರಣವನ್ನು ಸ್ವಾಗತಿಸುತ್ತಾನೆ. ಹೆಚ್ಚಿನವರಿಗೆ ಪರಮಾತ್ಮನ ಸಾಕ್ಷಾತ್ಕಾರ ಇರದೇ ಇದ್ದರೆ ಹೆದರುತ್ತಾನೆ ಎಂದ ಶ್ರೀಗಳು ನಾನು ಶರೀರವಲ್ಲ, ಶರೀರದ ಒಳಗೆ ಇದ್ದವನು ಎಂಬ ಅರಿವಾಗುತ್ತದೆ. ಶರೀರಕ್ಕಿಂತ ಬೇರೆ ಎಂಬುದು ಗೊತ್ತಾಗುತ್ತದೆ. ಸಂಸಾರದ ಬಗ್ಗೆ ಮಮಕಾರ ಪ್ರೀತಿ ಇದ್ದರೆ ಆತ್ಮ ಶರೀರಕ್ಕೆ ಅಂಟಿಕೊಳ್ಳುತ್ತದೆ. ಆದರೆ, ನಾವು ಅಂಟಿಕೊಂಡು ಮರಣಕ್ಕೆ ಭಯ ಪಡುತ್ತೇವೆ ಎಂದೂ ಹೇಳಿದರು.
ಭಕ್ತಿ ಯೋಗ, ಕರ್ಮ ಯೋಗ, ರಾಜ ಯೋಗ ಮಾಡಬೇಕು. ಭಕ್ತಿಗಾಗಿ ಪೂಜೆ, ಜಪ ಮಾಡಬೇಕು. ಶಾಸ್ತ್ರೀಯ ಕರ್ಮ ಮಾಡಿ, ದೇವರಿಗೆ ಅರ್ಪಿಸಬೇಕು. ಆಸಾನ, ಪ್ರಾಣಾಯಾಮ ನಿತ್ಯವೂ ಅನುಷ್ಠಾನ ಮಾಡಬೇಕು ಎಂದರು.

ಇದಕ್ಕೂ ಮುನ್ನ ಆರ್.ಎಸ್.ಹೆಗಡೆ ಭೈರುಂಬೆ ಮಠದ ಕಾರ್ಯಚಟುವಟಿಕೆ ಮಾಹಿತಿ ನೀಡಿದರು.

ಬ್ರಾಹ್ಮೀ ಮುಹೂರ್ತದಲ್ಲಿ ಜಪ, ಧ್ಯಾನ, ದೇವರ ಪೂಜೆ, ಯೋಗಾಸನ ಎಲ್ಲ ಮಾಡಬೇಕು. ಈಚೆಗೆ ಈ ಸುಂದರ ಮನೆಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಅವು ಹೆಚ್ಚಳವಾಗಬೇಕು. -ಸ್ವರ್ಣವಲ್ಲೀ ಶ್ರೀ

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.