ನಾನು ಸಿಎಂ ಆದರೆ ರಾಜ್ಯದಲ್ಲಿ ಯುಪಿ ಮಾದರಿ ಆಡಳಿತ: ಯತ್ನಾಳ್
ದೇಶ ವಿರೋಧಿ ಕೆಲಸ ಮಾಡಿದರೆ ಡಿಶುಂ ಮಾಡ್ತೀನಿ
Team Udayavani, Apr 12, 2024, 8:20 PM IST
ಕಾರವಾರ: ನಾನು ಮುಖ್ಯಮಂತ್ರಿ ಆದರೆ ಯುಪಿ ಬುಲ್ಡೊಜರ್ ಮಾದರಿ ಕರ್ನಾಟಕಕ್ಕೆ ಬರಲಿದೆ. ಪಾಕಿಸ್ತಾನ ಜಿಂದಾಬಾದ್ ಅಂದವರ ಎನ್ಕೌಂಟರ್ ಆಗಲಿದೆ.
ಯುಪಿಯಲ್ಲಿ ಯೋಗೀಜಿ 7000 ದೇಶ ವಿರೋಧಿಗಳಿಗೆ ಜನ್ನತ್ ತೋರಿಸಿದ್ದಾರೆ. ಹಾಗೆಯೇ ಕರ್ನಾಟಕದಲ್ಲಿ ನಾನು ಮುಖ್ಯಮಂತ್ರಿ ಆದರೆ ಹಿಂದುತ್ವ, ಹಿಂದೂಗಳ ವಿರುದ್ಧ ಯಾರಾದರೂ ಮಾತಾಡಿದರೆ, ದೇಶ ವಿರೋಧಿ ಕೆಲಸ ಮಾಡಿದರೆ ಅವರನ್ನು ಡಿಶುಂ ಮಾಡ್ತೀನಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.
ಕೆನರಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಮೆರವಣಿಗೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ಪ್ರಸ್ತುತ ನಡೆಯುತ್ತಿರುವ ವಿಷಯಗಳ ಬಗ್ಗೆ ಖಾದರ್ವರೆಗೂ ಮಾತಾಡ್ತಿನಿ ಅಂದೆ. ಅದಕ್ಕೆ ಅವರು ನಾನು ಸೆಕ್ಯುಲರ್. ನನ್ನ ಏಕೆ ಸೇರಿಸಿಕೊಳ್ಳುತೀ¤ರಿ. ಪಾಕಿಸ್ತಾನ ಜಿಂದಾಬಾದ್ ಅನ್ನುವವರಿಗೆ ಎಷ್ಟಾದರೂ ಬೈಯಿರಿ ಎಂದರು. ಅದನ್ನೇ ನಾನು ಮಾಡಿದೆ. ನಾನು ಮಾತನಾಡಿದ ಎಲ್ಲ ಅಂಶಗಳು ವಿಧಾನಸಭಾ ಕಡತದಲ್ಲಿದೆ. ಆದರೆ ಈ ಕಾಂಗ್ರೆಸ್ ಸರಕಾರ ದೇಶದ್ರೋಹಿಗಳ ರಕ್ಷಣೆಗೆ ನಿಂತಿತು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಮನೆಗೆ ನುಗ್ಗಿ ಹೊಡೀತಾರೆ. ಅವರು ನಮ್ಮನ್ನು ಹೊಡೆದರೂ ಅವರನ್ನು ಪೊಲೀಸರು ಅರೆಸ್ಟ್ ಮಾಡದಂತ ಕಾನೂನನ್ನು ಕಾಂಗ್ರೆಸ್ ತರಲಿದೆ. ನಾನು ಕಟ್ಟಾ ಹಿಂದೂ ಲಿಂಗಾಯತನಾಗಿದ್ದು ನನ್ನ ಟಚ್ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ಹೀಗೆ ಪ್ರತಿಯೊಬ್ಬರು ಹಿಂದುತ್ವದ ವಿಚಾರದಲ್ಲಿ ಗಟ್ಟಿಯಾಗಿ ನಿಂತು ದೇಶದ್ರೋಹಿಗಳ ವಿರುದ್ಧ ಸಮರ ಸಾರಬೇಕು. ಬಿಜೆಪಿ ಅಧಿ ಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎಂದು ಕಾಂಗ್ರೆಸ್ನವರು ಗುಲ್ಲೆಬ್ಬಿಸುತ್ತಿದ್ದಾರೆ. ಇದನ್ನು ಯಾರೂ ನಂಬಬೇಡಿ. ಬಿಜೆಪಿ ಸಂವಿಧಾನ ಬದಲಿಸೋದಿಲ್ಲ. ಕಾಂಗ್ರೆಸ್ನವರಿಗೆ ಅಂಬೇಡ್ಕರ್, ಸಂವಿಧಾನದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ