ಅಂಕೋಲಾ: ಬಡ್ಡಿ ಸಾಲ ಕಿರುಕುಳ ವಿಷ ಸೇವಿಸಿ ವ್ಯಕ್ತಿ ಸಾವು
Team Udayavani, Jan 22, 2022, 8:03 PM IST
ಅಂಕೋಲಾ: ಬಡ್ಡಿ ಸಾಲ ನೀಡಿದವರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಪೂಜಗೇರಿಯಲ್ಲಿ ನಡೆದಿದೆ.
ಅಶೋಕ ಗೊಂಗಾ ಗಾಂವಕರ (44) ಮೃತಪಟ್ಟ ವ್ಯಕ್ತಿ,
ಲಕ್ಷ್ಮೇಶ್ವರದ ರಾಜು ನಾಯಕ ಬಳಿ ಬಡ್ಡಿಗೆ ಸಾಲ ಪಡೆದಿದ್ದ. ರಾಜು ನಾಯಕ ಮರಣದ ನಂತರ ಈತನ ಪತ್ನಿ ಮಂಜುಳಾ ರಾಮ ನಾಯಕ ಮತ್ತು ನಾಗರಾಜ ಅಂಕೋಲೆಕರ ಇವರು ಸಾಲ ವಸೂಲಾತಿಗಾಗಿ ಪೀಡಿಸುತ್ತಿದ್ದರು.
ಶುಕ್ರವಾರ ಸಂಜೆಯೂ ಮೃತನ ಮನೆಗೆ ಬಂದು ಬಡ್ಡಿ ಹಣವನ್ನು ಕೊಡದಿದ್ದರೆ ಅಂಕೋಲಾದಲ್ಲಿ ಓಡಾಡಲು ಬಿಡಿವದಿಲ್ಲ ಎಂಬಿತ್ಯಾದಿಯಾಗಿ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಕಿರುಕುಳಕ್ಕೆ ಬೇಸತ್ತು ಅಶೋಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಮೃತ ಅಶೋಕನ ಪತ್ನಿ ಉಷಾ ಅಶೋಕ ಗಾಂವಕರ ದೂರು ನೀಡಿದ್ದಾರೆ. ಪಿ.ಎಸ್.ಐ ಪ್ರೇಮನಗೌಡ ಪಾಟೀಲ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ