ಅಭಿವೃದ್ಧಿಗೆ ಅಡ್ಡಗಾಲಾದರೆ ಸುಮ್ಮನಿರಲ್ಲ

ಕಾನೂನು ಭಯ ಇದ್ದವರು ವರ್ಗವಾಗಿ ಹೋಗಲು ಅಧಿಕಾರಿಗಳಿಗೆ ಸಚಿವ ಹೆಬ್ಟಾರ್‌ ಖಡಕ್‌ ಎಚ್ಚರಿಕೆ

Team Udayavani, Feb 14, 2021, 4:43 PM IST

Minister shivaram hebbar

ಶಿರಸಿ: 125 ಕೋಟಿ ರೂ.ಗೆ ಮುಗಿಯಬೇಕಿದ್ದ ಅಂಕೋಲಾ ಹುಬ್ಬಳ್ಳಿ ರೈಲ್ವೆ ಈಗ 1400 ಕೋ. ರೂ. ಬೇಕಾಗುತ್ತದೆ. ಪರಿಸರದ ಹೆಸರಿನಲ್ಲಿ ಅಧಿಕಾರಿಗಳು, ಪರಿಸರವಾದಿಗಳು ಅಡ್ಡಗಾಲು ಹಾಕಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌ ಖಡಕ್‌ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಆತ್ಮನಿರ್ಭರ ಭಾರತ ಹಾಗೂ ಪ್ರಸಕ್ತ ವರ್ತಮಾನ ಕೇಂದ್ರ ಬಜೆಟ್‌ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಜಿಲ್ಲೆ. ಇಲ್ಲಿನ ಪ್ರವಾಸಿ ತಾಣಗಳಲ್ಲಿ ಮೂಲಭೂತ ಅಭಿವೃದ್ಧಿ ಆಗಬೇಕು. ಇಲ್ಲಿನ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿ ಆಗಬೇಕು. ಪರಿಸರದ ಹೆಸರಿನಲ್ಲಿ ಇವುಗಳ ಅಭಿವೃದ್ಧಿಗೆ ಹಿನ್ನಡೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಸಾಗರಮಾಲಾ ಯೋಜನೆಗೂ, ಕುಮಟಾ ಹೆದ್ದಾರಿಗೂ, ಬಂದರಿನ ಅಭಿವೃದ್ಧಿಗೂ ತೊಡಕಾದರೆ ಹೇಗೆ? ಅರಣ್ಯ ಅಧಿಕಾರಿಗಳೂ ಪರಿಸರದ ಹೆಸರಿನಲ್ಲಿ ಜನರಿಗೆ, ಅಭಿವೃದ್ಧಿಗೆ ತೊಂದರೆ ಮಾಡಿದರೆ ಆಗದು. ಕಾನೂನಿನ ಭಯ ಇದ್ದವರು ಇಲ್ಲಿ ಇರಬೇಕು ಎಂದೂ ಇಲ್ಲ. ವರ್ಗಾವಣೆ ಮಾಡಿಕೊಳ್ಳಬಹುದು ಎಂದರು.

1978ನೇ ಇಸವಿಗಿಂತ ಮೊದಲೇ ಅತಿಕ್ರಮಣ ಮಾಡಿಕೊಂಡವರ ಸ್ಥಳದ ಡಿನೋಟಿಫಿಕೇಶನ್‌ ಆಗಿದೆ. ಇಲಾಖೆ ಅದನ್ನು ಕಾಗದ ಪತ್ರದಲ್ಲಿ ಮಾಡಿಕೊಳ್ಳದೇ ಹೋದರೆ ಜನ ಹೊಣೆಗಾರರಲ್ಲ. ಅರಣ್ಯವನ್ನು ಉಳಿದ ಜಿಲ್ಲೆಗಳಿಗಿಂತ 10 ಪಟ್ಟು ಹೆಚ್ಚು ಉಳಿಸಿದ್ದೇವೆ, ಬೆಳಸಿದ್ದೇವೆ. ಅಧಿ ಕಾರಿಗಳಿಂದ, ಪರಿಸರ ವಾದಿಗಳಿಂದ ಅರಣ್ಯ ಉಳಿಸುವ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದೂ ವಾಗ್ಧಾಳಿ ಮಾಡಿದರು.

ದಾಂಡೇಲಿ, ಜೋಯಿಡಾ ಭಾಗದಲ್ಲಿ ಪರಿಸರದ ಕಾರಣದಿಂದ ತಡೆ ಹಿಡಿಯಲಾಗಿದ್ದ 32 ಕಾಮಗಾರಿಗಳಲ್ಲಿ ಕೇವಲ 9 ಪ್ರಕರಣ ಬಾಕಿ ಇದೆ. ಅದರ ಕುರಿತೂ ಅಧಿಕಾರಿಗಳ ಜೊತೆ ಮಾತನಾಡುತ್ತೇವೆ ಎಂದ ಹೆಬ್ಟಾರ್‌, ಕಸ್ತೂರಿ ರಂಗನ್‌ ವರದಿ ಕೂಡ ತಿರಸ್ಕಾರ ಮಾಡಿದ್ದೇವೆ. ಕೇಂದ್ರಕ್ಕೂ ರಾಜ್ಯ ಸರಕಾರ ತಿಳಿಸಿದೆ. ವರದಿಯೇ ಅವೈಜ್ಞಾನಿವಾಗಿದೆ. ಗೋವಾಕ್ಕೆ, ಕರ್ನಾಟಕಕ್ಕೆ, ಮಹಾರಾಷ್ಟ್ರಕ್ಕೆ ಒಂದೊಂದು ವರದಿ ಕೊಟ್ಟಿದೆ. ಪಶ್ಚಿಮ ಘಟ್ಟವನ್ನು ವಿಭಾಗಿಸಿ ನೋಡುವ ಕೆಲಸ ಯಾಕೆ ಮಾಡಬೇಕು? ಎಂದು ಕೇಳಿದರು.

ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ಎಷ್ಟೂ ಕಾಮಗಾರಿ ತರಬಹುದು. ಕುಮಟಾ, ಗೋಕರ್ಣ, ಪಾಳಾ, ದಾಸನಕೊಪ್ಪ, ಬನವಾಸಿ, ಕುಮಟಾ ಅಳವೆಕೋಡಿ, ಶಿರಾಲಿ, ಮಂಕಿ ಸೇರಿದಂತೆ ಹಲವೆಡೆ ಅನೇಕ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸರಕಾರದ ಮುಂದೆ ಪ್ರಸ್ತಾವನೆ ಇದೆ. ಜಿಲ್ಲೆಯ ಪ್ರವಾಸಿ ತಾಣಗಳ ಆಕರ್ಷಣೆಗೆ ನೇವಿ ವಿಮಾನ ನಿಲ್ದಾಣ ನಾಗರಿಕ ವಿಮಾನ ನಿಲ್ದಾಣವಾಗುತ್ತದೆ. ಅಲ್ಲಿ ಜಾಗ ಬಿಟ್ಟುಕೊಟ್ಟ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವರಿಗೆ ಪರಿಹಾರ ಕೂಡ ಕೇಂದ್ರ ಸರಕಾರದ ನೂತನ ಮಾನದಂಡದಂತೆ ಒದಗಿಸಲಾಗುತ್ತದೆ ಎಂದರು.

ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಕುರಿತು ಎಲ್ಲ ಶಾಸಕರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಮುಂದುವರಿಯುತ್ತೇವೆ. ಈಗಲೇ ಏನೂ ಹೇಳುವುದಿಲ್ಲ. ಮೊನ್ನೆ ಕಂದಾಯ ಸಚಿವರು 18 ಶಾಸಕರು ಇರುವ ಬೆಳಗಾವಿಯನ್ನೇ ವಿಭಾಗಿಸಲು ಆಗಿಲ್ಲ ಎಂದೂ ಹೇಳಿದ್ದಾರೆ. ನಾನೂ ಚರ್ಚೆ ಮಾಡಿ ತಿಳಿಸುವೆ. ಅದು ಪûಾತೀತವಾಗಿ ಚರ್ಚೆ ಆಗಬೇಕಾದ್ದು ಎಂದ ಹೆಬ್ಟಾರ್‌, ಕೇಂದ್ರ ಸರಕಾರದ ಬಜೆಟ್‌ ಶ್ಲಾಘಿಸಿ, ರಾಜ್ಯದಲ್ಲೂ ರೈತ ಪರ ಬಜೆಟ್‌ ಬರಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ ಅವರು ವಿಶ್ವದ ಮಾರುಕಟ್ಟೆಗೆ ಭಾರತ ಒಯ್ಯಬೇಕಾದ ಸಿದ್ಧತೆ ಮಾಡಿದ್ದಾರೆ. ರೈತರ ಆರ್ಥಿಕತೆ ಎತ್ತರಿಸುವ ಬಜೆಟ್‌ ಕೂಡ ಇದಾಗಿದೆ. ಆರೋಗ್ಯ, ವಿದ್ಯುತ್‌, ರಾಷ್ಟ್ರಯ ಹೆದ್ದಾರಿ, ರೈಲ್ವೆಗೂ ಆದ್ಯತೆ ಇದೆ. ಕೇಂದ್ರ ರಾಜ್ಯ ಸರಕಾರಗಳು ರೈತ ವಿರೋಧಿಯಲ್ಲ. ಅವರಿಗೆ ಅನುಕೂಲ ಆಗುವ ಕೆಲಸವನ್ನೇ ಸರಕಾರ ಮಾಡುತ್ತಿವೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಜೆಟ್‌ ಕೂಡ ಅನ್ನದಾತನನ್ನ ಎತ್ತಿ ಹಿಡಿಯುವ ಹಾಗೂ ಸ್ವಾಭಿಮಾನಿ ರಾಜ್ಯ, ದೇಶ, ಸ್ವಾಭಿಮಾನಿ ರೈತ ಕುರಿತಾದ ಬಜೆಟ್‌ ಆಗಲಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ಧಿ, ನಿಕಟಪೂರ್ವ ಅಧ್ಯಕ್ಷ ಕೆ.ಜಿ. ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಮಾಧ್ಯಮ ವಕ್ತಾರ ನಾಗರಾಜ್‌ ನಾಯ್ಕ, ಸಹ ವಕ್ತಾರ ಸದಾನಂದ ಭಟ್ಟ, ಡಾನಿ ಡಿಸೋಜಾ, ಆರ್‌.ಡಿ. ಹೆಗಡೆ, ಚಂದ್ರು ಎಸಳೆ ಇತರರು ಇದ್ದರು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.