ಇಂಗ್ಲಿಷ್ ಶಿಕ್ಷಕಿ ವರ್ಗಾವಣೆಗೆ ವಿರೋಧ
10-15 ವರ್ಷದಿಂದ ಇದ್ದವರನ್ನು ಬಿಟ್ಟು ಎರಡು ವರ್ಷವಾದವರನ್ನು ವರ್ಗಾಯಿಸಿದ್ದೇಕೆ?
Team Udayavani, Jun 4, 2019, 12:45 PM IST
ಅಂಕೋಲಾ: ಶಿಕ್ಷಕಿ ವರ್ಗಾವಣೆ ವಿರೋಧಿಸಿ ಹೊನ್ನಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಅಂಕೋಲಾ: ತಾಲೂಕಿನ ಅಗಸೂರಿನ ಹೊನ್ನಳ್ಳಿ ಹಿ.ಪ್ರಾ. ಶಾಲೆಯ ಇಂಗ್ಲಿಷ ಶಿಕ್ಷಕಿಯನ್ನು ಹೆಚ್ಚುವರಿಗೊಳಿಸಿ, ವರ್ಗಾವಣೆ ಮಾಡಿದನ್ನು ಖಂಡಿಸಿ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಅಗಸೂರು ಗ್ರಾಪಂ ಸದಸ್ಯ ಗೋಪು ನಾಯಕ ಅಡ್ಲೂರು ಮಾತನಾಡಿ, ಈ ಶಾಲೆಯಲ್ಲಿ 10-15 ವರ್ಷಗಳಿಂದ ಮುಕ್ಕಾಂ ಹೂಡಿರುವ ಶಿಕ್ಷಕರನ್ನು ವರ್ಗಾವಣೆಗೊಳಿಸದೇ, ಕಳೆದೆರಡು ವರ್ಷಗಳಿಂದ ಇಂಗ್ಲಿಷ ಶಿಕ್ಷಕಿಯಾಗಿ ಬಂದ ಸೃಜನಾ ಬೀರಣ್ಣ ನಾಯಕರನ್ನು ವರ್ಗಾವಣೆಗೊಳಿಸಿ ಇಲ್ಲಿಯ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಶಿಕ್ಷಣ ಇಲಾಖೆ ಆಟ ಆಡಲು ಹೊರಟಿರುವುದು ಖಂಡನೀಯ. ಈ ಶಿಕ್ಷಕಿ ಶಾಲೆಗೆ ಸೇವೆಗೆ ಬಂದಾಗಿನಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟವು ಸಹ ಹೆಚ್ಚಾಗಿದೆ. ಆದರೆ ಇದೇ ಶಿಕ್ಷಕಿ ಗುರಿಯಾಗಿಸಿಟ್ಟುಕೊಂಡು ವರ್ಗಾವಣೆಗೊಳಿಸಿರುವುದು ಸರಿಯಲ್ಲ. ಈ ಬಗ್ಗೆ ಶಾಸಕರು, ಡಿಡಿಪಿಐ ಅವರು ಲಕ್ಷ್ಯವಹಿಸಿ ಶಿಕ್ಷಕಿಯ ಸೇವೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಅಗಸೂರು ಗ್ರಾಪಂ ಉಪಾಧ್ಯಕ್ಷ ಯಶ್ವಂತ ತಿಮ್ಮಾ ಗೌಡ ಮಾತನಾಡಿ, ಎಲ್ಲಡೆ ಆಂಗ್ಲ ಮಾಧ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲಾಗುತ್ತಿದೆ. ಆದರೆ ಇಲ್ಲಿರುವ ಒಬ್ಬ ಇಂಗ್ಲಿಷ ಶಿಕ್ಷಕಿಯನ್ನು ವರ್ಗಾವಣೆಗೊಳಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಇಲಾಖೆ ಕೊಡಲಿ ಏಟು ನೀಡುತ್ತಿದೆ. ಈ ಶಿಕ್ಷಕಿಯ ಸೇವೆಯನ್ನು ಮುಂದುವರೆಸದೆ ಇದ್ದಲ್ಲಿ ಮಕ್ಕಳ ಶಾಲೆಗೆ ಕಳುಹಿಸದೇ ಪ್ರತಿಭಟನೆ ನಡೆಸಲಾಗುವುದು. ಕೂಡಲೇ ಈ ಬಗ್ಗೆ ಶಿಕ್ಷಣಾಧಿಕಾರಿಗಳು ಸಭೆ ನಡೆಸಿ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಆಗ್ರಹಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಪಾಂಡುರಂಗ ಬುದ್ದು ಗೌಡ ಮಾತನಾಡಿ ಶಿಕ್ಷಕಿಯ ವರ್ಗಾವಣೆಯನ್ನು ರದ್ದುಗೊಳಿಸಿ ಇದೇ ಶಾಲೆಯಲ್ಲಿ ಮುಂದುವರಿಸವಂತಾಗಬೇಕು. ಇಲ್ಲದಿದ್ದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿದರು.
ಎಸ್ಡಿಎಂಸಿ ಉಪಾಧ್ಯಕ್ಷೆ ಪ್ರಭಾವತಿ ಗೌಡ, ಪ್ರಮುಖರಾದ ರತ್ನಾ ಬುದ್ದು ಗೌಡ, ಗಿರೀಶ ಗೌಡ, ಕುಸಮಾ ಗೌಡ, ಆನಂದು ಗೌಡ, ಗಂಗಾಧರ ಗೌಡ, ಚಂದ್ರು ಗೌಡ, ಬುದ್ದು ಗೌಡ, ಮಂಗು ಗೌಡ, ಸುಮನಾ ಗೌಡ, ನಾಗವೇಣಿ ಗೌಡ, ಶಂಕ್ರವ್ವ ಫರ್ನಾಂಡಿಸ್, ಮಂಗು ಗೌಡ, ಈಶ್ವರ ಗೌಡ, ರುಕ್ಕು ಗೌಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಬಿಇಒ ಮೊಬೈಲ್ ಸ್ವಿಚ್ ಆಫ್:
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?