ಉದ್ಯೋಗಾವಕಾಶಕ್ಕೆ ಆಗ್ರಹಿಸಿ ಪ್ರತಿಭಟನೆ
Team Udayavani, Nov 13, 2019, 2:57 PM IST
ಜೋಯಿಡಾ: ತಾಲೂಕಾ ಕೇಂದ್ರದಲ್ಲಿನ ಪ್ರಮುಖ ಕಚೇರಿಗಳಲ್ಲಿ ಗುತ್ತಿಗೆ ಆಧಾರಿತ ಉದ್ಯೋಗದಲ್ಲಿ ಬೇರೆ ತಾಲೂಕಿನ ಯುವಕರ ಬದಲಿಗೆ ನಮ್ಮ ತಾಲೂಕಿನ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡುವ ಮೂಲಕ ಕೆಲಸಕ್ಕಾಗಿ ಗೂಳೆ ಹೋಗುವುದನ್ನು ತಪ್ಪಿಸಬೇಕೆಂದು ತಾಲೂಕು ಯುವ ಒಕ್ಕೂಟ ತಹಶೀಲ್ದಾರರಿಗೆ ಮನವಿ ನೀಡಿ ಆಗ್ರಹಿಸಿದ್ದು, ಇದಕ್ಕೆ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
ಜೋಯಿಡಾ ತಾಲೂಕು ಕೇಂದ್ರದ ವಿವಿಧ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ದಾಂಡೇಲಿ, ಕಾರವಾರ, ಹಳಿಯಾಳಗಳಿಂದ ಯುವಕ, ಯುವತಿಯರು ಬರುತ್ತಿದ್ದಾರೆ. ಆದರೆ ತಾಲೂಕಿನ ನಿರುದ್ಯೋಗಿ ಯುವಕರಿಗೆ ಅವಕಾಶ ಇಲ್ಲದಂತಾಗಿ ಗೋವಾ, ಬೆಂಗಳೂರು, ಮಹಾರಾಷ್ಟ್ರ ಮುಂತಾದೆಡೆ ಗೂಳೆಹೋಗವ ಪರಿಸ್ಥಿತಿ ಎದುರಾಗಿದೆ.
ಇದು ತಾಲೂಕಿನ ಯುವಕರಿಗೆ ತಾಲೂಕಿನ ಅಧಿಕಾರಿಗಳು ಮಾಹಿತಿ ನೀಡದೆ ಗುತ್ತಿಗೆ ಸಂಸ್ಥೆಗಳಿಂದ ಬೇರೆ ಬೇರೆ ತಾಲೂಕಿನ ಯುವಕರಿಗೆ ಗುತ್ತಿಗೆ ಆಧಾರದಿಂದ ನೇಮಿಸಿಕೊಳ್ಳುವ ಪರಿಣಾಮದಿಂದಾಗಿದೆ ಎಂದು ಯುವ ಒಕ್ಕೂಟ ಆಪಾದಿಸಿದೆ. ಹೊರ ತಾಲೂಕಿನ ಯುವಕರಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗಕ್ಕೆ ಅವಕಾಶ ನೀಡುವ
ಪೂರ್ವದಲ್ಲಿ ತಾಲೂಕಿನ ಯುವಕರಿಗೆ ಮೊದಲ ಆದ್ಯತೆ ನೀಡುವ ಮೂಲಕ ತಾಲೂಕಿನ ಸುಶಿಕ್ಷಿತ ಯುವಕರಿಗೆ ಉದ್ಯೋಗ ಹೊಂದಲು ಅವಕಾಶ ನೀಡಬೇಕೆಂದು ಯುವ ಒಕ್ಕೂಟ ಆಗ್ರಹಿಸಿದ್ದು, ಇಲ್ಲದೆ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಯುವ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ನಾಯ್ಕ, ತುಳಸಿದಾಸ ವೇಳಿಪ, ಸೂರಜ ನಾಯ್ಕ, ಉಮೇಶ ಗಾವಡಾ, ಅರ್ಜುನ ಗಾವಡಾ, ಕಿರಣ ಬಾಂದೇಕರ್ ಮತ್ತಿರರು ಎಚ್ಚರಿಕೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?