ಪುರುಷಾರ್ಥಗಳು ಭಾರತೀಯ ಜೀವನ ಮೌಲ್ಯಗಳು: ಸ್ವರ್ಣವಲ್ಲೀ ಶ್ರೀ


Team Udayavani, Jul 30, 2022, 10:08 PM IST

1-saddasd

ಶಿರಸಿ: ವೈದಿಕ ವಾಙ್ಮಯದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನ್ನು ಹೇಳಿದ್ದಾರೆ. ಇವು ಭಾರತೀಯ ಜೀವನ ಮೌಲ್ಯಗಳಾಗಿವೆ ಎಂದು ಸೋಂದಾ ಶ್ರೀ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ನುಡಿದರು.

ಅವರು ಅವರ 32 ನೇ ಚಾತುರ್ಮಾಸ್ಯದ ಸಂದರ್ಭದಲ್ಲಿ ಶಿರಸಿ ಸೀಮೆಯ ಒಳಭಾಗಿ ಮತ್ತು ಬೆಟ್ಟಳ್ಳಿಭಾಗಿಯ ಶಿಷ್ಯ ಭಕ್ತರು ಸಮರ್ಪಿಸಿದ ಭಿಕ್ಷೆ, ಪಾದಪೂಜೆ ಸೇವೆಗಳನ್ನು ಸ್ವೀಕರಿಸಿ ಸಭೆಯಲ್ಲಿ ಆಶೀರ್ವಚನ‌ ನುಡಿದರು.

ಧರ್ಮ, ಅರ್ಥ, ಕಾಮ, ಮೋಕ್ಷ ನಾಲ್ಕು ಪುರುಷಾರ್ಥಗಳು. ಅಂದರೆ ಮನುಷ್ಯನಿಂದ ಬಯಸಲ್ಪಡುವವುಗಳು, ಸಾಧಿಸಬೇಕಾದವುಗಳಾಗಿವೆ. ಧಾರ್ಮಿಕ ಯಜ್ಞ, ಯಾಗ, ಪೂಜೆ, ತೀರ್ಥ ಕ್ಷೇತ್ರಗಳ ದರ್ಶನ, ದಾನ ಮಾಡುವುದೇ ಮೊದಲಾದವುಗಳು ಧರ್ಮ ಎಂಬ ಪುರುಷಾರ್ಥದಲ್ಲಿ ಸೇರುತ್ತವೆ. ಕೃಷಿ, ಪಶುಪಾಲನೆ, ವ್ಯಾಪಾರ ಇತ್ಯಾದಿಗಳ ಮೂಲಕ ಸಂಪತ್ತಿನ ಸಂಪಾದನೆ ಅರ್ಥ ಎಂಬ ಪುರುಷಾರ್ಥದಲ್ಲಿ ಸೇರುತ್ತದೆ ಎಂದ ಶ್ರೀಗಳು, ಕಾಮ ಎಂದರೆ ಶಾರೀರಿಕ ಸುಖ, ಇಂದ್ರಿಯ ಸಂಬಂಧಿಸಿದ ಆಸೆಗಳನ್ನು ಪೂರೈಸುವುದು. ವಿವಾಹ ಮೊದಲಾದ ಸಂಸ್ಕಾರಗಳಿಂದ ಪಡೆದುಕೊಳ್ಳುವವುಗಳು. ಇವು ಧರ್ಮ ಸಮ್ಮತವಾಗಿರಬೇಕು. ಮೋಕ್ಷ ವೆಂದರೆ ಸಂಸಾರ ಚಕ್ರದಿಂದ ಬಿಡುಗಡೆ ಬಯಸುವುದು. ಸದಾ ಅಧ್ಯಾತ್ಮ ಚಿಂತನೆಗಳಿಂದ ಸಿದ್ಧಿಸಿಕೋಳ್ಳಬೇಕಾಗುತ್ತದೆ. ಇವುಗಳನ್ನು ತ್ರಿಕಾಲ ಜ್ಞಾನಿಗಳಾದ ಋಷಿಮುನಿಗಳು ನಮಗೆ ತಿಳಿಸಿದ್ದಾರೆ. ಇವು ನಮ್ಮ ಭಾರತೀಯ ಜೀವನದ ಮೌಲ್ಯಗಳು ಎಂದರು.

ಬದುಕನ್ನು ಸರಿಯಾಗಿ ರೂಪಿಸುವ ಸೂತ್ರಗಳೇ ಮೌಲ್ಯಗಳು. ಪ್ರತಿಯೊಬ್ಬ ವ್ಯಕ್ತಿಯೂ ಈ ಪುರುಷಾರ್ಥಗಳ ಚೌಕಟ್ಟಿನಲ್ಲಿ ಮುನ್ನಡೆದರೆ ಜೀವನ ಉತ್ತಮವಾಗುತ್ತದೆ. ಸುಗಮವಾಗುತ್ತದೆ. ಕೊನೆಯಲ್ಲಿ ಮೋಕ್ಷ ಲಭಿಸುತ್ತದೆ. ಚೌಕಟ್ಟು ಎಂದರೆ ನಾಲ್ಕು ಮೂಲೆಯಲ್ಲಿ ಕಟ್ಟಿದ ಕಟ್ಟುಗಳು. ನಮ್ಮ ಜೀವನ ನಾಲ್ಕು ಪುರುಷಾರ್ಥ ಗಳೆಂಬ ಸೂತ್ರಗಳಿಂದ ಕಟ್ಟಲ್ಪಟ್ಟಿದೆ. ಅದು ಯಾವುದೇ ಮೂಲೆಯಲ್ಲಿ ಕಳಚಿದರೂ ಹಾನಿ ಖಚಿತ ಎಂದರು.

ಇವತ್ತು ಸಮಾಜ ಯಾವುದು ಸುಲಭವಾಗಿ ಸಿಗುವುದೋ ಅದನ್ನು ವಿಚಾರ ಮಾಡದೆ ಸ್ವೀಕರಿಸುತ್ತದೆ. ಆದರೆ ಅದನ್ನು ಸ್ವೀಕರಿಸುವಾಗ ಅದು ನಮ್ಮ ಚೌಕಟ್ಟು ಮೀರಿದ್ದೋ ಅಥವಾ ಅದರೊಳಗೇ ಇರುವಂತಹದ್ದೋ ಹಾಗೂ ನಮಗೆ ಸಾಧಕವೋ, ಬಾಧಕವೋ ಯೋಚಿಸಬೇಕು ಎಂದರು.

ನಾಲ್ಕು ಪುರುಷಾರ್ಥಗಳಲ್ಲಿ ಅರ್ಥ, ಕಾಮಗಳಲ್ಲಿ ಮನುಷ್ಯನಿಗೆ ಒಲವು ಹೆಚ್ಚು. ಆದರೆ ಅವು ಧರ್ಮದ ಎಲ್ಲೆಯನ್ನು ಮೀರಬಾರದು. ಹಾಗೆಯೇ ಮೋಕ್ಷಕ್ಕೆ ಸಹಕಾರಿ ಆಗಿರಬೇಕು. ಹಾಗಾಗಿಯೇ ಇವೆರಡೂ ಧರ್ಮ ಮತ್ತು ಮೋಕ್ಷಗಳ ಮಧ್ಯದಲ್ಲಿವೆ ಎಂದೂ ಹೇಳಿದರು.

ನಮಗೆ ಹಾಕಿಕೊಟ್ಟ ಈ ಪುರುಷಾರ್ಥವೆಂಬ ಚೌಕಟ್ಟು ಹಿರಿಯರು ತಮ್ಮ ಅನುಭವದಿಂದ ಕಂಡು ಹೇಳಿದ್ದು. ಅದನ್ನು ನಾವು ಮೀರಕೂಡದು. ಅದಕ್ಕೆ ಸೂಕ್ತವಲ್ಲದ್ದನ್ನು ನಾವು ಆದರಿಸಬಾರದು ಎಂದು ಶ್ರೀಗಳು ತಿಳಿಸಿದರು.

ಟಾಪ್ ನ್ಯೂಸ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

‘ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್​ ಸಿಂಗ್​ ನಾಪತ್ತೆ… ಮೊಬೈಲ್ ಸ್ವಿಚ್ ಆಫ್

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Desi Swara: ಹೊನ್ನುಡಿ- ಕಲಿಯುವ ಮನೋಭಾವ ಮುಖ್ಯ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.