ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ
24 ತಾಸು ವಿದ್ಯುತ್ ಉತ್ಪಾದನೆ ,2019ರಲ್ಲಿ ಎರಡು ಸಲ ಕ್ರಸ್ಟ್ಗೇಟ್ ತೆರೆದ ದಾಖಲೆ
Team Udayavani, Aug 5, 2019, 10:53 AM IST
ಗೋಕರ್ಣ: ಮೂಡಂಗಿ, ಹೊಸ್ಕಟ್ಟಾ ಭಾಗಗಳಲ್ಲಿ ಕೆರೆ ತುಂಬಿದೆ.
ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮಳೆ ಅರ್ಭಟ ಜೋರಾಗಿದೆ. ವಿವಿಧೆಡೆ ಕಡಲ್ಕೊರೆತ ಮುಂದುವರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಕದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ರವಿವಾರ ಸಂಜೆ 4.30ರಿಂದ ಐದು ಕ್ರಸ್ಟ್ಗೇಟ್ಗಳನ್ನು ತೆಗೆದು ನೀರು ಹೊರ ಬಿಡಲಾಗಿದೆ.
ಸತತ ಮಳೆಯ ಕಾರಣ ಕ್ರಸ್ಟ್ ಗೇಟ್ನಿಂದ 5.30ರ ನಂತರವೂ ನೀರು ನದಿಗೆ ಹರಿದಿತ್ತು. ಜಲಾಶಯದಿಂದ ನೀರು ಬಿಟ್ಟ ಸೊಬಗು ನೋಡಲು ಕದ್ರಾ ಮತ್ತು ಮಲ್ಲಾಪುರದ ಜನರು ಸುರಿವ ಮಳೆಯಲ್ಲೂ ಜಮಾಯಿಸಿದ್ದರು.
ಕಾಳಿ ನದಿ ದಡದ ಪಕ್ಕದ ಗ್ರಾಮಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಜನ ಜಾನುವಾರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಕದ್ರಾ ಜಲಾಶಯಕ್ಕೆ 38000 ಕ್ಯೂಸೆಕ್ ನೀರು ಹರಿದು ಬರತೊಡಗಿದೆ. ಜಲಾಶಯ 34.50 ಮೀಟರ್ ಎತ್ತರವಿದ್ದು, ಬೆಳಗಿನ ವೇಳೆಗೆ 33.70ರಷ್ಟು ಭರ್ತಿಯಾಗಿತ್ತು. ಮಳೆ ಮುಂದುವರಿದ ಕಾರಣ ಅದು ಸಂಜೆಗೆ 33.85 ತಲುಪುತ್ತಿದ್ದಂತೆ ಅಣೆಕಟ್ಟಿನ ನಾಲ್ಕು ಕ್ರಸ್ಟ್ಗೇಟ್ ತೆಗೆದು ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಯಿತು. ಜು. 11ರಂದು ಜಲಾಶಯ ಭರ್ತಿಯಾದ ಕಾರಣ ಎರಡು ತಾಸು ಸತತವಾಗಿ ನೀರನ್ನು ಹೊರಬಿಡಲಾಗಿತ್ತು. 2019ರಲ್ಲಿ ಕದ್ರಾ ಜಲಾಶಯದಿಂದ ನೀರನ್ನು ಹೊರ ಬಿಡುತ್ತಿರುವುದು ಇದು ಎರಡನೇ ಸಲವಾಗಿದೆ. ಕದ್ರಾದ ಮೂರು ವಿದ್ಯುತ್ ಉತ್ಪಾದನಾ ಘಟಕಗಳಿಂದ ಸತತ 24 ತಾಸು ವಿದ್ಯುತ್ ಉತ್ಪಾದಿಸಲಾಗುತ್ತಿದೆ.
ಕಾಳಿ ಕೊಳ್ಳದ ಜಲಾಶಯಗಳ ಮುಖ್ಯ ಎಂಜಿನಿಯರ್ ನಿಂಗಣ್ಣ, ಕದ್ರಾ ಜಲಾಶಯ ಭರ್ತಿಯಾಗಿದ್ದು, ಇದೇ ವರ್ಷ ಎರಡು ಸಲ ಕದ್ರಾ ಕ್ರಸ್ಟ್ ಗೇಟ್ನಿಂದ ನೀರು ಹೊರಬಿಡುತ್ತಿದ್ದೇವೆ. ಕೊಡಸಳ್ಳಿ ಜಲಾಶಯ ಸಹ ಭರ್ತಿಯಾಗುತ್ತಿದೆ. ಇದು ಉತ್ತಮ ಮಳೆಗೆ ಸಾಕ್ಷಿಯಾಗಿದೆ. ಸೂಪಾ ಜಲಾಶಯದ ಹಿನ್ನೀರಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಈ ಸಲವೂ ಸೂಪಾ ಜಲಾಶಯ ಭರ್ತಿಯಾಗುವ ಆಶಯವಿದೆ ಎಂದರು.
ಕಾರವಾರದ ಪಂಚರಿಶಿವಾಡ ಸೇರಿದಂತೆ ನ್ಯೂಕೆಎಚ್ಬಿ ಕಾಲೋನಿ, ದೇವಳಿವಾಡ, ಪದ್ಮನಾಭ ನಗರಗಳು ಜಲಾವೃತವಾಗಿದ್ದವು. ಯಾವುದೇ ಅನಾಹುತಗಳಾಗಿಲ್ಲ. ಕಾರವಾರದಲ್ಲಿ ಆಗಾಗ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದೆ. ರವಿವಾರದ ಸಂತೆಯಲ್ಲಿ ಮಾರಾಟಗಾರರು ಮಳೆಯಿಂದ ಪರದಾಡುವಂತಾಯಿತು. ಸುರಿವ ಮಳೆಯಲ್ಲೂ ಜನ ವ್ಯಾಪಾರದಲ್ಲಿ ತೊಡಗಿದ್ದರು. ಆಗಾಗ ವಿದ್ಯುತ್ ಸಹ ಕೈಕೊಡುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?
MUST WATCH
ಹೊಸ ಸೇರ್ಪಡೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್ಕಮ್ ಹೊಟೇಲ್ನಲ್ಲಿ ವ್ಯವಸ್ಥೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್