ಕರಾವಳಿಯಲ್ಲಿ ಮತ್ತೆ ಮಳೆ ಆರ್ಭಟ

24 ತಾಸು ವಿದ್ಯುತ್‌ ಉತ್ಪಾದನೆ ,2019ರಲ್ಲಿ ಎರಡು ಸಲ ಕ್ರಸ್ಟ್‌ಗೇಟ್ ತೆರೆದ ದಾಖಲೆ

Team Udayavani, Aug 5, 2019, 10:53 AM IST

uk-tdy-2

ಗೋಕರ್ಣ: ಮೂಡಂಗಿ, ಹೊಸ್ಕಟ್ಟಾ ಭಾಗಗಳಲ್ಲಿ ಕೆರೆ ತುಂಬಿದೆ.

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಮಳೆ ಅರ್ಭಟ ಜೋರಾಗಿದೆ. ವಿವಿಧೆಡೆ ಕಡಲ್ಕೊರೆತ ಮುಂದುವರಿದಿದೆ. ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದೆ. ಕದ್ರಾ ಜಲಾಶಯ ಭರ್ತಿಯಾಗಿದ್ದು, ಜಲಾಶಯದಿಂದ ರವಿವಾರ ಸಂಜೆ 4.30ರಿಂದ ಐದು ಕ್ರಸ್ಟ್‌ಗೇಟ್‌ಗಳನ್ನು ತೆಗೆದು ನೀರು ಹೊರ ಬಿಡಲಾಗಿದೆ.

ಸತತ ಮಳೆಯ ಕಾರಣ ಕ್ರಸ್ಟ್‌ ಗೇಟ್ನಿಂದ 5.30ರ ನಂತರವೂ ನೀರು ನದಿಗೆ ಹರಿದಿತ್ತು. ಜಲಾಶಯದಿಂದ ನೀರು ಬಿಟ್ಟ ಸೊಬಗು ನೋಡಲು ಕದ್ರಾ ಮತ್ತು ಮಲ್ಲಾಪುರದ ಜನರು ಸುರಿವ ಮಳೆಯಲ್ಲೂ ಜಮಾಯಿಸಿದ್ದರು.

ಕಾಳಿ ನದಿ ದಡದ ಪಕ್ಕದ ಗ್ರಾಮಗಳಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಜನ ಜಾನುವಾರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ. ಕದ್ರಾ ಜಲಾಶಯಕ್ಕೆ 38000 ಕ್ಯೂಸೆಕ್‌ ನೀರು ಹರಿದು ಬರತೊಡಗಿದೆ. ಜಲಾಶಯ 34.50 ಮೀಟರ್‌ ಎತ್ತರವಿದ್ದು, ಬೆಳಗಿನ ವೇಳೆಗೆ 33.70ರಷ್ಟು ಭರ್ತಿಯಾಗಿತ್ತು. ಮಳೆ ಮುಂದುವರಿದ ಕಾರಣ ಅದು ಸಂಜೆಗೆ 33.85 ತಲುಪುತ್ತಿದ್ದಂತೆ ಅಣೆಕಟ್ಟಿನ ನಾಲ್ಕು ಕ್ರಸ್ಟ್‌ಗೇಟ್ ತೆಗೆದು ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಯಿತು. ಜು. 11ರಂದು ಜಲಾಶಯ ಭರ್ತಿಯಾದ ಕಾರಣ ಎರಡು ತಾಸು ಸತತವಾಗಿ ನೀರನ್ನು ಹೊರಬಿಡಲಾಗಿತ್ತು. 2019ರಲ್ಲಿ ಕದ್ರಾ ಜಲಾಶಯದಿಂದ ನೀರನ್ನು ಹೊರ ಬಿಡುತ್ತಿರುವುದು ಇದು ಎರಡನೇ ಸಲವಾಗಿದೆ. ಕದ್ರಾದ ಮೂರು ವಿದ್ಯುತ್‌ ಉತ್ಪಾದನಾ ಘಟಕಗಳಿಂದ ಸತತ 24 ತಾಸು ವಿದ್ಯುತ್‌ ಉತ್ಪಾದಿಸಲಾಗುತ್ತಿದೆ.

ಕಾಳಿ ಕೊಳ್ಳದ ಜಲಾಶಯಗಳ ಮುಖ್ಯ ಎಂಜಿನಿಯರ್‌ ನಿಂಗಣ್ಣ, ಕದ್ರಾ ಜಲಾಶಯ ಭರ್ತಿಯಾಗಿದ್ದು, ಇದೇ ವರ್ಷ ಎರಡು ಸಲ ಕದ್ರಾ ಕ್ರಸ್ಟ್‌ ಗೇಟ್ನಿಂದ ನೀರು ಹೊರಬಿಡುತ್ತಿದ್ದೇವೆ. ಕೊಡಸಳ್ಳಿ ಜಲಾಶಯ ಸಹ ಭರ್ತಿಯಾಗುತ್ತಿದೆ. ಇದು ಉತ್ತಮ ಮಳೆಗೆ ಸಾಕ್ಷಿಯಾಗಿದೆ. ಸೂಪಾ ಜಲಾಶಯದ ಹಿನ್ನೀರಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದು, ಈ ಸಲವೂ ಸೂಪಾ ಜಲಾಶಯ ಭರ್ತಿಯಾಗುವ ಆಶಯವಿದೆ ಎಂದರು.

ಕಾರವಾರದ ಪಂಚರಿಶಿವಾಡ ಸೇರಿದಂತೆ ನ್ಯೂಕೆಎಚ್ಬಿ ಕಾಲೋನಿ, ದೇವಳಿವಾಡ, ಪದ್ಮನಾಭ ನಗರಗಳು ಜಲಾವೃತವಾಗಿದ್ದವು. ಯಾವುದೇ ಅನಾಹುತಗಳಾಗಿಲ್ಲ. ಕಾರವಾರದಲ್ಲಿ ಆಗಾಗ ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿದೆ. ರವಿವಾರದ ಸಂತೆಯಲ್ಲಿ ಮಾರಾಟಗಾರರು ಮಳೆಯಿಂದ ಪರದಾಡುವಂತಾಯಿತು. ಸುರಿವ ಮಳೆಯಲ್ಲೂ ಜನ ವ್ಯಾಪಾರದಲ್ಲಿ ತೊಡಗಿದ್ದರು. ಆಗಾಗ ವಿದ್ಯುತ್‌ ಸಹ ಕೈಕೊಡುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.

ತುಂಬಿ ಹರಿಯುತ್ತಿದೆ ಹಳ್ಳ-ಕೊಳ್ಳ:

ಕಳೆದ 10-12 ದಿನಗಳಿಂದ ತಾಲೂಕಿನಾದ್ಯಂತ ಹಾಗೂ ಗಡಿಭಾಗವಾದ ಖಾನಾಪುರ ಪ್ರದೇಶದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಬಹುತೇಕ ಎಲ್ಲ ಕೆರೆಗಳು ತುಂಬಿಕೊಂಡಿವೆ. ಅಲ್ಲದೇ ಹಳಿಯಾಳದ ಮಂಗಳವಾಡ ಮೂಲಕ ಹರಿದು ಹೋಗುವ ಹಳ್ಳ ಅನೇಕ ವರ್ಷಗಳ ಬಳಿಕ ಇದೀಗ ಸಂಪೂರ್ಣ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದೆ. ಮಂಗಳವಾಡದ ಹಳೆಯ ಸೇತುವೆ, ಬಾಂದಾರಗಳು ಸಂಪೂರ್ಣ ಪ್ರಮಾಣದಲ್ಲಿ ಮುಳುಗಡೆಯಾಗಿ ನೀರು ಭಾರೀ ಪ್ರಮಾಣದಲ್ಲಿ ಹರಿದು ಹೋಗುತ್ತಿದೆ.
ಗೋಕರ್ಣ: ತಗ್ಗು ಪ್ರದೇಶ ಜಲಾವೃತ: ಮಳೆ-ಗಾಳಿಯ ಆರ್ಭಟಕ್ಕೆ ಇಲ್ಲಿನ ಸುತ್ತಮುತ್ತಲಿನ ಮೂಡಂಗಿ, ಹೊಸ್ಕಟ್ಟಾ ಭಾಗಗಳಲ್ಲಿ ತಗ್ಗು ಪ್ರದೇಶ, ರಸ್ತೆ ಸೇರಿದಂತೆ ಕೆರೆ-ಕಟ್ಟೆಗಳೆಲ್ಲ ನೀರಿನಿಂದ ತುಂಬಿವೆ. ಸಮೀಪದ ಬಾವಿಕೊಡ್ಲ ಭಾಗಗಳಲ್ಲಿ ಸಮುದ್ರದ ಅಲೆಗಳು ಮುನ್ನುಗ್ಗಿ ಭೂಭಾಗವನ್ನು ಕಬಳಿಸುತ್ತಿವೆ. ಇದು ಈ ಭಾಗಗಳ ಜನರಿಗೆ ತೀವ್ರ ಆತಂಕವುಂಟು ಮಾಡಿವೆ. ಕಂದಾಯ ಇಲಾಖೆ ಅಧಿಕಾರಿಗಳು ಈ ಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಭಾಗಗಳ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.