ಶಂಕರ ಹೊಂಡಕ್ಕೆ ಪುನಶ್ಚೇತನ ಕಾರ್ಯ

•ನಗರಸಭೆಗೆ ಸೆಡ್ಡು: ಕುಸಿದು ಬಿದ್ದ ಗೋಡೆ ಮತ್ತೆ ನಿರ್ಮಿಸಿದ ಜೀವಜಲ ಕಾರ್ಯಪಡೆ!

Team Udayavani, Jul 13, 2019, 11:47 AM IST

uk-tdy-2..

ಶಿರಸಿ: ಪವಿತ್ರ ಅಘನಾಶಿನಿ ನದಿಯ ಉಗಮ ಸ್ಥಳ ಶಂಕರ ಹೊಂಡ ಗಲೀಜನ್ನು ನೋಡಲಾರದೇ ಅದರ ಅಭಿವೃದ್ಧಿಗೆ ಟೊಂಕ ಕಟ್ಟಿದ್ದ ಇಲ್ಲಿನ ಜೀವಜಲ ಕಾರ್ಯಪಡೆ ಕುಸಿದು ಬಿದ್ದಿದ್ದ ಗೋಡೆಯನ್ನೂ ಪುನಃ ನಿರ್ಮಾಣ ಮಾಡಿದೆ.

ಕಳೆದೆರಡು ವರ್ಷಗಳ ಹಿಂದೆ ನಗರಸಭೆ ಬಳಿ ಶಂಕರ ಹೊಂಡಕ್ಕೆ ಏನಾದರೂ ಮಾಡಿ, ಅಭಿವೃದ್ಧಿ ಮಾಡಿ ಎಂದು ಜೀವಜಲ ಕಾರ್ಯಪಡೆ ಮನವಿ ಮಾಡಿದಾಗ ನಮ್ಮ ಬಳಿ ಇದು ಆಗದು ಎಂದು ಕೈಚೆಲ್ಲಿತ್ತು. ಅಲ್ಲದೇ ಕಾರ್ಯಪಡೆಗೆ ಪತ್ರವನ್ನೂ ಕೊಟ್ಟಿತ್ತು.

ಅಲ್ಲಿಂದ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರರ ನೇತೃತ್ವದಲ್ಲಿ ಶಂಕರ ಹೊಂಡದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿತ್ತು. ಕೊಳಚೆ ಗುಂಡಿಯಂತಾಗಿದ್ದ ಪವಿತ್ರ ಶಂಕರ ಹೊಂಡ ಅಭಿವೃದ್ಧಿಗೆ ಪಣ ತೊಟ್ಟಿತು. ಹೊಂಡದ ಹೂಳೆತ್ತಿಸಿ ಸ್ವಚ್ಛಗೊಳಿಸಿ ಸುತ್ತಲಿನ ಸ್ನಾನಗೃಹ, ಶೌಚಗೃಹ ನಿರ್ಮಾಣ ಮಾಡಿ ಮಾರಿಕಾಂಬಾ ದೇವಿ ಜಾತ್ರೆಗೆ ಬರುವ ಪ್ರವಾಸಿಗರಿಗೆ ಅನುಕೂಲ ಮಾಡಿಕೊಟ್ಟಿತ್ತು. ರೋಟರಿ ನೆರವಿನಿಂದ ವ್ಯಾಯಾಮ ಅಂಗಳ, ಕಾರ್ಯಪಡೆಯಿಂದ ದೋಣಿ ವಿಹಾರ, ಈಚೆಗೆ ಚೆಂದದ ಕಾರಂಜಿಯನ್ನೂ ನಿರ್ಮಿಸಿತ್ತು.

ಜೀವಜಲ ಕಾರ್ಯಪಡೆ ಕಾರ್ಯಕ್ಕೆ ಶ್ಲಾಘನೆ ಕೂಡ ವ್ಯಕ್ತವಾಗಿದೆ. ಶಂಕರ ಹೊಂಡ ಮಾದರಿಯಲ್ಲಿ ಹಲವಡೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತವು. ಮಂತ್ರಾಲಯದ ಸ್ವಾಮೀಜಿ ವೀಕ್ಷಿಸಿ ತಮ್ಮಲ್ಲೂ ಇದೇ ಮಾದರಿಗೆ ಮುಂದಾಗುವ ಇಂಗಿತ ವ್ಯಕ್ತಪಡಿಸಿದ್ದರು.

ಅಘನಾಶಿನಿ ನದಿಯ ಮೂಲಕ್ಕೂ ಶೋಭೆ ಬಂದಿತ್ತು. ಸಂಜೆ ಬೆಳಗ್ಗೆ ವಾಕಿಂಗ್‌ ಪಾಯಂಟ್ ಕೂಡ ಆಯಿತು.

ಇಷ್ಟಾದ ಬಳಿಕ ಇದರ ನಿರ್ವಹಣೆಗೆ ಸ್ವತಃ ಜನರನ್ನು ಕೊಡಿ ಎಂದು ನಗರಸಭೆಗೆ ಕೇಳಿದಾಗ ಕಾನೂನು ತೊಡಕಿನ ಪ್ರಶ್ನೆ ಇಟ್ಟರು. ಕಾರ್ಯಪಡೆ ಸಿಬಂದಿಗಳನ್ನೂ ನೇಮಕ ಮಾಡಿ ನಡೆಸುತ್ತಿದೆ.

ಈ ಎಲ್ಲ ವಿದ್ಯಮಾನಗಳ ಜೊತೆಗೆ ಕಳೆದ ವರ್ಷದ ಆಗಸ್ಟ್‌ನಲ್ಲಿ ಜಯನಗರದ ಕಡೆ ತೆರಳುವ ರಸ್ತೆ ಪಕ್ಕದ ಗೋಡೆ ಕುಸಿದು ಬಿದ್ದಿತ್ತು. ಇದನ್ನು ದುರಸ್ತಿ ಮಾಡುವಂತೆ ಸ್ವತಃ ಶ್ರೀನಿವಾಸ ಹೆಬ್ಟಾರರ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತೆ ಅಶ್ವಿ‌ನಿ ಅವರಲ್ಲಿ ಮನವಿ ಮಾಡಿಕೊಂಡರು. ನಗರಸಭೆ ಸದಸ್ಯರಿಗೆ ಅಧಿಕಾರವಿಲ್ಲ, ಪೌರಾಯುಕ್ತರಲ್ಲಿ ಕೇಳಿದರೆ ಹಣವಿಲ್ಲ ಎಂಬ ಉತ್ತರ ಬಂತು. ಮತ್ತೆ ಕುಸಿದು ಬಿದ್ದಿದ್ದ ಸುಮಾರು 75 ಅಡಿ ಉದ್ದನೆಯ ಹತ್ತಾರು ಅಡಿ ಎತ್ತರದ ಗೋಡೆ ನಿರ್ಮಾಣ ಕಾರ್ಯಪಡೆ ಹೆಗಲಿಗೆ ಬಿತ್ತು.

ಮಳೆಗಾಲದ ಬಳಿಕ ಸತತ ಕಾರ್ಯ ಮಾಡಿಸಿ ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, 75 ಅಡಿ ಉದ್ದನೆಯ ಗೋಡೆ ಮತ್ತೆ ಸದೃಢವಾಗಿ ಎದ್ದು ನಿಂತಿದೆ. ಸುಮಾರು 7 ಲ.ರೂ. ಗಳಷ್ಟು ಖರ್ಚು ಹೆಚ್ಚುವರಿಯಾಗಿ ಕಾರ್ಯಪಡೆಗೆ ಬಿದ್ದಿದೆ. ಇನ್ನೂ ಗ್ರಿಲ್ಸ್, ಪ್ಲೇವರ್ಸ ಅಳವಡಿಕೆ ಕೂಡ ಮಾಡುವದಿದೆ ಎನ್ನುತ್ತಾರೆ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ.

 

•ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.