Sirsi: ಬಾವಿಗೆ ಬಿದ್ದು ಮೃತಪಟ್ಟ ಚಿರತೆ
Team Udayavani, Feb 25, 2024, 5:54 PM IST
ಶಿರಸಿ: ತಾಲೂಕಿನ ಹುಲೇಕಲ್ ಅರಣ್ಯ ವಲಯದ ಸಾಲ್ಕಣಿ ಗ್ರಾಮದ ತೋಟದ ಬಾವಿಯಲ್ಲಿ ಆಕಸ್ಮಿಕವಾಗಿ ಚಿರತೆಯೊಂದು ಬಿದ್ದು ಮೃತಪಟ್ಟಿದೆ.
ಸಾಲ್ಕಣಿ ಗ್ರಾಮದ ರಾಮಚಂದ್ರ ಗಣಪತಿ ಹೆಗಡೆ ಎಂಬುವವರಿಗೆ ಸೇರಿದ ಮಾಲ್ಕಿ ಜಮೀನಿನಲ್ಲಿರುವ ತೋಟದ ಬಾವಿಯಲ್ಲಿ ಸುಮಾರು 3 ವರ್ಷದ ಚಿರತೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಮಾರ್ಗದರ್ಶನದಲ್ಲಿ ಬಾವಿಯಿಂದ ಚಿರತೆ ಹೊರ ತೆಗೆಯಲಾಯಿತು. ಜಾನ್ಮನೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಜಿ.ಪ್ರಕಾಶ ಸಮ್ಮುಖದಲ್ಲಿ ಭೈರುಂಬೆ ಪಶು ವೈದ್ಯಾಧಿಕಾರಿ ಡಾ.ಪ್ರಶಾಂತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದರು.
ಈ ಸಂದರ್ಭದಲ್ಲಿ ಹುಲೇಕಲ್ ಆರ್ಎಫ್ಓ ಉಷಾ ಕಬ್ಬೇರ, ಉಪ ವಲಯಾರಣ್ಯಾಧಿಕಾರಿ ರವಿ.ಎಸ್, ಗಸ್ತು ಅರಣ್ಯ ಪಾಲಕರಾದ ವೀರಣ್ಣ ಯಲಿಗಾರ, ಸಂತೋಷ ಕುಮಾರ.ಆರ್, ಗ್ರಾಪಂ ಸದಸ್ಯರಾದ ಟಿ.ಎಂ.ಹೆಗೆಡೆ ಕಡಬಾಳ, ಗಜಾನನ ನಾಯ್ಕ ಸಾಲ್ಕಣಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’