Sirsi ರೈತನ ಮಗಳಿಗೆ ಪಿಎಚ್.ಡಿ ಜತೆ ಬಂಗಾರದ ಪದಕ
Team Udayavani, Jun 12, 2023, 8:14 PM IST
ಶಿರಸಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ 36ನೇ ಘಟಿಕೋತ್ಸವದಲ್ಲಿ ತಾಲೂಕಿನ ಕಾನಗೋಡಿನ ಪ್ರಗತಿಪರ ರೈತ ದಂಪತಿಗಳ ಮಗಳು ಪಿಎಚ್. ಡಿ ಜತೆ ಬಂಗಾರ ಪದಕ ಪಡೆದುಕೊಂಡಿದ್ದಾರೆ.
ರಮೇಶ ಹೆಗಡೆ ಹಾಗೂ ರಾಧಾ ಹೆಗಡೆ ದಂಪತಿಯ ಪುತ್ರಿ ಪ್ರಿಯಾ ಹೆಗಡೆ ಅವರು ಜೋಯಿಡಾದ ಕುಣಬಿ ಜನಾಂಗ ಮತ್ತು ಅಂಕೋಲಾದ ಹಾಲಕ್ಕಿ ಜನಾಂಗದ ಆರೋಗ್ಯ ಹಾಗೂ ಪೋಷಕಾಂಶಗಳ (Health, Nutrition) ವಿಷಯದ ಮೇಲೆ ಪ್ರಬಂಧ ಮಂಡಿಸಿದ್ದರು.ಅವರ ಮಹಾ ಪ್ರಬಂಧಕ್ಕೆ ಮಾರ್ಗದರ್ಶಕರಾಗಿ ಡಾ. ವಿನೂತಾ ಉಮೇಶ ಮುಕ್ತಾಮಠ ಸಹಕಾರ ಮಾಡಿದ್ದರು. ಬಿಎಸ್ ಸಿ, ಎಂಎಸ್ಸಿ ಪದವಿ ಪಡೆದ ಪ್ರಿಯಾ ಪಿಎಚ್. ಡಿ ಪದವಿಯನ್ನುರಾಜ್ಯಪಾಲರಿಂದ ಸ್ವೀಕರಿಸಿದರು. ಇವರ ಸಹೋದರಿ ಪ್ರೀತಿ ಹೆಗಡೆ 2017-18ರಲ್ಲಿ ಎಂಎಸ್ ಸಿ ಓದುವಾಗ ಬಂಗಾರದ ಪದಕ ಕೂಡ ಪಡೆದಿದ್ದು ಉಲ್ಲೇಖನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ