ವಿಷದ ಬಾಟಲಿ ಹಿಡಿದು ಆತ್ಮ ಹತ್ಯೆ ಬೆದರಿಕೆ
Team Udayavani, Dec 14, 2019, 2:41 PM IST
ಮುಂಡಗೊಡ: ನಾವು ವಾಸವಿರುವ ಸ್ವಂತ ಜಾಗವನ್ನು ಆಕ್ರಮಿಸಿಕೊಂಡು ಸಾರ್ವಜನಿಕ ರಸ್ತೆ ನಿರ್ಮಾಣ ಮಾಡಲು ಹೊರಟಿದ್ದು, ನಮ್ಮನ್ನು ಬೀದಿಪಾಲು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಚನ್ನವೀರಯ್ಯ ಕೂಡಲಮಠ ಎಂಬುವರು ಕುಟುಂಬ ಸಮೇತ ಕೈಯಲ್ಲಿ ವಿಷದ ಬಾಟಲಿ ಹಿಡಿದುಕೊಂಡು ನಿಂತ ಘಟನೆ ಶುಕ್ರವಾರ ಪಪಂ ಎದುರು ನಡೆಯಿತು.
ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಬೃಂದಾವನ ಬಡಾವಣೆಗೆ ತೆರಳಲು ಆರೇಳು ವರ್ಷಗಳಿಂದ ರಸ್ತೆಯಿಲ್ಲ. ಬಡಾವಣೆ ಎದುರಿಗೆ ನಮ್ಮ ಹಕ್ಕಿನಲ್ಲಿರುವ 1.12ಗುಂಟೆ ಜಾಗೆ ಅತಿಕ್ರಮಿಸಿಕೊಂಡು ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ. ಈ ಬಗ್ಗೆ ಪ.ಪಂ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಸಹ ನಮಗೆ ಸ್ಪಂಸುತ್ತಿಲ್ಲ. ಅಧಿಕಾರಿಗಳು ಸಹ ಬಡಾವಣೆ ಮಾಲೀಕನ ಪರವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ನಮಗೆ ಜಾಗ ಖಾಲಿ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದು ಹಿಂಸೆ ನೀಡುತ್ತಿದ್ದಾರೆ. ನಮಗೆ ವಾಸಿಸಲು ಈ ಜಾಗ ಹೊರತುಪಡಿಸಿ ಬೇರೆ ಯಾವುದೇ ನೆಲೆಯಿಲ್ಲ. ಹಾಗಾಗಿ ಈ ಜಾಗವೇನಾದರು ಆಕ್ರಮಿಸಿಕೊಂಡು ರಸ್ತೆ ಮಾಡಿದರೆ ನಾವು ಕುಟುಂಬ ಸಮೇತರಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಅಧಿಕಾರಿಗಳೆ ನೇರ ಹೊಣೆಗಾರರು ಎಂದರು.
ನಮಗೆ ನ್ಯಾಯ ಕೊಡಿ ಎಂದು ಚನ್ನವೀರಯ್ಯ ಕೂಡಲಮಠ ಕುಟುಂಬದವರು ಪಪಂಗೆ ಮನವಿ ನೀಡಿದರು. ಈ ಕುರಿತು ಹಿರಿಯ ಅಧಿಕಾರಿಗಳು ಪರಿಶೀಲಿಸಿ ನಮಗೆ ನ್ಯಾಯ ಒದಗಿಸಿ ಕೋಡಬೇಕು. ಇಲ್ಲದಿದ್ದರೆ ಪಪಂ ಎದುರು ಕುಟುಂಬ ಸಹಿತ ವಿಷಸೇವಿಸಿ ಆತ್ಮಹತ್ಯೆ ಮಾಡಿಕೋಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ಚನ್ನವೀರಯ್ಯ ಹಾಗೂ ಅವರ ಪತ್ನಿ ನಿರ್ಮಲಾ, ಶಿವಯೋಗಿ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ