SSLC Result ಪೇಟೆಲಿದ್ದೂ ಹಳ್ಳಿ ಶಾಲೆಯಿಂದ ರ್ಯಾಂಕ್ ಪಡೆದ ಹುಡುಗಿ!
ಸಾಹಿತ್ಯಾಸಕ್ತ ಹುಡುಗನಿಗೆ 621 ಅಂಕ!
Team Udayavani, May 8, 2023, 10:28 PM IST
ಶಿರಸಿ: ವಾಸ್ತವ್ಯ ಪೇಟೆಯಲ್ಲಿ, ಆದರೆ, ಹೈಸ್ಕೂಲ್ಗೆ ಹೋಗುವದು ಹಳ್ಳಿಗೆ! ಯಾವುದೇ ಟ್ಯೂಶನಗೂ ಹೋಗದೇ ರಾಜ್ಯಕ್ಕೆ ಮೂರನೇ ರ್ಯಾಂಕ್ ಪಡೆದು ವಿದ್ಯಾರ್ಥಿನಿ ಸೌಜನ್ಯ ವಿನಾಯಕ ಹೆಗಡೆ ದಾಖಲೆ ಮಾಡಿದ್ದಾಳೆ. ಹಳ್ಳಿ ಮಕ್ಕಳು ಶಿಕ್ಷಣಕ್ಕಾಗಿ ಪೇಟೆಗೆ ತೆರಳಿದರೆ ಈಕೆ ಕುಳವೆ ಬರೂರು ಜನತಾ ವಿದ್ಯಾಲಯಕ್ಕೆ ತೆರಳಿ ಈ ಸಾಧನೆ ಮಾಡಿದ್ದಾಳೆ.
625ಕ್ಕೆ 623 ಅಂಕ ಪಡೆದ ಈಕೆ ವಿನಾಯಕ ಹೆಗಡೆ ಗುಬ್ಬಿಗದ್ದೆ, ಪ್ರಿಯಲಕ್ಷ್ಮೀ ಅವರ ಪುತ್ರಿ. ಕನ್ನಡ 125, ಸಂಸ್ಕೃತ, ಗಣಿತ, ವಿಜ್ಞಾನದಲ್ಲಿ ಶೇ.100 ಅಂಕ ಪಡೆದು ಸಾಧನೆ ಮಾಡಿದ್ದಾಳೆ, ನಿರಂತರ ಓದು, ಶಿಕ್ಷಕರ ಪ್ರೋತ್ಸಾಹ ಈ ಸಾಧನೆಗೆ ಕಾರಣ ಎನ್ನುತ್ತಾಳೆ ಸೌಜನ್ಯ. ರಾಜ್ಯಕ್ಕೆ ಮೂರನೇ ರ್ಯಾಂಕ್, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಸಾಹಿತ್ಯಾಸಕ್ತ ಹುಡುಗನಿಗೆ 621 ಅಂಕ!
ಇದೇ ಪ್ರೌಢ ಶಾಲೆಯ ಯುವ ಕವಿ ದರ್ಶನ ಜಯಂತ ಭಟ್ಟ 625 ಕ್ಕೆ 621 ಅಂಕ ಪೆದು ಸಾಧನೆ
ಮಾಡಿದ್ದಾನೆ. ದರ್ಶನಗೆ ಕನ್ನಡಕ್ಕೆ ೧೨೫, ಗಣಿತಕ್ಕೆ ೧೦೦, ಸಮಾಜ ವಿಜ್ಷಾಣಕ್ಕೆ 100 ಅಂಕ ಪಡೆದಿದ್ದಾನೆ. ದರ್ಶನ್ ಹೆಗಡೆ ರಾಜ್ಯಕ್ಕೆ ಐದನೇ ರ್ಯಾಂಕ್ ಪಡೆದಿದ್ದಾನೆ. ಪ್ರಗತಿ ಪರ ಕೃಷಿಕ ಕಬಗಾರಿನ ಜಯಂತ ಭಟ್ಟ ಅವರ ಪುತ್ರ ದರ್ಶನ್ ಈ ಸಾಧನೆ ಮಾಡಿದ್ದು, ಹಳ್ಳಿ ಹುಡುಗನೊಬ್ಬ, ಹಳ್ಳಿ ಶಾಲೆಯ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಾಗುವಂತೆ ಆಗಿದ್ದಾನೆ. ದಿನಕರ ದೇಸಾಯಿ ಕನಸಿನ ಜನತಾ ವಿದ್ಯಾಲಯದಲ್ಲಿ ಇಬ್ಬರು ರಾಜ್ಯ ಮಟ್ಟದ ರ್ಯಾಂಕ್ ಪಡೆದಿದ್ದುದು ವಿಶೇಷವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !