ಕಾರವಾರ ತೀರದಲ್ಲಿ ಕಡಲ್ಕೊರೆತ ಭೀತಿ

ಒಂದು ಕಿಮೀ ಉದ್ದಕ್ಕೂ ಕೊರೆತ ಶುರು­ರಾಕ್‌ ಗಾರ್ಡನ್‌ ಮತ್ತಿತರೆಡೆ ಹಾನಿಯಾಗುವ ಸಂಭವ

Team Udayavani, Jun 28, 2021, 7:50 PM IST

27kwr01a

ಕಾರವಾರ: ಇಲ್ಲಿನ ಅರಬ್ಬೀ ಸಮುದ್ರ ತೀರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು ಒಂದು ಕಿ.ಮೀ. ಉದ್ದಕ್ಕೆ ಅಲ್ಲಲ್ಲಿ ಕಡಲ್ಕೊರೆತ ಉಂಟಾಗಿದೆ. ನಗರದ ಟಾಗೋರ್‌ ಕಡಲ ತೀರದ ಅಜ್ವಿ ಹೋಟೆಲ್‌ ಹಿಂದಿನ ಕಡಲತೀರ, ಹನುಮಾನ್‌ ಪ್ರತಿಮೆ ಸನಿಹದ ಕಡಲು ಹಾಗೂ ದಿವೇಕರ್‌ ಕಾಲೇಜಿನ ಹಿಂಭಾಗ, ರಾಕ್‌ ಗಾರ್ಡನ್‌ ಹಿಂಭಾಗದ ಹತ್ತಿರ ತೀವ್ರ ಕಡಲ ಕೊರೆತ ಕಾಣಿಸಿಕೊಂಡಿದೆ.

ಮಳೆಗಾಲದಲ್ಲಿ ಕಡಲ್ಕೊರೆತ ಸಾಮಾನ್ಯವಾಗಿದ್ದು, ಈ ವರ್ಷ ಕಡಲ ಅಬ್ಬರಕ್ಕೆ ಹಲವು ಗಾಳಿ ಮರಗಳು ಹಾಗೂ ನೆರಳು ಗೋಪುರಗಳು ದಂಡೆಗೆ ಉರುಳಿವೆ. ಟಾಗೋರ್‌ ಕಡಲತೀರದಿಂದ ಹಿಡಿದು ಅಳ್ವೆವಾಡದ ದಿವೇಕರ್‌ ಕಾಲೇಜಿನ ಹಿಂಬದಿವರೆಗೂ ಕಡಲ್ಕೊರೆತ ಹೆಚ್ಚಾಗಿದ್ದರಿಂದ ವಿಪರೀತ ಮರಳಿನ ಸವಕಳಿ ಉಂಟಾಗಿದೆ. ಇದೇ ಪ್ರದೇಶದಲ್ಲಿರುವ ರಾಕ್‌ ಗಾರ್ಡನ್‌ ಹಾಗೂ ಅಜ್ವಿ ಹೊಟೇಲ್‌ ಹಿಂಭಾಗದಲ್ಲಿ ಸಮುದ್ರದ ಅಬ್ಬರ ಜೋರಾಗಿದ್ದರಿಂದ ಅಲ್ಲಿನ ಕಾಂಪೌಂಡ್‌ ಗೋಡೆ ಕುಸಿದು ಹಾನಿಗೊಳಗಾಗಿದೆ. ಕಳೆದ ಎರಡು ಮೂರು ವರ್ಷಗಳಿಂದಲೂ ರಾಕ್‌ ಗಾರ್ಡ್‌ನ್‌ ಕಾಂಪೌಂಡ್‌ವರೆಗೆ ಕಡಲ ಕೊರೆತ ಉಂಟಾಗಿದ್ದರಿಂದ ಈ ವರ್ಷ ಮತ್ತಷ್ಟು ಕಲ್ಲಿನ ತಡೆಗೋಡೆ ಹಾಕಲಾಗಿತ್ತು. ಆದರೆ ಈ ವರ್ಷವೂ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದರಿಂದ ರಾಕ್‌ ಗಾರ್ಡನ್‌ ಕಂಪೌಂಡ್‌ ವರೆಗೆ ಅಲೆಗಳು ಅಬ್ಬರಿಸುತ್ತಿದೆ.

ರಾಕ್‌ ಗಾರ್ಡನ್‌ಗೆ ಸಮುದ್ರ ಕೊರೆತದಿಂದಾಗಿ ಹಾನಿಯಾಗುವ ಸಂಭವ ಹೆಚ್ಚಾಗಿದೆ. ಕಾರವಾರ ತಾಲೂಕಿನ ಅಲಿಗದ್ದಾ, ಮಾಜಾಳಿ, ದೇವಬಾಗ, ನಗರದ ಮಕ್ಕಳ ಉದ್ಯಾನವನದ ಬಳಿ, ಚಾಪೆಲ್‌ ವಾರ್‌ಶಿಪ್‌ ಮ್ಯೂಸಿಯಂ ಸೇರಿದಂತೆ ಹಲವೆಡೆ ಕಡಲ್ಕೊರೆತ ಆರಂಭಗೊಂಡಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರಕ್ಕೆ ಮರಳು ಕೊಚ್ಚಿ ಹೋಗಿ ಕೊರೆತ ಉಂಟಾಗುತ್ತಿದೆ. ಇಲ್ಲಿನ ಹನುಮಾನ ಮೂರ್ತಿಯಿಂದ ರಾರ್ಕ್‌ಗಾರ್ಡನ್‌ವರೆಗೆ ಕಡಲ ಕೊರತೆ ತಡೆಯಲು ಲೋಕೋಪಯೋಗಿ ಇಲಾಖೆಯಿಂದ ಲಕ್ಷಾಂತರ ರೂ. ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಮಾಡಲು ಚಾಲನೆ ನೀಡಲಾಗಿತ್ತು. ಆದರೆ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರು ಮೀನುಗಾರಿಕೆ ನಡೆಸಲು ಹಾಗೂ ದೋಣಿ ನಿಲುಗಡೆ ಮಾಡಲು ಸಮಸ್ಯೆಯಾಗುತ್ತದೆ ಎಂದು ಪ್ರತಿಭಟನೆ ನಡೆಸಿದ್ದರಿಂದ ತಡೆಗೋಡೆ ನಿರ್ಮಾಣ ಕೈಬಿಡಲಾಗಿತ್ತು. ರಾಕ್‌ ಗಾರ್ಡನ್‌ ಬಳಿ ಹಾಕಲಾಗಿದ್ದ ಕಲ್ಲು ಬಂಡೆಗಳ ಸುತ್ತಲಿನ ಮರಳು ಸಮುದ್ರ ಸೇರಿದೆ. ಅಜ್ವಿ ಹೊಟೇಲ್‌ ಹಿಂಭಾಗದ ಪ್ರದೇಶದಲ್ಲಿ ದಾಸ್ತಾನಿಟ್ಟಿರುವ ಪುಟಾಣಿ ರೈಲ್ವೆಗಳ ಹಳಿಗಳ ಅಡಿ ಮರಳು ಅಲೆಯ ರಭಸಕ್ಕೆ ಕೊಚ್ಚಿ ಹೋಗಿದೆ. ಪರಿಣಾಮ ಹಳಿಗಳು ಸಮುದ್ರ ಸೇರುವ ಸಾಧ್ಯತೆಗಳಿವೆ. ಸಮುದ್ರ ದಂಡೆಯಲ್ಲಿ ಸಾರ್ವಜನಿಕರು ಕುಳಿತುಕೊಳ್ಳಲು ಹಾಕಲಾಗಿದ್ದ ಪರಗೋಲಾ ಸಮುದ್ರದ ಆರ್ಭಟಕ್ಕೆ ನೆಲಕ್ಕೆ ಉರುಳಿವೆ.

ಗಾಳಿ ಮರಗಳು ನೆಲಕ್ಕೆ: ಕೋಡಿಭಾಗ ಅಳ್ವೆವಾಡದ ದಿವೇಕರ್‌ ಕಾಲೇಜು ಹಾಗೂ ಸಾಗರ ದರ್ಶನ ಹಾಲ್‌ ಹಿಂಭಾಗದಲ್ಲಿ ಸಮುದ್ರದ ಭಾರೀ ಅಲೆಗಳು ಸೃಷ್ಟಿಯಾಗಿದ್ದರಿಂದ ಮರಳು ಸವಕಳಿ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಈ ಪ್ರದೇಶದಲ್ಲಿ ಭಾರೀ ಗಾತ್ರದ ಅಲೆಗಳು ಏಳುತ್ತಿದ್ದರಿಂದ ಕೆಲವು ಮರಗಳು ಬುಡಸಮೇತ ಉರುಳಿ ಬಿದ್ದಿವೆ. ಇನ್ನಷ್ಟು ಮರಗಳ ಬೇರು ಮೇಲೆದ್ದಿದ್ದು ಉರುಳುವ ಹಂತಕ್ಕೆ ತಲುಪಿದೆ. ಕಡಲ ಕೊರೆತ ತಪ್ಪಿಸಲು ಕೆಲವು ಕಡೆಗಳಲ್ಲಿ ಹಾಕಲಾಗಿದ್ದ ಕಲ್ಲು ಬಂಡೆಗಳು ಮೇಲೆದ್ದಿದ್ದು ಸುತ್ತಮುತ್ತಲಿನ ಮರಳು ಸಮುದ್ರ ಪಾಲಾಗಿದೆ.

ಸವಕಳಿ ತಡೆಯುವ ಬಂಗುಡೆ ಬಳ್ಳಿ: ಕಡಲತೀರದ ಬಳಿ ಹೇರಳವಾಗಿ ಬೆಳೆಯುವ ಬಂಗುಡೆ ಬಳ್ಳಿಯಿಂದಾಗಿ ಸಮುದ್ರ ಕೊರೆತ ತಡೆಯಲು ಸಾಧ್ಯವಾಗುತ್ತದೆ. ಆದರೆ ಕಾರವಾರದ ಕೆಲವೆಡೆ ಕಡಲತೀರಗಳಲ್ಲಿ ಈ ಬಂಗುಡೆ ಬಳ್ಳಿಯು ವ್ಯಾಪಕ ಪ್ರಮಾಣದಲ್ಲಿ ಇಲ್ಲದಿರುವ ಕಾರಣ ಕಡಲ್ಕೊರೆತ ತೀವ್ರವಾಗುತ್ತಿದೆ ಎಂಬುದು ಪರಿಸರ ಪ್ರೇಮಿಗಳ ಮಾತಾಗಿದೆ.

ಟಾಪ್ ನ್ಯೂಸ್

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’‌

Modi 3

PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.