Sirsi; ಆಡಿದ ಮಾತಿಗೆ ತಪ್ಪುವದಿಲ್ಲ,ಕಾಂಗ್ರೆಸ್ ನುಡಿದಂತೇ ನಡೆಯುತ್ತದೆ: ಭೀಮಣ್ಣ
Team Udayavani, Apr 21, 2023, 4:37 PM IST
ಶಿರಸಿ: ಕಾಂಗ್ರೆಸ್ ಎಂದರೆ ಕೇವಲ ಪಕ್ಷವಲ್ಲ. ಅದು ನುಡಿದಂತೆ ನಡೆಯುವ ಸರಕಾರ. ಹಿಂದೆ ಅಧಿಕಾರಕ್ಕೆ ಬಂದಾಗಲೂ ನೀಡದ ಪ್ರಣಾಳಿಕೆಯ ಎಲ್ಲ ಆಶ್ವಾಸನೆ ಈಡೇರಿಸಿದ್ದೆವು ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಹೇಳಿದರು.
ಶುಕ್ರವಾರ ಅವರು ಶಿರಸಿ ಸಿದ್ದಾಪುರ ವಿಧಾನ ಸಭಾ ಕ್ಷೇತ್ರದ ಹಲವಡೆ ಚುನಾವಣಾ ಪ್ರಚಾರದ ಹಿನ್ನಲೆಯಲ್ಲಿ ಮನೆ ಮನೆಗೆ ತೆರಳಿ ಮತದಾನಕ್ಕೆ ಮನವಿ ಮಾಡಿ ಮಾತನಾಡಿದರು.
ಒಂದೊಂದು ಮತಕ್ಕೂ ಮಹತ್ವ ಇದೆ. ಪ್ರತೀ ಮತಗಳಿಗೂ ನೀಡುವ ವಿಶ್ವಾಸವನ್ನು ಕಾಂಗ್ರೆಸ್ ಮೂಲಕ ಉಳಿಸಿಕೊಳ್ಳುತ್ತೇವೆ ಎಂದ ಅವರು, ಊರುಗಳಿಗೆ ಸರ್ವಋತು ರಸ್ತೆ, ಹಳ್ಳ ದಾಟಲು ಸೇತುವೆ, ಬಾಂದಾರ, ಫುಟ್ ಬ್ರಿಜ್ ಸಹಿತ ಅಗತ್ಯ ಇರುವ ಸೌಲಭ್ಯ ಒದಗಿಸುತ್ತೇವೆ ಎಂದರು.
ಅಗತ್ಯ ಇರುವವರಿಗೆ, ನೈಜ ಫಲಾನುಭವಿಗಳಿಗೆ ಸರಕಾರದ ಯೋಜನೆ ತಲುಪಿಸಿ ನೆರವಾಗುತ್ತೇವೆ. ಅರಣ್ಯ ಅತಿಕ್ರಮಣ ಸಮಸ್ಯೆ ನಿವಾರಣೆ, ಫಾರಂ ನಂ 3, ಇ ಸ್ವತ್ತಿನ ತಾಂತ್ರಿಕ ಸಮಸ್ಯೆ ಶೀಘ್ರ ಈಡೇರಿಸಿ, ಆಶ್ರಯ ಮನೆಯನ್ನು ಅಗತ್ಯ ಉಳ್ಳ ಎಲ್ಲರಿಗೂ ಒದಗಿಸಿತ್ತೇವೆ ಎಂದರು.
ಪಕ್ಷದ ವರಿಷ್ಠರು ಸಹಿ ಹಾಕಿದ ಗ್ಯಾರೆಂಟಿ ಕಾರ್ಡನ ಎಲ್ಲ ಆಶ್ವಾಸನೆ ಈಡೇರಿಸುತ್ತೇವೆ. ಬೆಲೆ ಏರಿಕೆಯಿಂದ ನೊಂದ ಕಾರಣದಿಂದ ಮನೆ ಮಹಿಳೆಗೆ 2 ಸಾವಿರ ನೀಡುತ್ತೇವೆ. ಕಾಂಗ್ರೆಸ್ ಅಂದರೆ ಬೀದಿ ದೀಪ ಉರಿಸಿ ಸಾಧನೆ ತೋರಿಸುವದಿಲ್ಲ. ಪ್ರತಿ ಮನೆಗೂ ವಿದ್ಯುತ್ ಸಿಗಬೇಕು ಎಂಬುದಾಗಿದೆ. ಗೃಹ ಲಕ್ಷ್ಮೀ 200 ಯುನಿಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದರು.
ಬೀದಿಯಲ್ಲಿ ದೀಪ ಉರಿಸಿ ಸಾಧನೆ ಅಲ್ಲ.ಎಲ್ಲ ಮನೆಗೂ ನಿರಂತರ ವಿದ್ಯುತ್ ಕೊಡಬೇಕಾಗಿದೆ. ಕಾಂಗ್ರೆಸ್ 200 ಯುನಿಟ್ ಉಚಿತ ವಿದ್ಯುತ್ ಪೂರೈಕೆಯಂಥ ಕನಸಿನ ವಾಗ್ದಾನ ಮಾಡಿದೆ. ಕಾಂಗ್ರೆಸ್ ಹಾಗೂ ಭೀಮಣ್ಣ ಆಡಿದ ಮಾತಿಗೆ ತಪ್ಪುವವರಲ್ಲ ಎಂದರು.
10 ಕೆಜಿ ಅಕ್ಕಿ ಒಬ್ಬರಿಗೆ ಉಚಿತವಾಗಿ ಕೊಡುತ್ತೇವೆ, ನಿರುದ್ಯೋಗಿ ಡಿಪ್ಲೋಮಾ ಆದವರಿಗೆ 1500, ಪದವೀಧರರಿಗೆ ಮಾಸಿಕ 3000 ರೂ. ನೀಡಲಾಗುತ್ತದೆ. ಮತದಾರರು ಮನಸ್ಸು ಮಾಡಿದರೆ ಕಾಂಗ್ರೆಸ್ ಬರಲಿದೆ. ಈ ಎಲ್ಲ ಕನಸು ಈಡೇರಿಕೆಗೆ ಕಾಂಗ್ರೆಸ್ ಪರವಾಗಿ ಮತದಾನ ಮಾಡಬೇಕಾಗಿದೆ. ಕಾಂಗ್ರೆಸ್ ಬರುವಾಗ ಪ್ರಗತಿಯ ಜೊತೆ ಬರಲಿದೆ ಎಂದರು.
ಮನುಷ್ಯ ಜಾತಿಯೊಂದೇ ಧರ್ಮ ಎಂದು ನಂಬಿದವನು ನಾನು. ಅಧಿಕಾರ ಇಲ್ಲದಾಗಲೂ ನಾನು ಸಮಾಜಕ್ಕಾಗಿ ಕೈಲಾದಷ್ಟು ಸೇವೆ ಸಲ್ಲಿಸಿದವನು. ಇನ್ನೂ ಸೇವೆ ಸಲ್ಲಿಸಬೇಕಾದ ಅಗತ್ಯ ಇದೆ. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಮತದಾನ ಮಾಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಸರಕಾರದ ಯೋಜನೆ ಜನರಿಗೆ ತಲುಪಿಸಲು ಎಲ್ಲರೂ ಜತೆಯಾಗಬೇಕು ಎಂದೂ ವಿನಂತಿಸಿದರು.
ಈ ವೇಳೆ ಪ್ರಮುಖರಾದ ವಸಂತ ನಾಯ್ಕ, ವಿ.ಎನ್.ನಾಯ್ಕ, ಆರ್.ಎಂ.ಹೆಗಡೆ ಬಾಳೇಸರ, ಸೀಮಾ ಹೆಗಡೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !
ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ
ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ
Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ
ವಚನ ಬದುಕು ಚಂದಾಗಿಸುವ ಕಾಲಾತೀತ ದಿವ್ಯ ಸಂದೇಶ: ಶಿವಾಚಾರ್ಯರು