ಈ ಬಾರಿಯೂ ಕಲಾವಿದರಿಗೆ ಅನುದಾನ ವಿಳಂಬ


Team Udayavani, Dec 6, 2018, 6:10 AM IST

rs-20188.jpg

ಶಿರಸಿ: ರಾಜ್ಯದಲ್ಲಿ ಕಲೆ ಏಳ್ಗೆಗೆ ಕಲಾವಿದರಿಗೆ, ಕಲಾ ಸಂಘಟನೆಗಳಿಗೆ ನೀಡಲಾಗುವ ವಾರ್ಷಿಕ ಅನುದಾನ ಈ ಬಾರಿ ಫೆಬ್ರವರಿ ಪೂರ್ಣಗೊಂಡರೂ ಸಿಗುವುದು ಕಷ್ಟ. ಕಳೆದ ಎರಡು ವರ್ಷಗಳಿಂದ ಆಮೆ ನಡಿಗೆಯಾಗಿದ್ದ ಅನುದಾನ ಬಿಡುಗಡೆಗೆ ಈ ಬಾರಿ ಕೂಡ ವಿಳಂಬದ ಗ್ರಹಣ ಹಿಡಿಯಲಿದೆ.

ಸಂಸತ್‌ ಚುನಾವಣೆ ಘೋಷಣೆಯಾದರೆ ಅದು ಇನ್ನೂ ಮುಂದಕ್ಕೆ ಹೋಗುವ ಸಾಧ್ಯತೆಗಳಿವೆ. ಬಿಡುಗಡೆಯಾದರೂ ಬಳಕೆಗೆ ನೀತಿ ಸಂಹಿತೆ ಅಡ್ಡಿಯಾಗುವ ಸಾಧ್ಯತೆಯಿದೆ. ಕೊನೇ ಹಂತದಲ್ಲಿ ಸಿಕ್ಕರೂ ಗಡಿಬಿಡಿ ಕಾರ್ಯಕ್ರಮದ ಅಪಾಯವೂ ಇದೆ. ನಿಗದಿತ ಸಮಯದಲ್ಲಿ ಅನುದಾನ ಬಳಕೆ ಆಗದೇ ಹೋದರೂ ಸಂಸ್ಥೆ ಕಪ್ಪು ಪಟ್ಟಿಗೆ ಸೇರುವ ಅಪಾಯವಿದೆ.

ಕರ್ನಾಟಕ ಹಾಗೂ ಹೊರ ನಾಡಿನಲ್ಲಿ ಕಲೆ-ಸಂಸ್ಕೃತಿ ಏಳ್ಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ವೇಷಭೂಷಣ, ವಾದ್ಯ ಪರಿಕರಗಳ ಖರೀದಿಗೆ ಗರಿಷ್ಠ 30 ಸಾವಿರ ರೂ. ಹಾಗೂ ಕಲಾ ಸಂಘಟನೆಗಳಿಗೆ ಕಲಾ ಕಾರ್ಯಕ್ರಮ ನಡೆಸಲು ಅನುದಾನ ನೀಡುತ್ತದೆ. ಕಳೆದ ಆಗಸ್ಟ್‌ನಲ್ಲಿ ಇಲಾಖೆಯ ವೆಬ್‌ಸೈಟ್‌ ಮೂಲಕ ಆಹ್ವಾನಿಸಲಾದ ಅರ್ಜಿ, ಪ್ರತಿ ಜಿಲ್ಲೆಯಿಂದ ಸರಾಸರಿ 500ರಿಂದ ಸಾವಿರ ಸಂಖ್ಯೆಯಲ್ಲಿ ಭರಣ ಆಗಿದ್ದವು. ಸಂಸ್ಥೆಯ ಸಂಪೂರ್ಣ ಮಾಹಿತಿ, ದಾಖಲೆ, ಲೆಕ್ಕ ತಪಾಸಣಾ ವರದಿ, ´ೋಟೋ, ಮುಂದಿನ ವರ್ಷದ ಕ್ರಿಯಾಯೋಜನೆ, ಹಿಂದಿನ ವರ್ಷ ಅನುದಾನ ಪಡೆದಿದ್ದರೆ ಅದರ ಅನುದಾನ ಬಳಕೆ ಪ್ರಮಾಣ ಪತ್ರಗಳನ್ನೂ ಸೇರಿಸಿ ಸಂಸ್ಥೆಗಳ ಪ್ರಮುಖರು, ಕಲಾವಿದರು ಅರ್ಜಿ ಸಲ್ಲಿಸಿದ್ದರು. ಕೊಡುವ ಅನುದಾನ ನವೆಂಬರ್‌ ಒಳಗೆ ಬಳಕೆಗೆ ಸಿಗುವಂತೆ ಇರಬೇಕಿತ್ತು.

ಹೊಸ ವರಸೆ:ಕಳೆದ ವರ್ಷದಿಂದ ಅನುದಾನಕ್ಕೆ ಅರ್ಜಿ ಸಲ್ಲಿಸಿದ ಕಲಾವಿದರು, ಸಂಘಟನೆಗಳು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರ ಕಚೇರಿಗೆ ತೆರಳಿ ಮೂಲ ದಾಖಲೆಗಳನ್ನು ತೋರಿಸಿ ಸಂದರ್ಶನ ನೀಡಿ ವಾಪಸ್ಸಾಗಬೇಕಿತ್ತು. ಈ ಬಾರಿ ಅರ್ಜಿಯನ್ನು ಆಗಸ್ಟ್‌ ವೇಳೆಗೆ ಕರೆದಿದ್ದು, ಅರ್ಜಿ ಆಹ್ವಾನಕ್ಕೂ ಒಂದು ತಿಂಗಳು ವಿಳಂಬ ಆಗಿತ್ತು. ಉತ್ತರ ಕನ್ನಡ, ಶಿವಮೊಗ್ಗ, ಮಂಗಳೂರು, ಬೆಳಗಾವಿ, ರಾಯಚೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿಯಂತಹ ಜಿಲ್ಲೆಗಳಲ್ಲಿ ಕೆಲವು ತಾಲೂಕುಗಳ ಕಲಾವಿದರು ಮೂರು, ನಾಲ್ಕು ತಾಸುಗಳ ಕಲಾ ಪ್ರಯಾಣ ಮಾಡಿ ದಾಖಲೆ ಪರಿಶೀಲನೆಗೆ ಹೋಗಬೇಕಿತ್ತು. 4-5 ಸಾವಿರ ರೂ.ಖರ್ಚು ಮಾಡಿದರೂ ಅನುದಾನ ಬರುವುದು ಗ್ಯಾರಂಟಿಯಿಲ್ಲ.

ಇನ್ನು, ಕಲಾ ಪ್ರದರ್ಶನ ನೀಡುತ್ತ ಊರೂರು ಸುತ್ತುವ ಕಲಾವಿದರಾಗಿದ್ದರೆ ಅವರಿಗೆ ಮಾಹಿತಿಯೇ ಸಿಗದೆ, ಅರ್ಹತೆ ಇದ್ದರೂ ವಂಚನೆಗೊಳಗಾಗುತ್ತಿದ್ದರು. ಈ ಬಾರಿ ಕೂಡ ಕೆಲವು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಿದ ಸಂಘಟನೆಗಳ ದಾಖಲೆ ಪರಿಶೀಲನೆ ಆಗಿದ್ದು, ಇನ್ನೂ ಕೆಲವು ಜಿಲ್ಲೆಗಳಲ್ಲಿ ಈ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ. ಏಕೆಂದರೆ, ಕೆಲ ಜಿಲ್ಲೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಿಗೆ ಮಾತ್ರ ಇಲಾಖೆ ಬೇರೆಯಾಗಿದೆ. ಇಲ್ಲಿ ಪ್ರಭಾರಿ ಹೊರೆಯಾಗಿದೆ.

ನಿರ್ದೇಶಕರೇ ಇಲ್ಲ: ಅನುದಾನಗಳ ದಾಖಲೆ, ಕ್ರಿಯಾಯೋಜನೆ ನೋಡಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಆರ್ಥಿಕ ಇಲಾಖೆಯಿಂದ ಅನುದಾನ ಹಂಚಿಕೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲು ಕನಿಷ್ಟ ಒಂದೂವರೆಯಿಂದ ಎರಡು ತಿಂಗಳು ಬೇಕು. ಇಲಾಖೆಯಲ್ಲಿ ಅಂತಿಮ ಅನುಮೋದನೆ ನೀಡುವುದು ನಿರ್ದೇಶಕರ ಹೊಣೆ. ಆದರೆ, ನ.30ಕ್ಕೆ ಇಲಾಖೆಯ ನಿರ್ದೇಶಕ ಸ್ಥಾನದಿಂದ ಎನ್‌.ಆರ್‌. ವಿಶುಕುಮಾರ ಸೇವಾ ನಿವೃತ್ತರಾಗಿದ್ದಾರೆ. ಜೊತೆಗೆ, ಬೆಳಗಾವಿಯಲ್ಲಿ ಚಳಿಗಾಲ ಅ ಧಿವೇಶನ ಕೂಡ ಆರಂಭವಾಗುತ್ತಿದೆ. ಇದರ ಬಳಿಕವೇ ನಿರ್ದೇಶಕರ ನೇಮಕವಾಗುವ ಸಾಧ್ಯತೆಗಳಿವೆ. ಜನವರಿಯಲ್ಲಿ ನೇಮಕಗೊಂಡರೂ ಫೆಬ್ರವರಿ ಕೊನೆಗೂ ಅನುದಾನ ಬರುವ ನಿರೀಕ್ಷೆಯಿಲ್ಲ.

ನಿರಂತರವಾಗಿ ಕೆಲಸ ಮಾಡುವ ಸಂಸ್ಥೆಗಳಿಗೆ ಒಂದಿಷ್ಟು ಅನುದಾನ ನೀಡಬೇಕು. ಕಲಾವಿದರನ್ನು ಅಲೆಸದೆ ಗೌರವದಿಂದ ಕಾಣುವ ಕಾರ್ಯ ಆಗಬೇಕು. ಸಕ್ರಿಯವಾಗಿರುವ ಸಂಸ್ಥೆಗಳು ವರ್ಷಕ್ಕೆ ನಾಲ್ಕಾದರೂ ಕಾರ್ಯಕ್ರಮ ನಡೆಸಲು ಅನುದಾನ ಕೊಡಬೇಕು.
– ವೆಂಕಟೇಶ ಹೆಗಡೆ, ಕಲಾವಿದ

ಈ ಬಾರಿ ಮಾರ್ಚ್‌ ಒಳಗೆ ಅನುದಾನದ ನೆರವು ಬರಬಹುದು. ನಿರ್ದೇಶಕರ ಸ್ಥಾನ ನಿವೃತ್ತಿಯಿಂದ ತೆರವಾಗಿದೆ. ಇನ್ನೂ ಅನೇಕ ಜಿಲ್ಲೆಗಳಿಂದ ಪರಿಶೀಲಿಸಿದ ಅರ್ಜಿ ಬರಬೇಕಿದೆ. ಫೆಬ್ರವರಿಗೆ ಅನುದಾನದ ಪಟ್ಟಿ ಬಿಡುಗಡೆ ಆಗಬಹುದು.
– ಹೆಸರು ಹೇಳ ಬಯಸದ ಹಿರಿಯ ಅಧಿಕಾರಿ

– ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.