ಮುದಗೊಳಿಸಿದ ಉಸ್ತಾದ್ ರಶೀದ್ ಖಾನ್ ಗಾಯನ
Team Udayavani, Apr 23, 2019, 3:07 PM IST
ಭಟ್ಕಳ: ಚಿತ್ರಾಪುರ ಸಂಸ್ಥಾನದಲ್ಲಿ ರಥೋತ್ಸವದಂಗವಾಗಿ ನಡೆದ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ಗಾಯಕ ಪದ್ಮಶ್ರೀ ಉಸ್ತಾದ್ ರಶೀದ್ ಖಾನ್ರ ಗಾಯನ ನೆರೆದವರ ಮನ ಸೂರೆಗೊಂಡಿತು.
ಪೂರ್ಯ ಧನಶ್ರೀ ರಾಗದಿಂದ ಸಂಗೀತ ಆರಂಭಿಸಿದ ಅವರು ನಂತರ ವಿವಿಧ ರಾಗಗಳಲ್ಲಿ ತಮ್ಮ ಸಂಗೀತ ಸುಧೆ ಹರಸಿದರು.
ಪದ್ಮಶ್ರೀ ಉಸ್ತಾದ್ ರಶೀದ್ ಖಾನ್ರ ಜೊತೆಯಲ್ಲಿ ಪದ್ಮಶ್ರೀ ಪಂ|ವಿಜಯ್ ಘಾಟೆ ತಬಲಾದಲ್ಲಿ, ಅಜಯ್ ಜೋಗಳೇಕರ್ ಹಾರ್ಮೋನಿಯಮ್ನಲ್ಲಿ, ಮುರಾದ್ ಅಲಿ ಸಾರಂಗಿಯಲ್ಲಿ, ಅಮರ್ ಸಂಗಮ್ ಗಿಟಾರ್ನಲ್ಲಿ, ಮಂದಾರ್ ತಿಲವಾಲ್ಕರ್ ಕೀಬೋರ್ಡ್ನಲ್ಲಿ ಅರ್ಮಾನ್ ಖಾನ್ ಸಂಗೀತದಲ್ಲಿ, ಶಿವಾನಿ ಕಲ್ಯಾಣಪುರ್ ಹಾಗೂ ಸೌಂಡ್ ಇಂಜಿನಿಯರ್ ತೇಜಸ್ವೀರಾವ್ ಸಹಕರಿಸಿದರು.
ಚಿತ್ರಾಪುರ ಮಠಾಧೀಶ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಹಾಗೂ ಮೌಂಟ್ ಅಬುವಿನಿಂದ ಆಗಮಿಸಿದ್ದ ಭುವನಾನಂದ ಗಿರಿ ಸ್ವಾಮೀಜಿ ಉಪಸ್ಥಿತರಿದ್ದರು.
ನಾರಾಯಣ ಮಲ್ಲಾಪುರ್ ಸ್ವಾಗತಿಸಿ, 11ನೇ ವಯಸ್ಸಿನಲ್ಲಿಯೇ ಸಂಗೀತ ಕಾರ್ಯಕ್ರಮ ನೀಡಿದ ಇವರು, ಸಂಗೀತದ ಅಘಾದ ಅನುಭವ ಹೊಂದಿದ್ದು ಪದ್ಮಶ್ರೀ ಸೇರಿದಂತೆ ಹಲವಾರು ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ. ಸಂಗೀತ ಅಕಾಡೆಮಿಯನ್ನು ಸ್ಥಾಪಿಸಿ ಅನೇಕ ಸಂಗೀತಗಾರರನ್ನು ನಾಡಿಗೆ ಪರಿಚಯಿಸುತ್ತಿದ್ದಾರೆ ಎಂದರು.
ಸ್ಟಾಂಡಿಂಗ್ ಕಮಿಟಿ ಅಧ್ಯಕ್ಷ ಪ್ರವೀಣ್ ಕಡ್ಲೆ ಪ್ರಾಸ್ತಾವಿಕ ಮಾತನಾಡಿದರು. ನಂತರ ಶ್ರೀ ಮಠದ ವತಿಯಿಂದ ಸಂಗೀತಗಾರರನ್ನು ಗೌರವಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
MUST WATCH
ಹೊಸ ಸೇರ್ಪಡೆ
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ