ರೈತರ ಅಭಿವೃದ್ಧಿಗೆ ಸದಾ ಬದ್ಧ: ಬಾಬುರಾವ್
Team Udayavani, Jul 10, 2017, 12:45 PM IST
ಸೈದಾಪುರ: ಗುರುಮಠಕಲ್ ಮತ ಕ್ಷೇತ್ರದ ರೈತರ ಅಭಿವೃದ್ಧಿಗೆ ಶ್ರಮಿಸುವುದಾಗಿ ಶಾಸಕ ಬಾಬುರಾವ್ ಚಿಂಚನಸೂರ ಹೇಳಿದರು.
ಕಣೇಕಲ್ ಗ್ರಾಮದಲ್ಲಿ 2015-16ನೇ ಸಾಲಿನ ಎಸ್ಸಿಪಿ/ ಟಿಎಸ್ಪಿ ಯೋಜನೆಯಡಿ ಏಳು ಜನ ಫಲಾನುಭವಿಗಳಿಗೆ ಪಂಪ್
ಸೆಟ್ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು. ಸಂಸದ ಡಾ| ಮಲ್ಲಿಕಾರ್ಜನ ಖರ್ಗೆ ಅವರ ಮಾರ್ಗದರ್ಶದಲ್ಲಿ
ಸುಮಾರು 440 ಕೋಟಿ ರೂ.ಗಳನ್ನು ಖರ್ಚುಮಾಡಿ ಈ ಭಾಗವನ್ನು ನೀರಾವರಿ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೇನೆ. ಆದ್ದರಿಂದ ಅನೇಕ ಕೆರೆಗಳನ್ನು ಅಭಿವೃದ್ಧಿ ಪಡೆಸಿ ನದಿಗಳಿಂದ ನೀರು ತುಂಬಿಸುವುದು ಹಾಗೂ ಪ್ರಮುಖ ಸ್ಥಳಗಳಲ್ಲಿ ಬ್ರಿಜ್
ಕಂ ಬ್ಯಾರೇಜ್ ನಿರ್ಮಾಣವಾಗಲಿದ್ದು, ಇದರಿಂದ ರೈತರಿಗೆ ಅನುಕೂಲ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್ಇಕೆಎಸ್ ಆರ್ಟಿಸಿ ನಿರ್ದೇಶಕ ಚಂದ್ರಶೇಖರ ವಾರದ, ಯಾದಗಿರಿ ಎಪಿಎಂಸಿ ನಿರ್ದೇಶಕ ಪ್ರಭುಲಿಂಗ ವಾರದ್, ಚಂದ್ರಕಾಂತ್ ಹತ್ತಿಕುಣಿ, ಎಸ್.ಆರ್. ರಾಘವೇಂದ್ರ, ಭೀಮಶಪ್ಪ ಜೇಗರ್, ಡಾ| ಮಲ್ಲಿಕಾರ್ಜುನ ಹುಲಿಬೆಟ್ಟ,
ಶರಣಪ್ಪ ಮಾಸ್ತರ್, ಬನ್ನಪ್ಪ ಹುಲಿಬೆಟ್ಟ, ಬಸತ್ತಿ ದೋತ್ರೆ, ಗ್ರಾಪಂ ಸದಸ್ಯ ತಾಯಪ್ಪ, ಬಸ್ಸಪ್ಪ, ಗೋಪಾಲ್, ತಾಯಪ್ಪ, ಹಣಮಂತ ಬೊಳ್ಳಿ, ಆಶಪ್ಪ ಹೀರೆಮೆಟ್ಟಿ, ಬಸ್ಸಪ್ಪ ಬಂಡಿ ಇದ್ದರು.