ರಾಜ್ಯದ ವೃದ್ಧಾಪ್ಯ ವೇತನ ಯೋಜನೆ ಬಗ್ಗೆ ಟೀಕೆ
Team Udayavani, Nov 29, 2018, 6:25 AM IST
ಯಾದಗಿರಿ: ನೆರೆಯ ತೆಲಂಗಾಣದಲ್ಲಿ ಡಿ.7ರಂದು 119 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಅಬ್ಬರದ ಪ್ರಚಾರ ನಡೆದಿದ್ದು, ಅಭ್ಯರ್ಥಿಯೊಬ್ಬರು ಕರ್ನಾಟಕ ವೃದ್ಧಾಪ್ಯ ವೇತನ ಯೋಜನೆಯೊಂದನ್ನು ಟೀಕಿಸಿದ ವಿಡಿಯೋ ಈಗ ವೈರಲ್ ಆಗಿದೆ.
ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರರಾವ್ ನೇತೃತ್ವದ ಟಿಆರ್ಎಸ್ನ ಮಹಬೂಬ ನಗರದ ನಾರಾಯಣಪೇಟ್ ಕ್ಷೇತ್ರದ ಅಭ್ಯರ್ಥಿ ಎಸ್.ರಾಜೇಂದರ ರೆಡ್ಡಿಯವರು, ಗಡಿಯಲ್ಲಿ ಮತಯಾಚನೆ ಮಾಡುವ ವೇಳೆ ಯಾದಗಿರಿ ಜಿಲ್ಲೆಯ ವೃದ್ಧ ಮಹಿಳೆ ತನ್ನ ಸಂಬಂಧಿ ಮನೆಗೆ ತೆರಳಿರುವ ವೇಳೆ ನೀವು ಕರ್ನಾಟಕದವರಾ? ನಿಮಗೆ ಅಲ್ಲಿ ವೃದ್ಧಾಪ್ಯ ಪಿಂಚಣಿ ಸಿಗುತ್ತಾ, ಎಷ್ಟು ತಿಂಗಳಿಗೊಮ್ಮೆ ದೊರೆಯುತ್ತದೆ ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರ್ನಾಟಕದಲ್ಲಿ ತಿಂಗಳಿಗೆ ಕೇವಲ 500 ರೂ.ಸಿಗುತ್ತದೆ. ನಮ್ಮಲ್ಲಿ ಒಂದು ಸಾವಿರ ರೂ. ಇದೆ ಎಂದು ಹೋಲಿಸಿ ಮೂದಲಿಸಿದ್ದಾರೆ. ಅಷ್ಟೇ ಅಲ್ಲ, ರಾಜ್ಯದ ವೃದ್ಧ ಮಹಿಳೆಗೆ, ನಿಮ್ಮಲ್ಲಿರುವ ಕರ್ನಾಟಕದ ಕಾಂಗ್ರೆಸ್ನವರಿಗೆ ಹೋಗಿ ಹೇಳಿ, ಅಲ್ಲಿ ತೆಲಂಗಾಣದಲ್ಲಿ ಸಾವಿರ ರೂ.ಕೊಡ್ತಿದ್ದಾರೆ. ನಿಮಗೆ ಓಟ್ ಹಾಕಿದ್ವಿ, ನಮಗೂ ಸಾವಿರ ರೂ.ನೀಡಲು ನಿಮಗೇನು ದಾಡಿ ಬಂದಿದೆ ಎಂದು ಕೇಳಿ ಎನ್ನುವ ಮೂಲಕ ಚಾಟಿ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ