ಯಾನಾಗುಂದಿ ಮಾಣಿಕೇಶ್ವರಿ ಆಶ್ರಮಕ್ಕೆ ಪಾದಯಾತ್ರೆ
Team Udayavani, Mar 20, 2022, 3:39 PM IST
ಗುರುಮಠಕಲ್: ತಾಲೂಕಿನ ಮಾತಾ ಮಾಣಿಕೇಶ್ವರಿ ಭಕ್ತರು ಮಾತಾಜಿ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಪಾದಯಾತ್ರೆ ನಡೆಸಿದರು.
ಪಟ್ಟಣದ ಖಾಸಾಮಠದಿಂದ ಯಾನಗುಂದಿಯ ಮಾತಾ ಮಾಣಿಕೇಶ್ವರಿ ಆಶ್ರಮದವರೆಗೆ ಪಾದಯಾತ್ರೆ ನಡೆಸಿದರು.
ದಾರಿಯುದ್ದಕ್ಕೂ ಓಂ ನಮೋ ಶಿವಾಯ ಎಂಬ ಪಂಚಾಕ್ಷರಿ ಮಂತ್ರ ಪಠಿಸುತ್ತ ಪಾದಯಾತ್ರೆ ಮಾಡಿದರು. ದಾರಿಯಲ್ಲಿ ಪಾದಯಾತ್ರೆ ಮಾಡುತ್ತಿದ್ದ ಭಕ್ತರಿಗೆ ಕೆಲ ದಾನಿಗಳು ನೀರು ಮತ್ತು ಬಾಳೆ ಹಣ್ಣು ಉಚಿತವಾಗಿ ವಿತರಿಸಿದರು.
ಪುರಸಭೆ ಸದಸ್ಯರಾದ ಪಾಪಣ್ಣ ಮನ್ನೆ, ಅಶೋಕ ಸಂಜನೋಳ್, ವೀರಪ್ಪ ಪ್ಯಾಟಿ, ನರಸರೆಡ್ಡಿ ಗಡ್ಡೆಸೂಗೂರ್, ವಿಜಯಕುಮಾರ ನಿರೇಟಿ, ಲಾಲಪ್ಪ ಕಂದೂರ್, ಜ್ಞಾನೇಶ್ವರರೆಡ್ಡಿ, ಕಾಶಪ್ಪ ಮನ್ನೆ, ಶರಣು ಧರ್ಮಪೂರ್, ಶಿವುಕುಮಾರ ಕಡೇಚೂರ್, ನಾರಾಯಣ ಶಿರ್ರಾ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ