ಏಕಾಗ್ರತೆ ಪಡೆಯಲು ಕ್ರೀಡೆ ಅಗತ್ಯ
Team Udayavani, Aug 20, 2017, 12:58 PM IST
ಹಿರೇವಡಗೇರಾ: ಇಂದಿನ ಆಧುನಿಕ ಯುಗದಲ್ಲಿ ಸದೃಢರಾಗಿರಬೇಕಾದರೆ ಪ್ರತಿಯೊಬ್ಬರು ಒಂದಿಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಜೆಡಿಎಸ್ ಮುಖಂಡ ಹನುಮೇಗೌಡ ಬೀರನಕಲ್ ಹೇಳಿದರು.ಪಟ್ಟಣದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ 2017-18ನೇ ಸಾಲಿನ ಹೋಬಳಿ ಮಟ್ಟದ ಪೌಢಶಾಲೆ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಏಕಗ್ರತೆ ಪಡೆಯಲು ಸಾಧ್ಯವಾಗುತ್ತದೆ. ಆ ಕಾರಣಕ್ಕಾಗಿ ವಿದ್ಯಾರ್ಥಿಗಳು ಸಕ್ರಿಯವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು. ಖ್ಯಾತ ಮಕ್ಕಳ ತಜ್ಞ ಸುಭಾಷ ಸಾಹು ಕರಣಗಿ ಮಾತನಾಡಿ, ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರಬೇಕಾದರೆ ದೈಹಿಕ ಕಸರತ್ತು ಅವಶ್ಯ. ಇದನ್ನು ಪಡೆಯಬೇಕಾದರೆ ದಿನಾಲೂ ಯಾವುದಾದರೂ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು. ಇಂದಿನ ಯುವಕರು ಅವಸರದ ಜೀವನಕ್ಕೆ ಮಾರು ಹೋಗಿ ಹಾಗೂ ದುಶ್ಚಟಗಳಿಗೆ ಅಂಟಿಕೊಂಡಿರುವುದರಿಂದ ಮತ್ತು ಕ್ರೀಡೆಗಳಲ್ಲಿ ಭಾವಹಿಸದೇ ಇರುವುದರಿಂದ ಅನೇಕ ರೋಗರುಜಿನಗಳಿಗೆ ಬಲಿಯಾಗುವುದರ ಜತೆಗೆ ಅಕಾಲಿಕ ಮರಣಕ್ಕೆ ತುತ್ತಾಗುತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ದೈಹಿಕ ನಿರ್ದೇಶಕ ಚಂದ್ರಶೇಖರ ವೈದ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ| ಮರೆಪ್ಪ ನಾಟೇಕಾರ, ಬಾಷುಮಿಯ್ಯ ನಾಯಕೋಡಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ತಾಪಂ ಸದಸ್ಯೆ ನಿಂಗಮ್ಮ ನಾಟೇಕಾರ ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಕ್ರೀಡಾಕೂಟದಲ್ಲಿ ಸುಮಾರು 13 ತಂಡಗಳು ಭಾಗವಹಿಸಿದ್ದವು ಗ್ರಾಪಂ ಅಧ್ಯಕ್ಷ ಕೆ. ಗೋಪಾಲ ನಾಯಕ ವಿ.ಚವ್ಹಾಣ, ಮಧ್ಯಮಾರಾಟ ಸಂಯಮ ಮಂಡಳಿ ನಿರ್ದೇಶಕ ಬಸವರಾಜ ಸೊನ್ನದ, ತಾಪಂ ಮಾಜಿ ಸದಸ್ಯ ಮಲ್ಲಣ್ಣ ಇಟಗಿ, ಗ್ರಾಪಂ ಸದಸ್ಯ ಮಲ್ಲಣ್ಣ ನೀಲಹಳ್ಳಿ, ರಾಜು ಬೀರನಕಲ್ ತಾಂಡಾ, ಮಲ್ಲಯ್ಯ ಮುಸ್ತಾಜೀರ್, ಸಂಗನಗೌಡ ಮಾಲೀಪಾಟೀಲ, ಹೊನ್ನಪ್ಪ ಬಸವನಗರ, ರವಿಂದ್ರ ನೀಲಹಳ್ಳಿ, ನಿಂಗು ಜಡಿ, ಬಸವರಾಜ ನೀಲಹಳ್ಳಿ, ರಫೀಕಸಾಬ್ ಉಳ್ಳೆಸುಗೂರ ಹಾಗೂ ಇದ್ದರು. ಸೋನಿಯಾ ಸಂಗಡಿಗರು ಪ್ರಾರ್ಥಿಸಿದರು. ಈಶ್ವರಿ ಸಂಗಡಿಗರು ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಣೆ ತಿಪ್ಪಣ್ಣ, ಲಿಂಗರಾಜ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadgera; ಜಮೀನಿನಲ್ಲಿ ಕಾಣಿಸಿಕೊಂಡು ರೈತರಿಗೆ ಆತಂಕ ತಂದ ಮೊಸಳೆ
Eknath Shindeಗೆ ತಾಕತ್ ಇದ್ದರೆ ನಮ್ಮ ರಾಜ್ಯಕ್ಕೆ ಬರಲಿ: ಸಚಿವ ದರ್ಶನಾಪುರ ಸವಾಲ್
Yadgir: ಸಿಡಿಲು ಬಡಿದು ಕುರಿಗಾಹಿ ಮೃತ್ಯು, 17 ಕುರಿಗಳು ಸಾವು
SSLC Exam Result; ಮತ್ತೆ ಕೊನೆಯ ಸ್ಥಾನ ಪಡೆದ ಯಾದಗಿರಿ..; ಕಾರಣವೇನು?
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
Revanna ಮಧ್ಯಂತರ ನಿರೀಕ್ಷಣಾ ಜಾಮೀನು ಮೇ 20 ರ ವರೆಗೆ ವಿಸ್ತರಿಸಿದ ಕೋರ್ಟ್
Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್
Gopal Krishna Belur ಯಾರಿಂದಲೂ ರಾಜ್ಯ ಸರ್ಕಾರ ಅಲ್ಲಾಡಿಸಲು ಆಗಲ್ಲ
Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ