ಶಾಂತಿ-ಸೌಹಾರ್ದ ದಿಂದ ಗಣೇಶ ಹಬ್ಬ ಆಚರಿಸಿ
Team Udayavani, Aug 20, 2017, 1:07 PM IST
ನಾರಾಯಣಪುರ: ಗಣೇಶೋತ್ಸವ ಹಬ್ಬವನ್ನು ಶಾಂತಿ ಸೌಹಾರ್ದ ಮತ್ತು ಸಂಭ್ರಮದಿಂದ ಆಚರಿಸಬೇಕು ಎಂದು ಪಿಎಸ್ಐ ಮಾನಪ್ಪಯಕ್ಷಿಂತಿ ಹೇಳಿದರು. ಪಟ್ಟಣದ ಗಣೇಶ ದೇವಸ್ಥಾನ ಆವರಣದಲ್ಲಿ ಗಣೇಶೋತ್ಸವ ಹಬ್ಬ ಆಚರಣೆ
ಪ್ರಯುಕ್ತ ನಡೆದ ಶಾಂತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಣೇಶ ಪ್ರತಿಷ್ಠಾಪನೆ ಕುರಿತು ಜಿಲ್ಲಾಡಳಿತ
ಈಗಾಗಲೇ ಸೂಚಿಸಿದ ನಿಯಮ ಪಾಲನೆ ಮಾಡಬೇಕು. ಭದ್ರತೆ ವಿಷಯದಲ್ಲಿ ಪೊಲೀಸ್ ಇಲಾಖೆ ಸಂಪುರ್ಣ ಸಹಕಾರ
ನೀಡಲಿದೆ. ಭಾರೀ ಸದ್ದು ಮಾಡುವ ಧ್ವನಿ ವರ್ಧಕ ಬಳಕೆಗೆ ನಿಷೇಧ ಇದೆ. ಕಾನೂನು ಬಾಹಿರ ಚಟುವಟಿಕೆ ಆಸ್ಪದ
ಇಲ್ಲ. ಅಂತಹುಗಳು ಕಂಡು ಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ನಿಗದಿತ ಸಮಯಕ್ಕೆ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲ ಧರ್ಮದವರು ಸಹಕಾರ ಮನೋಭಾವದಿಂದ ಹಬ್ಬ ಆಚರಿಸಬೇಕು ಎಂದು ಹೇಳಿದರು. ಮುಖಂಡರಾದ ಬಸವರಾಜ ಚಟ್ಟೇರ, ಮಲ್ಲಿಕಾರ್ಜುನ ಬಬಲೇಶ್ವರ, ಮಲ್ಲಣ್ಣ ಶಾರದಳ್ಳಿ, ಸೋಮನಗೌಡ, ಸಂಗಣ್ಣ ತಾಳಿಕೋಟಿ, ಅಶೋಕ ನಾಯ್ಡು, ಬಸವರಾಜ ಅಸ್ಕಿ, ಮಲ್ಲಣ್ಣ ಕುಲಕರ್ಣಿ, ಕೃಷ್ಣಾಜಿ, ದೇವರಾಜ ಹೆಗ್ಗೂರ, ಗುಡದಪ್ಪ ಆಕಳವಾಡಿ, ಬಾಲಚಂದ್ರ, ಅಂದಾನೆಪ್ಪ ಚಿನಿವಾಲರ, ಆಂಜನೇಯ್ಯ ದೊರೆ, ಶಿವಪ್ಪ ಬಿರಾದಾರ, ಸಂಗನಬಸು ಚಟ್ಟೇರ, ಮಲ್ಲಿಕಾರ್ಜುನ ಮೇಸ್ತಕ್, ವಿಜಯಕುಮಾರ ಖೇಮಕರ್, ಗುರು ಕುಲಕರ್ಣಿ, ಬಸವರಾಜ ಕೆಂಡದ, ಮಂಜು ಹಾದಿಮನಿ, ಎಎಸ್ಐ ಮಾಗೊಂಡಪ್ಪ, ಬಸವರಾಜ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ
Yadagiri: ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ; ಪ್ರಕರಣ ದಾಖಲು
JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ