ಉದ್ದ ಗಿಡ್ಡ ಫ್ಯಾಷನ್‌!


Team Udayavani, Sep 12, 2020, 3:16 PM IST

13-july-14.jpg

ಫ್ಯಾಷನ್‌ ಲೋಕದಲ್ಲಿ ಹೊಸತನವೆಂಬುದು ನಿರಂತರ. ಅದರಲ್ಲಿಯೂ ಲೇಡಿಸ್‌ ಫ್ಯಾಷನ್‌ ಜಗತ್ತಿನಲ್ಲಿ ಬದಲಾವಣೆಗಳು, ಹೊಸ ಫ್ಯಾಷನ್‌ ಗಳು ಆಗಾಗ ಬರುತ್ತಲೇ ಇರುತ್ತವೆ. ಒಮ್ಮೆ ಲಾಂಗ್‌ ಟಾಪ್‌, ಇನ್ನೊಮ್ಮೆ ಶಾರ್ಟ್‌ ಟಾಪ್‌, ಮಗದೊಮ್ಮೆ ಸಾಧಾರಣ ಉದ್ದ ಹೊಂದಿರುವ ಟಾಪ್‌. ಈ ನಡುವೆ ಶರ್ಟ್‌, ಜೀನ್ಸ್‌ ಟಾಪ್‌ ಎಲ್ಲವನ್ನೂ ನೋಡಿಯಾಯಿತು. ಅವನ್ನೆಲ್ಲ ಧರಿಸಿ ಖುಷಿ ಪಟ್ಟದ್ದೂ ಆಯಿತು. ಇದೀಗ ಈ ಸಾಲಿಗೆ ಹೊಸ ಸೇರ್ಪಡೆ ಮುಂಭಾಗದಲ್ಲಿ ಶಾರ್ಟ್‌ ಮತ್ತು ಹಿಂಭಾಗದಲ್ಲಿ ಉದ್ದ ಇರುವ ಬಟ್ಟೆಗಳು.

ಹೊಸ ಮಾದರಿಯ ಟಾಪ್‌ ಇದೇನಪ್ಪ ಉದ್ದ-ಗಿಡ್ಡ ಡ್ರೆಸ್‌ ಎಂದು ಆಶ್ಚರ್ಯಗೊಳ್ಳಬೇಡಿ. ಲೇಡೀಸ್‌ ಫ್ಯಾಶನ್‌ ಪ್ರಪಂಚದಲ್ಲಿ ಇದೀಗ ಹೊಸ ಮಾದರಿಯ ಬಟ್ಟೆ. ಇದೂ ಕುರ್ತಾ ಟಾಪ್‌. ಆದರೆ ಮಾಮೂಲಿ ಕುರ್ತಾಗಳಂತೆ ಸಮಾನಾಂತರ ಅಳತೆಯನ್ನು ಹೊಂದಿಲ್ಲ. ಬದಲಾಗಿ ಮುಂಭಾಗದಲ್ಲಿ ಮೊಣಕಾಲಿನವರೆಗೆ ಬಟ್ಟೆ ಇದ್ದರೆ, ಹಿಂಭಾಗದಲ್ಲಿ ಮೊಣ ಕಾಲಿನಿಂದ ಕೆಳಗಿನವರೆಗೆ ಬಟ್ಟೆಯನ್ನು ಹೊಲಿಯಲಾಗಿರುತ್ತದೆ. ಹಿಂಭಾಗ ತೀರಾ ಉದ್ದವಿದ್ದು, ಮುಂದಿನ ಭಾಗ ಕಡಿಮೆ ಉದ್ದ ಹೊಂದಿರುವುದರಿಂದ ಜೀನ್ಸ್‌ನೊಂದಿಗೆ ಈ ಟಾಪ್‌ನ್ನು ಧರಿಸಿದರೆ ಸೌಂದರ್ಯ ಇಮ್ಮಡಿಸುತ್ತದೆ.

ಇದನ್ನೂ ಓದಿ: ಪೋಷಕಾಂಶಗಳ ಕಣಜ: ಬೂದು ಕುಂಬಳಕಾಯಿ ಆರೋಗ್ಯದ ರಕ್ಷಣೆಗೆ ಉತ್ತಮ ತರಕಾರಿ

ಶರ್ಟ್‌ನಲ್ಲೂ
ವಿಶೇಷವೆಂದರೆ ಈ ಟಾಪ್‌ ಮಾದರಿಯಲ್ಲಿ ಶರ್ಟ್‌ ಕೂಡಾ ಲಭ್ಯವಿದೆ. ಮಾಮೂಲಿ ಶರ್ಟ್‌ನಂತೆಯೇ ಆದರೆ ಶರ್ಟ್‌ನ ಮುಂದಿನ ಭಾಗ ಸಣ್ಣದಾಗಿದ್ದು, ಹಿಂಭಾಗ ಉದ್ದವಿರುತ್ತದೆ. ಒಮ್ಮೊಮ್ಮೆ ಶರ್ಟ್‌ನ ಹಿಂದಿನ ಭಾಗ ಮೊಣಕಾಲಿನವರೆಗೆ ತಾಗುವಷ್ಟು ಉದ್ದವಿದ್ದು, ಇದು ನೋಡಲು ಆಕರ್ಷಕವಾಗಿ ಕಾಣುತ್ತದೆ. ಫುಲ್‌ ಲೆಗ್‌ ಜೀನ್ಸ್‌ ನೊಂದಿಗೆ ಈ ಶರ್ಟ್‌ ಧರಿಸಿದರೆ ಹೆಚ್ಚು ಒಪ್ಪುತ್ತದೆ. ಚೆಕ್ಸ್‌, ಪ್ಲೈನ್‌, ವಿಭಿನ್ನ ಬಹು ಬಣ್ಣಗಳನ್ನು ಹೊಂದಿರುವ ಶರ್ಟ್‌ ಗಳೂ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಶಾಪಿಂಗ್‌ಗೆ ಧರಿಸಿ
ಮಾರುಕಟ್ಟೆಯಲ್ಲಿ ಎಲ್ಲ ಹೊಸ ವಸ್ತಗಳೂ ಫ್ಯಾಷನ್‌ ಪ್ರಿಯರಿಗೆಂದೇ ಆಗಮಿಸಿರುತ್ತವೆ. ಆದರೆ ಹೊಸ ಫ್ಯಾಷನ್‌ ಎಂದುಕೊಂಡು ಅದನ್ನು ಎಲ್ಲ ಕಡೆಗೆ ಬೇಕಾಬಿಟ್ಟಿ ಧರಿಸಿಕೊಂಡು ಹೋಗಲಾಗುವುದಿಲ್ಲ. ಪ್ರಮುಖವಾಗಿ ಕಾಲೇಜಿಗೆ ತೆರಳುವಾಗ, ಉದ್ಯೋಗಕ್ಕೆ ಹೋಗುವಾಗೆಲ್ಲ ಈ ಫ್ಯಾಶನ್‌ ಡ್ರೆಸ್‌ಗಳನ್ನು ಧರಿಸಲಾಗದು. ಅಂತೆಯೇ ಈ ಡ್ರೆಸ್‌ ಕೂಡಾ. ಕೆಲಸದ ಸ್ಥಳ ಮತ್ತು ಕಾಲೇಜಿನ ವಾತಾವರಣಕ್ಕೆ ಈ ಡ್ರೆಸ್‌ ಹೊಂದಿಕೆಯಾಗದಿರುವುದರಿಂದ ಧರಿಸದಿರುವುದೇ ಉತ್ತಮ. ಆದರೆ ಶಾಪಿಂಗ್‌ಗೆ ಹೋಗುವಾಗ, ಸಿನೆಮಾಕ್ಕೆ ಹೋಗುವಾಗ ಅಥವಾ ಪಿಕ್‌ನಿಕ್‌, ಪ್ರವಾಸ, ಪಾರ್ಟಿ ಮುಂತಾದೆಡೆ ಹೋಗುವಾಗ ಧರಿಸಲು ಅತ್ಯಂತ ಸೂಕ್ತ.

ಇದನ್ನೂ ಓದಿ:ರೆಗ್ಯುಲರ್ ಟೀ ಬದಲು ಇದನ್ನು ಕುಡಿದು ನೋಡಿ

ಹೊಲಿದು ಕೊಡುವ ವ್ಯವಸ್ಥೆ
ಇಂತಹ ಟಾಪ್‌ ಗಳನ್ನು  ಟೈಲರಿಂಗ್‌ ಶಾಪ್‌ ಗಳಲ್ಲಿ  ಬೇಕಾದ ರೀತಿಯಲ್ಲಿ ಹೊಲಿದು ಕೊಡುವ ವ್ಯವಸ್ಥೆಯೂ ಇದೆ. ಆದರೆ ಟಾಪ್‌ ಗಳನ್ನು  ಸ್ಟಿಚ್‌ ಮಾಡಿ ಧರಿಸಿದರೂ, ಶರ್ಟ್‌ಗಳಲ್ಲಿ ರೆಡಿಮೇಡ್‌ ಶರ್ಟ್‌ಗಳೇ ಸೂಕ್ತ. ಕೇವಲ ಕಪ್ಪು, ಬಿಳುಪು, ನೀಲಿ ಬಣ್ಣದ ಜೀನ್ಸ್‌ಗಳ ಬದಲು ಪ್ರಸ್ತುತ ಕಲರ್‌ಫುಲ್‌ ಜೀನ್ಸ್‌ ಗಳು ಬಂದಿರುವುದರಿಂದ ಅಂತಹ ಜೀನ್ಸ್‌ ಪ್ಯಾಂಟ್‌ಗಳಿಗೆ ಈ ಟಾಪ್‌ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಟಾಪ್ ನ್ಯೂಸ್

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

S. M. Krishna ಆರೋಗ್ಯದಲ್ಲಿ ಚೇತರಿಕೆ; ಖರ್ಗೆ, ವಿಜಯೇಂದ್ರ ಭೇಟಿ

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು

Eshwarappa ಕಣದಿಂದ ಹಿಂದೆ ಸರಿದ ನಕಲಿ ಸುದ್ದಿ ವೈರಲ್‌: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Lok Sabha ಚುನಾವಣೆ ಮುಗಿಯಿತು; ಇನ್ನು ಫ‌ಲಿತಾಂಶದ ಜಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.