ಘಾಗ್ರಾ, ಲೆಹೆಂಗಾ, ಚುಂದರ್‌

ಆಹಿರ್‌ ಎಂಬ ಇನ್ನೊಂದು ಹರಿಯಾಣದ ಮುಖ್ಯ ಪಂಗಡದಲ್ಲಿ ಸ್ತ್ರೀಯರು ಅಂಗಿಯಾ ಲೆಹಂಗಾ ಹಾಗೂ ಚುಂದರ್‌ ಧರಿಸುತ್ತಾರೆ

Team Udayavani, Oct 25, 2020, 9:10 AM IST

ಘಾಗ್ರಾ, ಲೆಹೆಂಗಾ, ಚುಂದರ್‌

ಹರಿಯಾಣ ರಾಜ್ಯವು ಭಾರತದ ಸಿರಿವಂತ ರಾಜ್ಯಗಳಲ್ಲಿ ಒಂದು. ಅಂತೆಯೇ ಸಾಂಸ್ಕೃತಿಕ ವಾಗಿಯೂ ಸಿರಿವಂತವಾಗಿರುವ ಈ ರಾಜ್ಯದ ಉಡುಗೆ- ತೊಡುಗೆಯೂ ತನ್ನದೇ ಆದ ವೈಶಿಷ್ಟ್ಯಹೊಂದಿದೆ. ಹರಿಯಾಣದ ಮುಖ್ಯ ಒಂದು ಪಂಗಡವಾಗಿರುವ ಜಾಟ್‌ ಜನಾಂಗದ ಸಮುದಾಯದಲ್ಲಿ ಮಹಿಳೆಯರು ದಾಮನ್‌ ಎಂಬ ಹೆಸರಿನ ಘಾಗ್ರಾದಂತಹ ತೊಡುಗೆಯನ್ನು ಧರಿಸುತ್ತಾರೆ. ಘಾಗ್ರಾದಲ್ಲಿ ವೈಶಿಷ್ಟ್ಯವಿರುವಂತೆ ಹಲವು ವಿನ್ಯಾಸಗಳನ್ನೂ, ಗಾಢ ರಂಗುಗಳಿಂದಲೂ ದಾಮನ್‌ ಅಲಂಕರಿಸ್ಪಟ್ಟಿರುತ್ತದೆ. ತುದಿಯ ಭಾಗದಲ್ಲಿ ಅಂದದ ಜರಿಯ ಅಂಚನ್ನೂ ಹೊಂದಿರುತ್ತದೆ.

ಇದರ ಮೇಲೆ ಧರಿಸುವ ಕುಪ್ಪಸವು ಶರ್ಟ್‌ನ ರೀತಿಯಲ್ಲಿ ಉದ್ದದ ನಿಲುವಂಗಿ ಯಂತಿದ್ದು ಅದರ ಮೇಲೆ ಬಣ್ಣ ಬಣ್ಣದ ಓಢನಿ ತೊಡುತ್ತಾರೆ. ಓಢನಿಗೆ ಈ ಪ್ರದೇಶದ ಜನರು ಚುಂದರ್‌ ಎಂದು ಕರೆಯು ತ್ತಾರೆ. ಇದನ್ನೂ ಸಹ ಪ್ರಾದೇಶಿಕ ವೈಶಿಷ್ಟ್ಯ ಗಳೊಂದಿಗೆ ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಲಾಗಿ ರುತ್ತದೆ. ಚುಂದರ್‌ನ ಒಂದು ಭಾಗ ಸೊಂಟದ ಸುತ್ತು ಸುತ್ತಿದ್ದು, ತದನಂತರ ಹೆಗಲು ಹಾಗೂ ತಲೆಯ ಭಾಗವನ್ನು ಸುತ್ತಿ ಮೇಲ್‌ವಸ್ತ್ರದಂತೆ ಧರಿಸುತ್ತಾರೆ.

ಆಹಿರ್‌ ಎಂಬ ಇನ್ನೊಂದು ಹರಿಯಾಣದ ಮುಖ್ಯ ಪಂಗಡದಲ್ಲಿ ಸ್ತ್ರೀಯರು ಅಂಗಿಯಾ ಲೆಹಂಗಾ ಹಾಗೂ ಚುಂದರ್‌ ಧರಿಸುತ್ತಾರೆ.

“ಅಂಗಿಯಾ’ದ ವಿಶೇಷವೆಂದರೆ ಇದು ಕುಪ್ಪಸದಂತೆ ವಿನ್ಯಾಸಮಾಡಲಾಗಿದ್ದರೂ ಉದ್ದವಾಗಿದ್ದು ಅಂದವಾದ ವಿನ್ಯಾಸ ಹೊಂದಿರುತ್ತದೆ. ಇದರ ಸುತ್ತ ಓಢನಿ ಸುತ್ತಿಕೊಳ್ಳುವುದು ಸಾಮಾನ್ಯ.

ಹರಿಯಾಣದ ಮಹಿಳೆಯರ ಸಾಂಪ್ರದಾಯಿಕ ಉಡುಗೆಗೆ ವಿಶೇಷ ಮೆರುಗು ನೀಡುವುದು ಭಾರತೀಯ ಶೈಲಿಯ ಪಾದರಕ್ಷೆ! ಈ ಸಾಂಪ್ರದಾಯಿಕ ಪಾದರಕ್ಷೆಗೆ “ಜುಟ್ಟಿ’ ಎಂದು ಕರೆಯುತ್ತಾರೆ.

ಹರಿಯಾಣದ ಮಹಿಳೆಯರು ಅಧಿಕವಾಗಿ ಕೃಷಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಈ ಬಗೆಯ ಸಾಂಪ್ರದಾಯಿಕ ವಸ್ತ್ರವಿನ್ಯಾಸ ಆರಾಮದಾ ಯಕವಾಗಿರುತ್ತದೆ. ಹರಿಯಾಣದ ಅಗರ್‌ವಾಲ್‌ ಪಂಗಡದ ಮಹಿಳೆಯರು ಸೀರೆಯನ್ನು ಅಧಿಕ ಉಡುತ್ತಾರೆ.

ಹರಿಯಾಣದ ವಧು
ವಧುವಿನ ಸಾಂಪ್ರದಾಯಿಕ ತೊಡುಗೆಯೂ ಇತ್ತೀಚಿನ ದಶಕಗಳಲ್ಲಿ ವೈವಿಧ್ಯತೆಯೊಂದಿಗೆ ಜನಪ್ರಿಯತೆಯನ್ನು ಪಡೆದುಕೊಂಡಿದೆ.

“ಥೇಲ್‌’ ಎಂದು ಕರೆಯಲಾಗುವ ಉದ್ದದ ನಿಲುವಂಗಿ (ಶರ್ಟ್‌ನಂತಿರುವ)ವನ್ನು ಮದುವೆಯ ದಿನ ವಿಶೇಷವಾಗಿ ಅಲಂಕರಿಸಿ ವಧುವಿಗೆ ತೊಡಿಸಲಾಗುತ್ತದೆ. ಘಾಗ್ರಾದಂತಿರುವ ಉಡುಗೆಗೆ “ಘಾಗ್ರಾ’ ಎಂದು ಕರೆಯಲಾಗುತ್ತದೆ. ಥೇಲ್‌ನೊಂದಿಗೆ ಘಾಗ್ರಾವನ್ನು ತೊಟ್ಟ ಅಲಂಕೃತ ವಧುವು ವೈಭಯುತ ಕಸೂತಿ ಹಾಗೂ ಜರಿಯ ವಿನ್ಯಾಸಗಳನ್ನು ಹೊಂದಿರುವ ಓಢನಿಯನ್ನು ತೊಡುತ್ತಾರೆ.

ಅಂತೆಯೇ ಗಾಢ ರಂಗಿನ, ವೈಭವಯುತ ವಿನ್ಯಾಸದ ಲೆಹಂಗಾ ಹಾಗೂ ಅಂಗಿಯಾ ಕೂಡ ಹರಿಯಾಣದ ವಧುವಿನ ಸಾಂಪ್ರದಾಯಿಕ ತೊಡುಗೆಯಾಗಿದೆ. ಕೆಲವು ವರ್ಗಗಳಲ್ಲಿ ಸೀರೆಯೂ ಸಾಂಪ್ರದಾಯಿಕ ತೊಡುಗೆಯಾಗಿದೆ. ಹೀಗೆ ಹರಿಯಾಣದ ಸಾಂಪ್ರದಾಯಿಕ ವಧುವಿನ ಉಡುಗೆ- ತೊಡುಗೆಯೂ ಮಹತ್ವಪೂರ್ಣ ವೈವಿಧ್ಯತೆ ಪಡೆದುಕೊಂಡಿದೆ.

ಈ ಸಾಂಪ್ರದಾಯಿಕ ಉಡುಗೆಗೆ ತನ್ನದೇ ಆದ “ಹರಿಯಾಣೀ’ ಸೊಬಗನ್ನು ನೀಡುವುದು ಸಾಂಪ್ರದಾಯಿಕ ಆಭರಣಗಳ ಶೃಂಗಾರ! ಕತ್ಲಾ ಎಂದು ಕರೆಯುವ ಕುತ್ತಿಗೆಯ ಆಭರಣ, ಬೋರ್ಲಾ ಎನ್ನುವ ವಿಶೇಷ ವಿನ್ಯಾಸದ ಕೂದಲಿನ ಆಭರಣ, “ನಾಥ್‌’ ಎಂಬ ವಿಶೇಷ ಮೂಗಿನ ನತ್ತು, ಹನ್‌ಸಿಲ್‌ ಎಂಬ ಸಾಂಪ್ರದಾಯಿಕ ಬಳೆಗಳು- ಇವು ಹರಿಯಾಣದ ಸಾಂಪ್ರದಾಯಿಕ ಉಡುಗೆಯೊಂದಿಗೆ ವಧುವು ತೊಡುವ ಸಾಂಪ್ರದಾಯಿಕ ಆಭರಣವಾಗಿದೆ.

ಇಂದು ಹರಿಯಾಣದ ಮಹಿಳೆಯರ ಸಾಂಪ್ರದಾಯಿಕ ತೊಡುಗೆ ತನ್ನ ಆಕರ್ಷಣೆಯಿಂದಾಗಿ ಕೇವಲ ಹರಿಯಾಣದ ಪ್ರದೇಶವಷ್ಟೇ ಸೀಮಿತವಾಗದೆ ಭಾರತದ ಎಲ್ಲೆಡೆಯೂ ಪ್ರಪಂಚದ ಹಲವೆಡೆಯೂ ಧರಿಸಲ್ಪಡುವ ತೊಡುಗೆಯಾಗಿದೆ! “ವಿಶ್ವಗ್ರಾಮ’ ಅಥವಾ “ಗ್ಲೋಬಲ್‌ ವಿಲೇಜ್‌’ನ ಪರಿಣಾಮ ಸ್ವರೂಪೀ ಆಧುನಿಕತೆಗೆ ಹರಿಯಾಣದ ಉಡುಗೆ-ತೊಡುಗೆಯ ಸಾಂಪ್ರದಾಯಿಕ ಜನಪ್ರಿಯತೆಯನ್ನು ಸಮೀಕರಿಸಬಹುದಷ್ಟೇ!

ಅನುರಾಧಾ ಕಾಮತ್‌

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.