ಹೆಲ್ತ್ಟಿಪ್ಸ್ ಅಡುಗೆ ಮನೆಯಲ್ಲಿ ಇಮ್ಯುನಿಟಿ
ದೇಹದಲ್ಲಿ ವಿಟಮಿನ್ ಸಿ ಕೊರತೆ ಆದಾಗಲೇ ನಮಗೆ ಕೆಮ್ಮು, ನೆಗಡಿ, ಗಂಟಲ ಕೆರೆತ ಬರುವುದು...
Team Udayavani, Nov 29, 2020, 10:15 AM IST
ಸಾಂದರ್ಭಿಕ ಚಿತ್ರ
ಈಗ ಎಲ್ಲೆಲ್ಲೂ ಒಂದೇ ಮಾತು ಇಮ್ಯುನಿಟಿ ಪವರ್ ಅರ್ಥಾತ್ ರೋಗ ನಿರೋಧಕ ಗುಣ ಹೆಚ್ಚಿಸಿಕೊಳ್ಳೋದು. ಇದಕ್ಕಾಗಿ ಶುಂಠಿ ಕಷಾಯ, ಮೆಣಸಿನ ಕಷಾಯ, ಸೊಗದ ಬೇರಿನ ಷರಭತ್ತು, ಒಂದೇ ಎರಡೇ… ಜನ ದಿನವೂ ಕುಡಿಯುವುದರಲ್ಲಿ ನಿರತರಾಗಿ, ದೇಹದ ತಾಪಮಾನವೂ ಹೆಚ್ಚಾಗಿ, ಮತ್ತಿನ್ಯಾವುದೋ ಸಮಸ್ಯೆಯತ್ತ ತಿರುಗುತ್ತಿದೆ. ಇದೆಲ್ಲ ಬಿಡಿ, ನಮ್ಮ ದೇಹದ ಲ್ಲಿ ರೋಗನಿರೋಧಕ ಗುಣ ಹೆಚ್ಚಿಸುವಲ್ಲಿ ಹಣ್ಣುಗಳ ಪಾತ್ರ ಕೂಡ ದೊಡ್ಡದು. ಅದರಲ್ಲೂ ಸಿಟ್ರಸ್ಅಂಶ ಇರುವ ಹಣ್ಣುಗಳನ್ನು ತಿಂದು ನೋಡಿ. ಅನಾರೋಗ್ಯ ಅನ್ನೋದು ಓಡಿ ಹೋಗುತ್ತದೆ.
ಒಂದು ಸಂಗತಿ ಗೊತ್ತಾ? ದೇಹದಲ್ಲಿ ವಿಟಮಿನ್ ಸಿ ಕೊರತೆ ಆದಾಗಲೇ ನಮಗೆ ಕೆಮ್ಮು, ನೆಗಡಿ, ಗಂಟಲ ಕೆರೆತ ಬರುವುದು. ಸಿಟ್ರಸ್ ಅಂಶ ಹೆಚ್ಚಿರುವ ಕಿತ್ತಳೆ ಹಣ್ಣು, ನಿಂಬೆ ಹಣ್ಣು, ಹುಣಸೆ, ಟೊಮೆಟೊ ಇದ್ದರೆ ಸಾಕು; ಇದರ ಬಳಕೆಯಿಂದ ದೇಹಕ್ಕೆ ಸಿಟ್ರಸ್ ಅಂಶ ಸೇರುತ್ತದೆ. ಬೆಳಗ್ಗೆ ಎದ್ದು ಒಂದು ಕೆಲಸ ಮಾಡಿ, ಬಿಸಿನೀರಿಗೆ ನಿಂಬೆ ರಸ ಸೇರಿಸಿ ಕುಡಿದು ನೋಡಿ. ಅಡುಗೆ ಮತ್ತು ತಿಂಡಿಯಲ್ಲಿ ಸಾಧ್ಯವಾದಷ್ಟು ನಿಂಬೆ ಬಳಸಿ. ಇಷ್ಟು ಮಾಡಿದರೆ, ವೈರಾಣುಗಳು ನಿಮ್ಮ ಬಳಿ
ಸುಳಿಯಲಾರವು. ಇನ್ನೊಂದು ವಿಚಾರ, ಜೀರ್ಣ ಕ್ರಿಯೆ ಚೆನ್ನಾಗಿ ಆದರೆ, ಯಾವ ರೋಗವೂ ದೇಹ ಹೊಕ್ಕುವುದಿಲ್ಲ. ಹಾಗಾಗಿ, ಹೊಟ್ಟೆ ಸಮಸ್ಯೆ ಕಡಿಮೆ ಮಾಡಲು ಮೊಸರು, ಮಜ್ಜಿಗೆ ಕುಡಿಯಿರಿ.
ಗಂಟಲು ಉರಿ, ಕೆರೆತ ಇವನ್ನೆಲ್ಲ ಕಡಿಮೆ ಮಾಡುವ ಗುಣ ಬೆಳ್ಳುಳ್ಳಿಗೆ ಇದೆ. ಕಾರಣ, ಬೆಳ್ಳುಳ್ಳಿಯಲ್ಲಿ ಅಲಿಸಿನ್ ಅಂಶ ಇರುವುದು. ಶುಂಠಿ ರಸದೊಂದಿಗೆ ಸ್ವಲ್ಪ ಕರಿಮೆಣಸು ಸೇರಿಸಿ ಕುಡಿದರೆ ಗಂಟಲು ಕೆರೆತ ಮಾಯವಾಗುತ್ತದೆ. ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ ಮಾತ್ರವಲ್ಲ, ಆಂಟಿ ಆಕ್ಸಿಡೆಂಟ್ ಗುಣವೂ ಹೆಚ್ಚಿದೆ. ಹೀಗಾಗಿ, ಪಾಲಾಕ್ ಜ್ಯೂಸ್ ಕುಡಿದರೆ ರೋಗ ನಿರೋಧಕ ಗುಣ ಹೆಚ್ಚುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು
Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್ ಮೊರೆಹೋಗಿ
World Kidney Day: ಹಿಮೋಡಯಾಲಿಸಿಸ್: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?
Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ
ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ