ಕುರುಬ ಸಮಾಜಕ್ಕೆ ಎಸ್.ಟಿ.ಮೀಸಲು ನೀಡದಿದ್ದರೆ ಸಚಿವರು, ಶಾಸಕರು ಪದತ್ಯಾಗಕ್ಕೂ ಸಿದ್ಧ
Team Udayavani, Nov 29, 2020, 10:22 AM IST
ಬಾಗಲಕೋಟೆ: ಕುರುಬ ಸಮಾಜಕ್ಕೆ ಎಸ್.ಟಿ ಮೀಸಲು ಸೌಲಭ್ಯದ ನ್ಯಾಯ ಸಿಗಬೇಕು. ಇಲ್ಲದಿದ್ದರೆ ನಮ್ಮ ಸಮಾಜದ ಸಚಿವರು, ಶಾಸಕರು ಸಕಾ೯ರದಲ್ಲಿ ಮುಂದುವರೆಯುವ ಮತ್ತು ಬಿಡುವ ಬಗ್ಗೆ ಚಿಂತನೆ ಮಾಡಬೇಕಾಗುತ್ತದೆ ಎಂದು ಕನಕಗುರುಪೀಠದ ಹೊಸದುರ್ಗಶಾಖಾ ಪೀಠದ ಈಶ್ವರಾನಂದಪುರಿ ಸ್ವಾಮೀಜಿ ಗುಡುಗಿದ್ದಾರೆ
ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಬೃಹತ್ ಎಸ್ ಟಿ ಹೋರಾಟ ಸಮಾವೇಶದಿಂದ ಮಾಜಿ ಸಿಎಂ ಸಿದ್ದರಾಮಯ್ಯ ದೂರ ಉಳಿದಿಲ್ಲ. ಸಿದ್ದರಾಮಯ್ಯ ಕುರುಬ ಎಸ್ ಟಿ ಸೇರ್ಪಡೆ ವಿರೋಧಿಯಲ್ಲ. ಅವರಿಗೂ ಒಪ್ಪಿಗೆ ಇದೆ, ಸಮಾವೇಶದಲ್ಲಿ ಮಾತ್ರ ಭಾಗವಹಿಸುತ್ತಿಲ್ಲ. ಒಪ್ಪಿಗೆ ಪಡೆದೆ ಈ ಸಮಾವೇಶ ಮಾಡ್ತಿದ್ದೇವೆ ಎಂದರು.
ಈಶ್ವರಪ್ಪ -ಸಿದ್ದರಾಮಯ್ಯ ಒಂದೇ ವಿಚಾರ ಇದೆ. ಇಬ್ಬರದ್ದು ವಿರುದ್ದ ದಿಕ್ಕಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯರಿಂದಲೂ ಎಸ್.ಟಿ ಸೇರ್ಪಡೆಗೆ ಬೆಂಬಲ ಇದೆ ಎಂದು ಹೇಳಿದರು.
ಜನೇವರಿ 15ರಂದು ಕಾಗಿನೆಲೆಯಿಂದ ಬೆಂಗಳೂರವರೆಗೆ ಬೃಹತ್ ಪಾದಯಾತ್ರೆ ಮಾಡುತ್ತೇವೆ. ಪಾದಯಾತ್ರೆ ಫೆ.7ಕ್ಕೆ ಬೆಂಗಳೂರಲ್ಲಿ ಸೇರಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಸಿದ್ದರಾಮಯ್ಯ -ಈಶ್ವರಪ್ಪ ಒಂದೇ ವೇದಿಕೆಯಲ್ಲಿ ತರಲು ಪ್ರಯತ್ನ ಮಾಡಿದೇವು. ಆದರೆ ಸಿದ್ದರಾಮಯ್ಯ ಬೆಂಬಲ ನೀಡಿ ಕಾರ್ಯಕ್ರಮದಿಂದ ಹಿಂದುಳಿದಿದ್ದಾರೆ. ಅವರ ಸಂಪೂರ್ಣ ಬೆಂಬಲ ಇದೆ. ಸಿದ್ದು ಸಿಎಂ ಆಗಿದ್ದಾಗ ನ್ಯಾಯ ಸಿಗಬಹುದಿತ್ತು. ಯಾಕೆ ಅಂತ ಗೊತ್ತಾಗಿಲ್ಲ. ಮೊಯ್ಲಿ, ಹೆಗಡೆ ಅವರು ಯಾರೂ ಮಾಡಲಿಲ್ಲ. ಆದರೆ ದೇವರಾಜ್ ಅರಸು ಸಹಾಯ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದರು ಎಂದು ಹೇಳಿದರು.
ಇದನ್ನೂ ಓದಿ:‘ಪ್ರವಾದಿಗಳಿಗೆ ಕೋಪ ಬಂದರೆ ಒಂದೇ ಶಿಕ್ಷೆ’: ಮಂಗಳೂರಿನಲ್ಲಿ ಮತ್ತೆ ವಿವಾದಾತ್ಮಕ ಗೋಡೆ ಬರಹ
ಎಸ್ ಟಿ ಸಮಾವೇಶ ಮೂಲಕ ಈಶ್ವರಪ್ಪ, ಪುತ್ರ ಕಾಂತೇಶ ಅವರನ್ನು ರಾಜಕೀಯವಾಗಿ ಮುನ್ನಲೆಗೆ ತರುವ ವಿಚಾರದಿಂದ ಮಾಡುತ್ತಿಲ್ಲ. ಇದರಲ್ಲಿ ಯಾರ ಹಿತಾಸಕ್ತಿಯೂ ಇಲ್ಲ. ಇಲ್ಲಿ ಒಂದೇ ಬೇಡಿಕೆ. ಬೇರೆ ಕಲ್ಪನೆ ನೀಡುವುದು ಬೇಡ ಎಂದರು.
ಯಾರನ್ನೂ ಮುನ್ನಲೆಗೆ ತರುವುದಲ್ಲ, ಕಾಂತೇಶ್ ರಾಜಕೀಯವಾಗಿ ತರುವುದೂ ಅಲ್ಲ. ಕುರುಬರಿಗೆ ಎಸ್ ಟಿ ಮೀಸಲಾತಿ ಸಿಗಬೇಕೆಂದು ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶಾಸಕರು, ಮಂತ್ರಿಗಳು ಸಮಾಜಕ್ಕಾಗಿ ಅಧಿಕಾರ ತ್ಯಾಗ ಮಾಡಬೇಕೆಂದರೆ ಮಾಡಲೇಬೇಕು. ಸಮಯ ಬಂದರೆ ನಮ್ಮ ಶಾಸಕರಿಗೂ ಅಧಿಕಾರ ತ್ಯಾಗಕ್ಕೆ ಹೇಳುತ್ತೇವೆ. ಖಂಡಿತ ಅಧಿಕಾರ ತ್ಯಾಗಕ್ಕೆ ಕೇಳಿಯೇ ಕೇಳುತ್ತೇವೆ ಎಂದರು.
ಕುರುಬ ಸಮಾಜದ ಎಚ್ ವಿಶ್ವನಾಥ, ಎಂಟಿಬಿ, ಆರ್ ಶಂಕರ್ ಗೆ ಸಚಿವ ಸ್ಥಾನ ನೀಡಬೇಕು. ಬಿಜೆಪಿ ಸರ್ಕಾರ ಬರಲು 4 ಜನ ಶಾಸಕರ ಪಾತ್ರ ಇದೆ. ಅವರು ಬಂದಿದ್ದರಿಂದ ಬಿಜೆಪಿ ಸಕಾ೯ರ ಬಂತು. ಮಾತು ಕೊಟ್ಟಂತೆ ಸಿಎಂ ನಡೆಯಬೇಕು. ನಡೆಯುತ್ತಾರೆನ್ನುವ ಭರವಸೆ ಇದೆ. ಎಚ್.ವಿಶ್ವನಾಥ, ಎಂಟಿಬಿ, ಆರ್.ಶಂಕರ್ ಮೂರು ಶಾಸಕರಿಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಒತ್ತಾಯಿಸಿದರು.
ಸಚಿವ ಸ್ಥಾನ ಕೊಡದೆ ಹೋದರೆ ಯಾವ ತೀರ್ಮಾನ ಕೈಗೊಳ್ಳಬೇಕಾ ಅಂತ ನಿರ್ಧಾರ ಮಾಡುತ್ತೇವೆ ಎಂದು ಎಚ್ಚರಿಸಿದರು.