ದೀಪಗಳ ಹಬ್ಬ…ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ

ಬಲಿಯನ್ನು ಜಗದ ಜನರು ನೆನಪಿಸುವ ಸಲುವಾಗಿ 'ಬಲಿಪಾಡ್ಯ' ಎಂಬ ಆಚರಣೆ ಬಹಳ ಪ್ರಾಮುಖ್ಯ ಪಡೆದಿದೆ .

Team Udayavani, Nov 14, 2020, 4:04 PM IST

ದೀಪಗಳ ಹಬ್ಬ…ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ

ಹಬ್ಬಗಳ ರಾಜ ದೀಪಾವಳಿ . ನಮ್ಮ ತುಳುನಾಡಿನ ನೆಚ್ಚಿನ ಮಾರ್ನೆಮಿ ( ನವರಾತ್ರಿ ) ಯ ನಂತರ ಜಗಮಗಿಸುತ ಬರುವ ಹಬ್ಬವೇ ದೀಪಗಳ ಸಾಲು ಸಾಲು ಹಬ್ಬ ದೀಪಾವಳಿ . ಈ ಹಬ್ಬದ ಹೆಸರು ಕೇಳಿದಾಕ್ಷಣ ಎಲ್ಲಾ ಮಕ್ಕಳ ಬಾಯಿಯಲ್ಲಿ ನೀರೂರುವುದಂತು ಸಹಜ . ಏಕೆಂದರೆ ಈ ಹಬ್ಬದ ಸಮಯದ ಉದ್ದಿನ ದೋಸೆ ಹಾಗೂ ಮೆಣಸಿನ ಗಟ್ಟಿ ಮರೆಯಲಸದಳ . ಇದು ದೀಪಾವಳಿಯ ವಿಶೇಷವೂ ಹೌದು .

‘ಹಬ್ಬವಿಲ್ಲದ ಮನೆಯಿಲ್ಲ , ಹುಬ್ಬಿಲ್ಲದ ಹಣೆಯಿಲ್ಲ’ ಎಂಬ ನುಡಿ ಹಬ್ಬ ಹರಿದಿನದ ಪ್ರಾಶಸ್ತ್ಯ ಎತ್ತಿ ಹಿಡಿಯುತ್ತದೆ. ನಮ್ಮದು ಹಳ್ಳಿ ಪ್ರದೇಶ . ಕೆಲವೊಮ್ಮೆ ಅಗತ್ಯತೆಯ ವಸ್ತು ತರಲು ಪೇಟೆಯ ಕಡೆಗೆ ತೆರಳಬೇಕಾದುದು ಅನಿವಾರ್ಯ . ಆ ದಿನ ತಂದೆಯೊಂದಿಗೆ ನಾನೂ ಹೋಗಿದ್ದೆ . ಕೆಲವೊಂದು ಹಣತೆ ಇಲಿಗಳ ಉಪಟಳದಿಂದ ಹಾಳಾಗಿದೆ ! ಹೊಸದು ತನ್ನಿ ಎಂದು  ತಾಯಿ ಕರೆಮಾಡಿ ಹೇಳಿದರು . ಅಂತೆಯೇ ಒಂದಷ್ಟು ಹೊಸ ಹಣತೆ ತೆಗೆದುಕೊಂಡು ಬಂದೆವು .

ಅಪ್ಪಾ…ನೀವು ಸಣ್ಣವರಿರುವಾಗ ಇಂತಹ ಹಣತೆ ದೊರಕುತ್ತಿತ್ತಾ ?  ಎಂದು ಆ ಸಣ್ಣ , ಸುಂದರ ಬಳ್ಳಿ ಬಿಡಿಸಿದ ಚಿತ್ತಾರದ , ನಯವಾದ ಹಣತೆಯನ್ನು ಸವರುತ್ತಾ ಕೇಳಿದೆ .

ನಮ್ಮ ಬಾಲ್ಯದ ದಿನಗಳಲ್ಲಿ ಅಡಕೆ ಸಿಪ್ಪೆ ಸುಳಿದ ನಂತರ ಭಾಗವಾಗಿ ಉಳಿದ ಆ ಸಿಪ್ಪೆಗೆ ಎಣ್ಣೆ ಹೊಯ್ದು ಹಣತೆ ಮಾಡುತ್ತಿದ್ದೇವು  ಎಂದರು . ನಿಸರ್ಗದ ಸೊಬಗಿನ್ನು ಅನುಭವಿಸಿದ ಪೂರ್ವಜರು , ಅವರ ಕಟ್ಟುಪಾಡು ಸೋಜಿಗವೆನಿಸಿತು. ನರಕ ಚತುರ್ದಶಿ – ಅಮವಾಸ್ಯೆ –  ಬಲಿಪಾಡ್ಯ ಸಾಮಾನ್ಯವಾಗಿ ಹೀಗೆ ಮೂರುದಿನ ದೀಪಾವಳಿಯನ್ನು ಆಚರಿಸಲಾಗುತ್ತದೆ .

ಇದನ್ನೂ ಓದಿ:ರಾಜಸ್ಥಾನದ ಲೋಂಗೇವಾಲಾ ಗಡಿಯಲ್ಲಿ ಯೋಧರ ಜತೆ ಪ್ರಧಾನಿ ಮೋದಿ ದೀಪಾವಳಿ ಆಚರಣೆ

ನರಕ ಚತುರ್ದಶಿಯಿಂದ ದೀಪಾವಳಿ ಆರಂಭ . ದೇವಾಲಯ – ಜಿನಾಲಯ ,  ಮನೆ – ಮಠಗಳಲೆಲ್ಲಾ ದೀಪಗಳು ರಾರಾಜಿಸುತ್ತದೆ. ನರಕ ಚತುರ್ದಶಿ ಎಂದಾಗ ನೆನಪಾಗುವುದು ನರಕಾಸುರನ ವಧೆ . ದೇವಾನು ದೇವತೆಗಳಿಗೆ ಕಂಟಕರೂಪಿಯಾಗಿದ್ದವನು ಈ ನರಕಾಸುರ . ದೇವತೆಗಳನ್ನು ಕದ್ದೊಯ್ದಿದ್ದ  , ಬ್ರಹ್ಮನ ಮಗಳಾದ ಚತುರ್ದಶಿಯನ್ನು ಅಪಹರಿಸಿದ್ದ . ಇವಕ್ಕೆಲ್ಲದಕ್ಕೂ ಅಂತ್ಯ ಹಾಡಲು ಧರೆಗೆ ಅವತರಿಸಿದವನೇ ಶ್ರೀ ಕೃಷ್ಣ ಪರಮಾತ್ಮ . ಅಶ್ವೀಜ ಮಾಸದ ಚತುರ್ದಶಿಯಂದು ನರಕಾಸುರನನ್ನು , ಶ್ರೀ ಕೃಷ್ಣ ಸಂಹರಿಸಿದ್ದರಿಂದ , ಆತನನ್ನು ನೆನಪಿಡುವ ಅಥವಾ ಸ್ಮರಿಸುವ ನಿಟ್ಟಿನಲ್ಲಿ ನರಕ ಚತುರ್ದಶಿಯನ್ನು ಆಚರಿಸಲಾಗುತ್ತಿದೆ ಎಂಬ ವಾಡಿಕೆ ರೂಢಿಯಲ್ಲಿದೆ .

ಅಭ್ಯಂಗ ಸ್ನಾನ ( ಎಣ್ಣೆ ಸ್ನಾನ ) ಈ ದಿನದ ವಿಶೇಷ  ಹಾಗೂ ಜಿನ ಚೈತ್ಯಾಲಯಗಳಲ್ಲಿ ಜಿನ ಭಗವಂತನಿಗೆ ಎಣ್ಣೆ ಮಜ್ಜನ ಮಾಡಲಾಗುತ್ತದೆ .

ಅಮವಾಸ್ಯೆಯ ದಿನ. ಇದು ದೀಪಾವಳಿ ಹಬ್ಬದ ಎರಡನೇ ದಿನ . ಜೈನ ಧರ್ಮದ ಪ್ರಕಾರ ವರ್ಧಮಾನ ಕಾಲದ ಇಪ್ಪತ್ತನಾಲ್ಕನೇ ತೀರ್ಥಂಕರನಾದ ಭಗವಾನ್‌ ಶ್ರೀ ಮಹಾವೀರ ಸ್ವಾಮಿ ಮೋಕ್ಷ ಪಡೆದಿದ್ದು ಈ ದೀವಳಿಗೆಯ ಬೆಳಕಿನಲ್ಲಿ ಎಂಬ ಪ್ರತೀತಿ ಇದೆ . ಹಾಗಾಗಿ ಜೈನ ಧರ್ಮೀಯರು ಈ ದಿನ ಶುಚಿಭೂರ್ತ ರಾಗಿ ಜಿನಾಲಯ ( ಬಸದಿ ) ಗೆ ತೆರಳಿ ‘ ಅರ್ಘ್ಯ ಎತ್ತುವ’ ಪದ್ದತಿ ರೂಢಿಯಲ್ಲಿದೆ . ಅಂದರೆ ಹರಿವಾಣದಲ್ಲಿ ಅಕ್ಕಿ , ಮೂವತ್ತು ಅಡಿಕೆ , ಮೂವತ್ತು ವೀಳ್ಯದೆಲೆ , ಮೂವತ್ತು ಗೊಂಡೆ ಹೂವು , ಮಧ್ಯದಲ್ಲಿ ಸೀಯಾಳ ಹಾಗೂ ಅದರ ಮೇಲೊಂದು ದೀಪ ಇಟ್ಟು ಆರತಿ ಬೆಳಗುವುದು . ಈ ವಿಧಿ – ವಿಧಾನ ಬ್ರಾಹ್ಮಿ ಮೂರ್ತದಲ್ಲಿ ಜಿನಭಗವಂತನಿಗೆ ನೆರವೇರುತ್ತದೆ . ಮರುದಿನದ ಪೂಜೆಗಾಗಿ ಮನೆಗಳಲ್ಲಿ ಬಲೀಂದ್ರನಿಗೆ ಮರ ಹಾಕುವ ಕ್ರಮವೂ ತುಳುನಾಡಿನಲ್ಲಿ ಬಹುತೇಕ ಕಡೆ ಈಗಲೂ ಚಾಲ್ತಿಯಲ್ಲಿದೆ .

ಬಲಿಪಾಡ್ಯ , ಇದು ದೀವಳಿಗೆ ಹಬ್ಬದ ಕೊನೆಯ ದಿನ . ಆಟಿ ಅಮವಾಸ್ಯೆಯ ಸಮಯದಲ್ಲಿ ಬಲಿ ಚಕ್ರವರ್ತಿಯ ತಾಯಿ ಮೇದಿನಿಗೆ  ಬರುತ್ತಾಳೆ . ಅದೇ ರೀತಿ ಬಲಿಪಾಡ್ಯದಂದು ತನ್ನ ರಾಜ್ಯ ವನ್ನು ಒಮ್ಮೆ ಬಂದು ನೋಡಿ ಹೋಗಲು ಅವನು ( ಬಲಿ ಚಕ್ರವರ್ತಿ ) ಬರುತ್ತಾನೆ  ಎಂಬ ನಂಬಿಕೆಯಲ್ಲಿ ಹಾಳೆ ಮರದ ಗೂಟ ಹಾಕಿ , ಹೂಮಾಲೆಯಿಂದ ಅಲಂಕಾರ ಮಾಡಿ , ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ ,ಸಂಕಲ್ಪ ಮಾಡುತ್ತಾರೆ . ಬಲಿಯ ಕುರಿತಾಗಿ ಬೃಹತ್‌ ಕಥನವೇ ಇದೆ . ಬಲಿ ಚಕ್ರವರ್ತಿ ಏರ್ಪಡಿಸಿದ್ದ ಕೊನೆಯ ಯಾಗದ ವೇಳೆ ವಟುವಿನಂತೆ ಬಂದ ವಾಮನ ಮೂರ್ತಿ  , ಮೂರು ಪಾದಗಳಷ್ಟು ಸ್ಟಳವನ್ನು  ದಾನವನ್ನಾಗಿ ಕೇಳಿ , ಕೊನೆಯ ಹೆಜ್ಜೆಯನ್ನಿಡಲು ಎಲ್ಲೂ ಸ್ಥಳವಿಲ್ಲದೆ , ತನ್ನ ಮೇಲೆ ಹೆಜ್ಜೆಯನ್ನಿಡುವಂತೆ ಬಲಿ ಶಿರಬಾಗಿಸಿ ನಿಂತದ್ದು …ಇದರ ಕಥೆಯೆ ಅಮೋಘ .

ಇದನ್ನೂ ಓದಿ:ಗಂಡು ಮಗುವಿಗಾಗಿ ಮಗಳನ್ನೇ ಬಲಿಕೊಟ್ಟ ತಂದೆ! ಮಾಂತ್ರಿಕನ ಬಂಧನಕ್ಕೆ ಶೋಧ

ಬಲಿಯನ್ನು ಜಗದ ಜನರು ನೆನಪಿಸುವ ಸಲುವಾಗಿ ‘ಬಲಿಪಾಡ್ಯ’ ಎಂಬ ಆಚರಣೆ ಬಹಳ ಪ್ರಾಮುಖ್ಯ ಪಡೆದಿದೆ . ಹಾಗೂ ಈ ದಿನ ಮನೆ – ಮಂದಿರಗಳಲ್ಲಿ ಧನ – ಧಾನ್ಯ ಲಕ್ಷ್ಮಿಯನ್ನು ಶ್ರದ್ಧೆಯಿಂದ ಆರಾಧಿಸುತ್ತಾರೆ . ಗೋವಿನ ಕೊರಳಿಗೆ ಹೂಮಾಲೆ ತೊಡಿಸಿ , ಸಹಸ್ರ ದೇವಾನು ದೇವತೆಗಳ ನೆಲೆಯಾಗಿರುವ ಗೋಮಾತೆಯನ್ನು  ಸಹ ಪೂಜಿಸುತ್ತಾ ಸಂಭ್ರಮ ಪಡುತ್ತಾರೆ . ಅದರೊಂದಿಗೆ ಸ್ನಾನಗೃಹದ ಹಂಡೆ ಗಳನ್ನು ಶುಚಿಗೊಳಿಸಿ ಅರಶಿನ – ಕುಂಕುಮ ಹಚ್ಚಿ ಹೂಮಾಲೆಯಿಂದ ಸಿಂಗರಿಸುತ್ತಾರೆ . ಒಂದು ರೀತಿಯಲ್ಲಿ ರೈತಾಪಿ ಜನರ ಅಥವಾ ಕೃಷಿ ಬಂಧುಗಳ ಹಬ್ಬವೆಂದೂ ಹೇಳಬಹುದೇನೋ ; ಏಕೆಂದರೆ ಕೃಷಿಯ ಸಂದರ್ಭದಲ್ಲಿ ಬಳಸುವ ಪರಿಕರಗಳಾದ ಹಾರೆ , ನೊಗ – ನೇಗಿಲು  , ಪಿಕಾಸು ಮುಂತಾದವುಗಳನ್ನು ಪ್ರೀತಿಯಿಂದ ಪೂಜಿಸುವ ಪದ್ದತಿಯೂ ರೂಢಿಯಲ್ಲಿದ್ದು , ವ್ಯಾಪಾರ – ವಹಿವಾಟು ನಡೆಸುವವರು  ಅಂಗಡಿ – ಮುಂಗಟ್ಟುಗಳಲ್ಲಿ ಪೂಜೆ ನೆರವೇರಿಸುತ್ತಾರೆ. .ಕೆಲವರು ವಾಹನ ಪೂಜೆ ಈ ಸಮಯದಲ್ಲಿ ನೆರವೇರಿಸುತ್ತಾರೆ.

ಒಟ್ಟಿನಲ್ಲಿ ಈ ದೀಪಗಳ ಹಬ್ಬ ದೀಪಾವಳಿ . ಸಾಲು ದೀಪಗಳ ಈ ಹಬ್ಬ ನಮ್ಮ ನಾಡಿಗಷ್ಟೇ ಸೀಮಿತವಾಗಿಲ್ಲ. ದೇಶ – ವಿದೇಶಗಳಲ್ಲೂ ಇದರ ಪ್ರಭೆ ಕಂಗೊಳಿಸುತ್ತಿದ್ದು, ಅನಂತವಾಗಿ ಬೆಳಗಲಿ ನಿರಂತರ ದೀಪಾವಳಿ .

ಬರಹ – ಸಮ್ಯಕ್ತ್  ಜೈನ್ ಕಡಬ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ಲಂಬಾಣಿಗರ ವೈವಿಧ್ಯಮಯ ದೀಪಾವಳಿ ಹಬ್ಬ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

ನಾಗರಿಕತೆಯ ನಡುವೆಯೂ ಗ್ರಾಮೀಣ ಸಂಸ್ಕೃತಿ ಉಳಿವಿಗೆ ಪಾಂಡವರು ಸಾಕ್ಷಿ

tdy-6

ತುಳುನಾಡಿನ ವಿಶಿಷ್ಟ ಆಚರಣೆ ಬಲೀಂದ್ರ ಪೂಜೆ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

ದೀಪಾವಳಿ ಹಣತೆಗಳಿಗೆ ಆಧುನಿಕ ಸ್ಪರ್ಶ

tdy-20

ದೀಪಾವಳಿಯ ಖುಷಿಯಲ್ಲಿ ಈ ಸಂಗತಿ ಮರೆಯದಿರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.