ಜಯಶ್ರೀ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ತೆರೆ


Team Udayavani, Oct 14, 2021, 10:47 AM IST

dasara musical programme

ಮೈಸೂರು: ಖ್ಯಾತ ಗಾಯಕಿ, ಹಿರಿಯ ಕಲಾವಿದೆ ಡಾ. ಬಿ.ಜಯಶ್ರೀ ಅವರ ಗಾಯನದೊಂದಿಗೆ 7 ದಿನಗಳ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ತೆರೆಕಂಡಿತು. ತಮ್ಮ ಕಂಚಿನ ಕಂಠದಿಂದ ಕಂಪನಿ, ಹವ್ಯಾಸಿ ನಾಟಕಗಳ ಹಲವು ಗೀತೆಗಳನ್ನು ಪ್ರಸ್ತುತಪಡಿಸಿ ರಂಜಿಸಿದ ಹಿರಿಯ ಕಲಾವಿದೆ ಜಯಶ್ರೀ ಅವರು, ಶರಣು… ಶರಣೆಂದು ಸಭಿಕರಿಗೆ ನಮಿಸುತ್ತ ಅರಮನೆ ವೇದಿಕೆ ಆಗಮಿಸಿದಾಗ ಸಭಿಕರಿಂದ ಕರಡಾತನ ಮೊಳಗಿತು.

ಲಕ್ಷ್ಮೀಪತಿ ರಾಜನ ಕತೆ ಆಧಾರಿತ ನಾಟದಕ ನಾಂದಿ ಗೀತೆ ಶ್ರೀಗಣರಾಯ ಪಾರ್ವತಿ ತನಯ ಶರಣು ಶರಣು ನಿನಗೆ.. ಗೀತೆಯೊಂದಿಗೆ ರಂಗ ಸಂಗೀತಕ್ಕೆ ಮುಂದಡಿಯಿಟ್ಟರು. ಬಳಿಕ ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕದ ಬಿ.ವಿ.ಕಾರಂತರ ಸಂಗೀತ ಸಂಯೋ ಜನೆಯ ಶರಣು ಹೇಳವಿ ಸ್ವಾಮಿ ನಾವು ನಿಮಗೆ, ಸದ್ದು ಗದ್ದಲ ಮಾಡಬ್ಯಾಡಿ ಆಟದೊಳಗೆ ಗೀತೆ ಮೂಲಕ ಪ್ರೇಕ್ಷಕರನ್ನು ರಂಗ ಸಂಗೀತ ಲೋಕಕ್ಕೆ ಕರೆದೊಯ್ದರು.

ಇದನ್ನೂ ಓದಿ;- ಸಚಿವರಿಂದ ಟಾಂಗಾದಲ್ಲಿ ನಗರ ಪ್ರದಕ್ಷಿಣೆ

ಸತ್ತವರು ನೆರಳು ನಾಟಕದ ಶಾಸ್ತ್ರೀಯ ಬದ್ಧವಾದ ಪುರಂದರ ದಾಸರ ಕೃತಿಯ ಮುಂದಿನ ವಾರ ಶುಭವಾರ, ಮುಂದಿನ ತಾರೆ ಶುಭತಾರೆ ಹಾಡಿನ ಮೂಲಕ ನಾಡಿನ ಜನರಿಗೆ ಶುಭ ಕೋರಿದರು. ಕೃಷ್ಣಲೀಲಾ ನಾಟಕದ ವಸಂತೋತ್ಸವಕ್ಕೆ ಮೊಸರು ಹಾಲು ತಕೊಂಡು ಕೃಷ್ಣನನ್ನು ನೋಡಲು ಹೊರಟ ಗೋಪಿಕೆಯರು ಹಾಡುವ ಗೋಕುಲ ಸುಖ ಸಂತೋಷ ಸುಧೆಯೋ ನಿಧಿಯೋ ಹಾಡಿನ ಮೂಲಕ ರಂಜಿಸಿದರು.

ಗಿರೀಶ್‌ ಕಾರ್ನಾಡರ ನಾಗಮಂಡಲ ನಾಟಕದ ಸಿ.ಅಶ್ವಥ್‌ ಸಂಗೀತ ಸಂಯೋಜನೆ ಹೀಗಿದ್ದಳು ಒಬ್ಬಳು ಹುಡುಗಿ ಗೀತೆಯ ಮೂಲಕ ಸಭಿಕರನ್ನು ನಕ್ಕು ನಲಿಸಿದರು. ಜಯಶ್ರೀ ಅವರ ಕಂಠಸಿರಿಯಿಂದ ಬುಧವಾರದ ಸಂಗೀತ ಸಂಜೆ ಶ್ರೀಮಂತಗೊಂಡಿತು. ಇದಕ್ಕೂ ಮುನ್ನ ಪಂಡಿತ್‌ ಜಯತೀರ್ಥ ಮತ್ತು ತಂಡದ ಹಿಂದೂಸ್ತಾನಿ ಗಾಯನ ಕೇಳುಗರನ್ನು ಮಂತ್ರಮುಗ್ಧರನ್ನಾಗಿಸಿದರು. ಗಣಪತಿ ಸಚ್ಚಿದಾನಂದ ಸ್ವಾಮೀಜಿ ರಚನೆಯ ಬೆಟ್ಟದ ತಾಯಿ ಚಾಮುಂಡಿ ಕಷ್ಟವ ಹರಿಸೇ ನಮ್ಮಮ್ಮ ಹಾಡಿದಾಗ ಶ್ರೋತೃಗಳು ಭಕ್ತಿಭಾವದಲ್ಲಿ ಪರವಶರಾದರು. ಕೊನೆಯದಾಗಿ ಮೈಸೂರಿನ ಶ್ರೀಧರ್‌ ಜೈನ್‌ ಮತ್ತು ತಂಡದವರ ನೃತ್ಯರೂಪಕದ ಮೂಲಕ 2021ರ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಯಶಸ್ವಿಯಾಗಿ ತೆರೆಬಿದ್ದಿತು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

ದಸರೆಗೆ ವೈಭವದ ತೆರೆ; 10 ದಿನ ದೀಪಾಲಂಕಾರ ವಿಸ್ತರಣೆಗೆ ಸರಕಾರ ನಿರ್ಧಾರ

13

ನಾಳೆ ನಾಡಹಬ್ಬದ ಜಂಬೂ ಸವಾರಿ

ವೈದ್ಯಕೀಯ ವಸ್ತುಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಮೈಸೂರು: ವೈದ್ಯಕೀಯ ವಸ್ತು ಪ್ರದರ್ಶನ ಉದ್ಘಾಟಿಸಿದ ಸಚಿವ ಕೆ.ಸುಧಾಕರ್

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

ದಸರಾ ಸಡಗರಕ್ಕೆ ದ್ರೌಪದಿ ಸಾಕ್ಷಿ; ನವದಿನಗಳ ನಾಡಹಬ್ಬಕ್ಕೆ ರಾಷ್ಟ್ರಪತಿ ಇಂದು ಚಾಲನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.