ರೇವಣ್ಣ “ಸ್ಪೀಚ್’ ಮುಗಿದ ಅಧ್ಯಾಯ
Team Udayavani, Mar 14, 2019, 2:00 AM IST
ಬೆಂಗಳೂರು: ಸುಮಲತಾ ವಿಚಾರದಲ್ಲಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯೇ ಕ್ಷಮೆ ಕೇಳಿದ್ದಾರೆ. ಅದು ಮುಗಿದ ಅಧ್ಯಾಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಜಯಮಾಲಾ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಹಿಳಾ ಸಾಧಕೀಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, “ಮಹಿಳೆಯ ಬಗ್ಗೆ ಯಾವುದೇ ಕಾಲಕ್ಕೂ ಯಾರೇ ಮಾತನಾಡಿದರೂ ನಾವು ಒಪ್ಪುವುದಿಲ್ಲ. ಸುಮಲತಾ ಬಗ್ಗೆ ರೇವಣ್ಣ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಸುಮಲತಾ ನನಗೆ ಚೆನ್ನಾಗಿ ಗೊತ್ತು. ಯಾವ ಹೆಣ್ಣಿನ ಬಗ್ಗೆಯೂ ಬಾಯಿ ತಪ್ಪಿಯೂ ಯಾರೂ ಮಾತನಾಡಬಾರದು’ ಎಂದರು.