ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತದೆ ಎಂದು ನಾನು ಮೊದಲೇ ಹೇಳಿದ್ದೆ: ಜನಾರ್ಧನ ಪೂಜಾರಿ
Team Udayavani, Dec 9, 2019, 12:20 PM IST
ಮಂಗಳೂರು: ನೀವು ಹೀಗೆ ದುರಂಹಕಾರ ಮಾಡಿದ್ರೆ ಬಿಜೆಪಿಯನ್ನು ತಡೆಯಲು ಆಗಲ್ಲ ಎಂದು ಹೇಳಿದ್ದೆ. ಕೈ ಮುಗಿದು, ಕಣ್ಣೀರು ಸುರಿಸಿ ಮಾತನಾಡಿದ್ದೆ. ಆದರೂ, ನನ್ನ ಪಕ್ಷದವರಿಗೆ ಅರ್ಥ ಆಗಲಿಲ್ಲ. ಈಗಲಾದರೂ ಅರ್ಥ ಆಗಿದ್ಯಾ ಎಂದು ಕೇಳುತ್ತಿದ್ದೇನೆ ಎಂದು ಹಿರಿಯ ಕಾಂಗ್ರೆಸ್ಸಿಗ ಜನಾರ್ಧನ ಪೂಜಾರಿ ಹೇಳಿದರು.
ಉಪಚುನಾವಣೆಯಲ್ಲಿ ಬಿಜೆಪಿಗೆ ಮುನ್ನಡೆ ವಿಚಾರವಾಗಿ ಅವರು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಬಿಜೆಪಿ ಹೆಚ್ಚು ಸ್ಥಾನ ಗಳಿಸುತ್ತದೆ ಎಂದು ನನ್ನ ಪಕ್ಷದವರಿಗೆ ಮೊದಲೇ ಹೇಳಿದ್ದೆ. ಅರ್ಥ ಮಾಡಿಕೊಳ್ಳಿ, ಇನ್ನು ಮುಂದೆಯೂ ಬಿಜೆಪಿಯೇ ಬರುತ್ತದೆ, ಕಾಂಗ್ರೆಸ್ ಸಾಯುತ್ತದೆ ಎಂದು ಅಭಿಪ್ರಾಯಪಟ್ಟರು.