ಶಿಕ್ಷಕರ ಸಮಸ್ಯೆ ಸಚಿವರ ಗಮನಕ್ಕೆ: ಶಾಸಕರ ಭರವಸೆ
ಬಂಟ್ವಾಳ: ಪ್ರೌಢಶಾಲಾ ಶಿಕ್ಷಕರೊಂದಿಗೆ ಸಂವಾದ
Team Udayavani, Nov 19, 2019, 4:26 AM IST
ಬಂಟ್ವಾಳ: ಪ್ರೌಢಶಾಲಾ ಶಿಕ್ಷಕರಿಗೆ ಸರಕಾರವು ವಿವಿಧ ರೀತಿಯ ತರಬೇತಿಗಳನ್ನು ಹಮ್ಮಿ ಕೊಳ್ಳುತ್ತಿರುವುದರಿಂದ ಎಸೆಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಶಿಕ್ಷಕರಿಂದಲೇ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಅದನ್ನು ರಾಜ್ಯ ಶಿಕ್ಷಣ ಸಚಿವರ ಗಮನಕ್ಕೆ ತರಲಾಗುವುದು ಎಂದು ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಸೋಮವಾರ ಬಿ.ಸಿ.ರೋಡಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಎಸೆಸೆಲ್ಸಿಯಲ್ಲಿ ಈ ಬಾರಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ತಾಲೂಕಿನ ಪ್ರೌಢಶಾಲಾ ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
ಹಲವು ಸವಾಲು
ಸಂವಾದದ ವೇಳೆ ಅಳಿಕೆ ಶಾಲಾ ಮುಖ್ಯಶಿಕ್ಷಕ ರಘುನಾಥ್ ಅವರು ಸರಕಾರಿ ಶಾಲೆಗಳ ಸಮಸ್ಯೆಗಳ ಕುರಿತು ಶಾಸಕರ ಗಮನಕ್ಕೆ ತಂದರು. ಸರಕಾರವು ಸಂಖ್ಯೆಗಳ ಆಧಾರದಲ್ಲಿ ಶಿಕ್ಷಕರನ್ನು ನೀಡು ತ್ತಿದ್ದು, ಆದರೆ ಬಹುತೇಕ ಕಡೆ ತರಗತಿಗಿಂತಲೂ ಕಡಿಮೆ ಶಿಕ್ಷಕರು ದುಡಿಯುತ್ತಾರೆ.ಇದರ ಒತ್ತಡದ ನಡುವೆ ಬೇರೆ ಬೇರೆ ತರಬೇತಿಗಳು, ಮುಖ್ಯಶಿಕ್ಷಕರಿಗೆ ಕಚೇರಿ ಕೆಲಸ, ವಿದ್ಯಾರ್ಥಿಗಳನ್ನು ಸ್ಪರ್ಧೆಗಳಿಗೆ ಕರೆದುಕೊಂಡು ಹೋಗುವುದು ಇಂತಹ ಹಲವು ಸವಾಲುಗಳು ಸರಕಾರಿ ಶಿಕ್ಷಕರ ಮೇಲಿದ್ದು, ಇದನ್ನು ನಿಭಾಯಿಸಿ ಪಾಠ ಮಾಡಬೇಕಾಗುತ್ತದೆ. ಸರಕಾರದ ಸುತ್ತೋಲೆಗಳ ಪ್ರಕಾರವೇ ನಾವು ಕೆಲಸ ಮಾಡುತ್ತಿದ್ದು, ಇದರಿಂದ ನಿರಂ ತರತೆಯಲ್ಲೂ ಕೊರತೆ ಬಂದು ವಿದ್ಯಾರ್ಥಿಗಳನ್ನು ನಿಯಂತ್ರಣದ ಲ್ಲಿಟ್ಟುಕೊಳ್ಳುವುದು ಕೂಡ ಕಷ್ಟವಾಗಿದೆ ಎಂದರು.
ಶಿಕ್ಷಕರ ಇಂತಹ ಸಮಸ್ಯೆಯನ್ನು ಆಲಿಸಿದ ಶಾಸಕರು, ಇಂತಹ ವಿಚಾರಗಳಲ್ಲಿ ಈಗಿನ ಶಿಕ್ಷಣ ಸಚಿವ ಸುರೇಶ್ಕುಮಾರ್ ಹೆಚ್ಚು ಗಂಭೀರರಾಗಿದ್ದು, ಇದನ್ನು ಅವರ ಗಮನಕ್ಕೆ ತಂದು ಪರಿಹರಿ ಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ತರಬೇತಿಗಳನ್ನು ಶಾಲೆ ಪ್ರಾರಂಭದ ದಿನಗಳಲ್ಲೇ ಮುಗಿಸುವ ಕುರಿತು ಸಲಹೆ ನೀಡುವುದಾಗಿ ತಿಳಿಸಿದರು.
ವಿದ್ಯಾರ್ಥಿಗಳ ಕೌನ್ಸೆಲಿಂಗ್
ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಕೌನ್ಸೆಲಿಂಗ್ ಮಾಡುವ ಜತೆಗೆ ಪೋಷಕರಿಗೂ ಬುದ್ಧಿವಾದ ಹೇಳುವ ಕುರಿತು ಶಾಸಕರು ಸಲಹೆ ನೀಡಿದರು. ಶಾಲೆಗಳಲ್ಲಿ ಪೋಷಕರ ಸಭೆಗಳನ್ನಿಟ್ಟಾಗ ಬೆರಳೆಣಿಕೆಯ ಪೋಷಕರು ಮಾತ್ರ ಬರುತ್ತಾರೆ ಎಂದು ಶಿಕ್ಷಕರು ಆರೋಪಿಸಿದರು. ಇಂತಹ ತೊಂದರೆಗಳಿದ್ದರೆ ಎಸ್ಡಿಎಂಸಿ ಸಮಿತಿಯನ್ನು ಸಭೆ ಕರೆದು ಚರ್ಚಿಸೋಣ ಎಂದರು.
ಗಮನಕ್ಕೆ ತನ್ನಿ
“ಶಾಲೆಗಳಲ್ಲಿ ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತನ್ನಿ. ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುವ ಯಾವುದೇ ಕೆಲಸವನ್ನು ತಾನು ಸಹಿಸುವುದಿಲ್ಲ. ಆದರೆ ಫಲಿತಾಂಶ ಮಾತ್ರ ಹೆಚ್ಚಳವಾಗಲೇಬೇಕು’ ಎಂದು ಶಿಕ್ಷಕರಿಗೆ ಸೂಚಿಸಿದರು. ಸಿದ್ಧಕಟ್ಟೆ ಶಾಲಾ ಮುಖ್ಯಶಿಕ್ಷಕ ರಮಾನಾಂದ ಅವರು ಫಲಿತಾಂಶ ಹೆಚ್ಚಳದ ಕುರಿತು ಎಲ್ಲ ಶಿಕ್ಷಕರ ಪರವಾಗಿ ಭರವಸೆ ನೀಡಿದರು.
ಪಟ್ಟಿ ನೀಡುವಂತೆ ಸೂಚನೆ
ಶಾಲೆಗಳ ಮೂಲಸೌಕರ್ಯಗಳ ಕೊರತೆ, ಪ್ರಾಕೃತಿಕ ವಿಕೋಪಗಳ ಹಾನಿ ಮೊದಲಾದ ವಿಚಾರಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಅವರು ಶಾಸಕರ ಗಮನಕ್ಕೆ ತಂದರು. ಶಾಲೆಗಳ ಕಂಪ್ಯೂಟರ್ ಕೊರತೆಯ ಕುರಿತು ಪಟ್ಟಿ ನೀಡು ವಂತೆ ಶಾಸಕರು ತಿಳಿಸಿದರು.
ಅತಿಥಿ ಶಿಕ್ಷಕರಿಗೆ ಗೌರವಧನವಿಲ್ಲ!
ಸರಕಾರಿ ಶಾಲೆಗಳ ಶಿಕ್ಷಕರ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸರಕಾರವು ಪ್ರತಿ ಶಾಲೆಗಳಿಗೆ ಗೌರವ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದೆ. ಅವರ ಕಡಿಮೆ ವೇತನದಲ್ಲೂ ಉತ್ತಮ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಅವರಿಗೆ ಗೌರವಧನಕ್ಕೆ ಅನುದಾನವೇ ಬಂದಿಲ್ಲ ಎಂದು ಶಿಕ್ಷಕರೊಬ್ಬರು ಶಾಸಕರಿಗೆ ತಿಳಿಸಿದರು. ಈ ಕುರಿತು ಸಂಬಂಧಪಟ್ಟವರ ಜತೆ ಚರ್ಚೆಸುವುದಾಗಿ ಶಾಸಕರು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ