ವಿದ್ಯುತ್ ಪರಿವರ್ತಕ ಸ್ಥಳಾಂತರ: ಸಮಸ್ಯೆಗೆ ಮುಕ್ತಿ
Team Udayavani, May 28, 2019, 6:00 AM IST
ಉಪ್ಪಿನಂಗಡಿ: ನೇತ್ರಾವತಿ ನದಿ ತೀರದ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬಾರಿ ಸಮಸ್ಯೆ ಒಳಗಾಗುತ್ತಿದ್ದ ವಿದ್ಯುತ್ ಪರಿವರ್ತಕವನ್ನು ಸ್ಥಳಾಂತರಿಸುವ ಮೂಲಕ ಆಸುಪಾಸಿನ ಗ್ರಾಹಕರಿಗೆ ಮುಕ್ತಿ ಸಿಕ್ಕಂತಾಗಿದೆ.
ಪಟ್ಟಣವು ನೆರೆಪೀಡಿತ ಪ್ರದೇಶವೆಂದೇ ಜಿಲ್ಲೆಯಲ್ಲಿ ಗುರುತಿಸಿದ್ದು, ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ಸಂಗಮ ಕ್ಷೇತ್ರದಲ್ಲಿ ಈ ಪರಿವರ್ತಕ ಗತಕಾಲದಿಂದಲೂ ನೆರೆ ನೀರು ಬಂದರೆ ಒಂದಡೆ ಅಪಾಯ ಇನ್ನೊಂದೆಡೆ ಸ್ಥಳೀಯ ಗ್ರಾಹಕರಿಗೆ ವಿದ್ಯುತ್ ದೀಪವಿಲ್ಲದೆ ಪರದಾಟ ನಡೆಸಿ ಮೆಸ್ಕಾಂಗೆ ದೂರುಗಳ ಸರಮಾಲೆಯಂತೆ ಬರುತ್ತಲೇ ಇತ್ತು. ಅಲ್ಲದೆ ಪ್ರಾಕೃತಿಕ ವಿಕೋಪ ಸಭೆಗಳಲ್ಲಿಯೂ ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿದ್ದು ಮೆಸ್ಕಾಂಗೆ ಸವಾಲಾಗಿ ಪರಿಗಣಿಸಿತ್ತು.
ಶಾಶ್ವತ ಪರಿಹಾರ
ಉಪ್ಪಿನಂಗಡಿ ಮೆಸ್ಕಾಂ ಶಾಖಾ ಕಚೇರಿಯ ಸಹಾಯಕ ಎಂಜಿನಿಯರ್ ರಾಜೇಶ್ ವಿಶೇಷ ಮುರ್ತುವಜಿ ವಹಿಸಿ ಸಾರ್ವಜನಿಕ ಸೇವೆಯಡಿ ನಿಗಮದಿಂದ ಮಂಜೂರಾತಿ ಪಡೆದು ಸ್ಥಳಾಂತರಿಸುವ ಮೂಲಕ ಗ್ರಾಹಕರ ಹಾಗೂ ಸಾರ್ವಜನಿಕರ ಕುಂದುಕೊರತೆಗೆ ಸ್ಪಂದಿಸಿದ್ದಾರೆ. ಇದರಿಂದ ರಥಬೀದಿ ಪರಿಸರದ ಗ್ರಾಹಕರಿಗೆ ಶನಿವಾರ ಸತತ ಎಂಟು ಗಂಟೆ ಕಾಲ ವ್ಯಥೆ ಉಂಟಾಗಿದ್ದರೂ ಪರಿವರ್ತಕ ಸ್ಥಳಾಂತರದಿಂದ ಶಾಶ್ವತ ಪರಿಹಾರ ಕಂಡುಕೊಂಡಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು