ಮಥುರಾ ಮುಕ್ತಿ: ಪಲಿಮಾರು ಶ್ರೀ ಆಶಯ
Team Udayavani, Aug 22, 2019, 5:00 AM IST
ಉಡುಪಿ: ಸೆರೆಮನೆಯಲ್ಲಿ ಜನಿಸಿದ ಶ್ರೀಕೃಷ್ಣ ಅದರಿಂದ ಬಂಧಮುಕ್ತಗೊಂಡು ತಂದೆಯನ್ನೂ ಬಂಧಮುಕ್ತಗೊಳಿಸಿದ. ಇಂತಹ ಮಥುರಾ ಕ್ಷೇತ್ರ ಮತ್ತು ಕಾಶೀ ವಿಶ್ವನಾಥ ಕ್ಷೇತ್ರವೂ ಅಯೋಧ್ಯೆಯಂತೆ ಬಿಡುಗಡೆಗೊಳ್ಳಬೇಕು ಎಂದು ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಆಶಿಸಿದರು.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತದ ಮೂರನೇ ದಿನದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಶ್ರೀರಾಮ ಗುರು ವಿಶ್ವಾಮಿತ್ರರ ಹಿಂದೆ ಹೋಗಿ ಗುರುವಿನ ಹಿಂದೆ ಸಾಗಿದರೆ ಶ್ರೇಷ್ಠ ಎಂಬ ಸಂದೇಶ ನೀಡಿ ಶಿಕ್ಷಕರ ಘನತೆಯನ್ನು ಎತ್ತಿ ಹಿಡಿದ. ಬಂಧನದಲ್ಲಿದ್ದ ಕೃಷ್ಣ ತನ್ನ ಜತೆ ತಂದೆ ವಸುದೇವನನ್ನೂ ಕರೆದೊಯ್ದು ನಾನಾ ವಿಧದ ಬಂಧನದಲ್ಲಿರುವವರು ಸಾಗಬೇಕಾದ ದಾರಿಯನ್ನು ತೋರಿದ ಎಂದು ವಿಶ್ಲೇಷಿಸಿದರು.
ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠದ ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ದೊಡ್ಡಣಗುಡ್ಡೆ ಶ್ರೀದುರ್ಗಾ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿ ರಮಾನಂದ ಗುರೂಜಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿ ಶುಭ ಕೋರಿದರು.
ಎಂಜಿನಿಯರ್ ಯು.ಕೆ. ರಾಘವೇಂದ್ರ ರಾವ್, ಯಕ್ಷಗಾನ ಪ್ರಸಂಗಕರ್ತೆ ಪ್ರೇಮಾ ಮಹೇಶ್, ಉದಯವಾಣಿ ಹಿರಿಯ ಛಾಯಾಚಿತ್ರಗ್ರಾಹಕ ಆಸ್ಟ್ರೋ ಮೋಹನ್, ಕರ್ನಾಟಕ ಸಂಗೀತಜ್ಞ ಚೆನ್ನೈಯ ಟಿ.ವಿ. ಶಂಕರನಾರಾಯಣ, ತಿರುಪತಿ ಕ್ಷೇತ್ರದ ಅರ್ಚಕ ರಾಮುಲು ಅವರನ್ನು ಸಮ್ಮಾನಿಸಲಾಯಿತು. ಡಾ| ವಿಜಯೇಂದ್ರ ವಸಂತ್ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ