Security Breach: ಸಂಸತ್‌ ನೊಳಗೆ ಬಣ್ಣದ ಹೊಗೆ… ಏನಿದು ಕಲರ್‌ ಗ್ಯಾಸ್‌ ಕ್ಯಾನಿಸ್ಟರ್?

ಕೆಲವು ಸಂಸದರು ಮತ್ತು ಭದ್ರತಾ ಸಿಬಂದಿಗಳು ಇಬ್ಬರನ್ನೂ ಸೆರೆ ಹಿಡಿದಿದ್ದರು.

Team Udayavani, Dec 13, 2023, 6:22 PM IST

Security Breach: ಸಂಸತ್‌ ನೊಳಗೆ ಬಣ್ಣದ ಹೊಗೆ… ಏನಿದು ಕಲರ್‌ ಗ್ಯಾಸ್‌ ಕ್ಯಾನಿಸ್ಟರ್?

ಲೋಕಸಭೆಯೊಳಗೆ ಬುಧವಾರ(ಡಿಸೆಂಬರ್‌ 13) ಇಬ್ಬರು ಯುವಕರು ನುಗ್ಗಿ ಹಳದಿ ಹೊಗೆಯನ್ನು ಹರಡುವ ಗಂಭೀರವಾದ ಭದ್ರತಾ ಲೋಪ ಎಸಗುವ ಮೂಲಕ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಮೂಲದ ಮನೋರಂಜನ್‌, ಸಾಗರ್‌ ಶರ್ಮಾ ಸೇರಿದಂತೆ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.‌ ಇದರಲ್ಲಿ ಇಬ್ಬರು ಪರಾರಿಯಾಗಿದ್ದಾರೆಂದು ವರದಿ ತಿಳಿಸಿದೆ.

ಇದನ್ನೂ ಓದಿ:ರುಕ್ಮಿಣಿ ವಸಂತ್‌,ಸಿರಿ ರವಿಕುಮಾರ್..‌ 2023 ರಲ್ಲಿ ಅಮೋಘ ನಟನೆ ಮೂಲಕ ಗಮನ ಸೆಳೆದ 5 ನಟಿಯರು

ಲೋಕಸಭಾ ಕಾರ್ಯಾಲಯ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ಒಬ್ಬ ಯುವಕ ಲೋಕಸಭಾ ಸಂಸದರ ಡೆಸ್ಕ್‌ ಹತ್ತಿ ಓಡಾಡುತ್ತಿದ್ದು, ನಂತರ ಹಳದಿ ಬಣ್ಣದ ಹೊಗೆಯ ಸ್ಪ್ರೇ ಮಾಡಿದ್ದರು. ಈ ಸಂದರ್ಭದಲ್ಲಿ ಕೆಲವು ಸಂಸದರು ಮತ್ತು ಭದ್ರತಾ ಸಿಬಂದಿಗಳು ಇಬ್ಬರನ್ನೂ ಸೆರೆ ಹಿಡಿದಿದ್ದರು.

ಏನಿದು ಕಲರ್‌ ಗ್ಯಾಸ್‌ ಕ್ಯಾನಿಸ್ಟರ್?

ಇಬ್ಬರು ಲೋಕಸಭೆಯೊಳಗೆ ಪ್ರವೇಶಿಸುವ ಮೊದಲು ಶೂನೊಳಗೆ ಹಳದಿ ಬಣ್ಣದ ಸ್ಮೋಕ್‌ ಕ್ಯಾನ್ಸ್‌ ಅಡಗಿಸಿಕೊಂಡು ಬಂದಿದ್ದರು. ನಂತರ ದಿಢೀರನೆ ಸರ್ವಾಧಿಕಾರ ನಡೆಯಲ್ಲ ಎಂದು ಘೋಷಣೆ ಕೂಗುತ್ತಾ ಸಂಸದರತ್ತ ದೌಡಾಯಿಸಿದ್ದರು.

ಹಾಗಾದರೆ ಈ ಇಬ್ಬರು ಯುವಕರು ಬಳಸಿದ ಕಲರ್‌ ಗ್ಯಾಸ್‌ ಕ್ಯಾನಿಸ್ಟರ್‌ ಅಂದರೆ ಏನು? ಇದು ಅಪಾಯಕಾರಿಯೇ ಎಂಬ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಸ್ಮೋಕ್‌ ಕ್ಯಾನ್ಸ್‌ ಅಥವಾ ಹೊಗೆ ಬಾಂಬ್‌ ಗಳು ಬಹುತೇಕ ಎಲ್ಲಾ ದೇಶಗಳಲ್ಲೂ ಕಾನೂನುಬದ್ಧವಾಗಿದೆ. ಇದು ಎಲ್ಲಾ ಚಿಲ್ಲರೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ನಿಗದಿತ ಉದ್ದೇಶಗಳಿಗೆ ಅನುಗುಣವಾಗಿ ಇದನ್ನು ಬಳಸಲಾಗುತ್ತದೆ. ಈ ಹೊಗೆ ಕ್ಯಾನಿಸ್ಟರ್‌ ಅನ್ನು ಸೈನಿಕರು ಹಾಗೂ ನಾಗರಿಕರು, ಫೋಟೋಶೂಟ್‌ ಸಂದರ್ಭದಲ್ಲಿ ಬಳಸುತ್ತಾರೆ.

ಮಿಲಿಟರಿ ಮತ್ತು ಪೊಲೀಸರ ಕಾರ್ಯಾಚರಣೆ ವೇಳೆ ಈ ಹೊಗೆ ಕ್ಯಾನಿಸ್ಟರ್‌ ಅನ್ನು ಬಳಸುತ್ತಾರೆ..ಇದರಿಂದ ದಟ್ಟನೆಯ ಹೊಗೆ ಹೊರ ಬರುತ್ತದೆ. ಈ ದಟ್ಟ ಹೊಗೆಯಿಂದಾಗಿ ಪ್ರತಿಭಟನಾಕಾರರು ಅಥವಾ ಶತ್ರುಗಳ ಕಣ್ಣಿಗೆ ಅಗೋಚರವಾಗುವಂತೆ ಮಾಡುತ್ತದೆ. ಈ ಹೊಗೆ ಕ್ಯಾನಿಸ್ಟರ್‌ ಅನ್ನು ವೈಮಾನಿಕ ದಾಳಿ ವಲಯ, ಸೇನಾ ಲ್ಯಾಂಡಿಂಗ್ಸ್‌ ಮತ್ತು ಸ್ಥಳಾಂತರದ ಸ್ಥಳವನ್ನು ಗುರುತಿಸಲು ಬಳಸಲಾಗುತ್ತದೆ. ಫೋಟೋಗ್ರಫಿ ಸಂದರ್ಭದಲ್ಲೂ ಹೆಚ್ಚು ಪರಿಣಾಮಕಾರಿ ಸನ್ನಿವೇಶ ಸೃಷ್ಟಿಸಲು ಸ್ಮೋಕ್‌ ಕ್ಯಾನಿಸ್ಟರ್‌ ಬಳಸುವುದು ಸಾಮಾನ್ಯವಾಗಿದೆ. ಅದೇ ರೀತಿ ಕ್ರೀಡೆಗಳಲ್ಲಿ ಮುಖ್ಯವಾಗಿ ಫುಟ್ಬಾಲ್‌ ಕ್ರೀಡೆಯ ಸಂದರ್ಭದಲ್ಲಿ ತಮ್ಮ ಕ್ಲಬ್‌ ಗಳನ್ನು ಬಿಂಬಿಸುವ ಬಣ್ಣದ ಸ್ಮೋಕ್‌ ಕ್ಯಾನಿಸ್ಟರ್‌ ಗಳನ್ನು ಅಭಿಮಾನಿಗಳು ಬಳಸುವುದು ಸಾಮಾನ್ಯವಾಗಿದೆ.

ಟಾಪ್ ನ್ಯೂಸ್

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

ಮತದಾನ ಜಾಗೃತಿಗೆ ಪ್ರತೀ ರಾಜ್ಯಕ್ಕೆ 15 ಕೋ.ರೂ. ವೆಚ್ಚ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ

Agumbe Ghat; ಘನವಾಹನಗಳ ಸಂಚಾರದಿಂದ ಘಾಟಿ ಬಂದ್‌ ಆಗುವ ಭೀತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

1-wwewewqe

Temple; ಎಪ್ರಿಲ್‌ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?

court

Wife ಜತೆ ಅಸ್ವಾಭಾವಿಕ ಲೈಂಗಿಕಕ್ರಿಯೆಯು ರೇಪ್‌ ಅಲ್ಲ: ಹೈಕೋರ್ಟ್‌

Jaishankar

Reply; ಭಾರತದ ಆರ್ಥಿಕತೆ ಸದೃಢ: ಬೈಡೆನ್‌ಗೆ ಜೈಶಂಕರ್‌ ಚಾಟಿ

1———–wewqewq

Bank ಉದ್ಯೋಗಿಗಳ 5 ದಿನಗಳ ಕೆಲಸದ ಬೇಡಿಕೆಗೆ ಶೀಘ್ರ ಅಸ್ತು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.