ಕಸಾಯಿಖಾನೆಗೆ ತಂದ ಕೋಣದಿಂದ ದಾಂಧಲೆ ಓರ್ವ ಸಾವು; ಹಲವರಿಗೆ ಗಾಯ
Team Udayavani, Mar 11, 2023, 5:25 AM IST
ಕಾಸರಗೋಡು: ಕಸಾಯಿಖಾನೆಗೆ ತಂದ ಕೋಣವೊಂದು ನಡೆಸಿದ ದಾಂಧಲೆಯಲ್ಲಿ ಯುವಕನೋರ್ವ ಸಾವಿಗೀಡಾಗಿ ಹಲವು ಮಂದಿ ಗಾಯಗೊಂಡಿದ್ದಾರೆ. ಹಲವು ಅಂಗಡಿಗಳಿಗೆ ಹಾನಿಯಾದ ಘಟನೆ ಮೊಗ್ರಾಲ್ ಪುತ್ತೂರು ಕಡವತ್ತ್ನಲ್ಲಿ ನಡೆದಿದೆ.
ಲಾರಿಯಿಂದ ಕೋಣವನ್ನು ತಂದಿಳಿಸಿದಾಗ ಅದರ ಕುತ್ತಿಗೆಗೆ ಕಟ್ಟಿದ್ದ ಹಗ್ಗ ತುಂಡಾಗಿ ಓಡ ತೊಡಗಿತು. ಅದನ್ನು ಹಿಡಿಯಲು ಓಡಿದ ವಿಜಯನಗರದ ಎನ್ಎಚ್ ರಸ್ತೆಯ ರಝಾಕ್ ಸಾಬ್ ಅವರ ಪುತ್ರ ಸಾದಿಕ್ (22) ಗೆ ಕೋಣ ಕೊಂಬಿನಿಂದ ಇರಿಯಿತು. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ತತ್ಕ್ಷಣ ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಆ ಬಳಿಕವೂ ಪರಾಕ್ರಮ ಮುಂದುವರಿಸಿದ ಕೋಣ ಪರಿಸರದಲ್ಲಿದ್ದ ಹಲವರಿಗೆ ಹಾಯ್ದು ಗಾಯಗೊಳಿಸಿತು. ಅಲ್ಲೇ ಪಕ್ಕದ ಮನೆ ಬಳಿ ಆಟ ಆಡುತ್ತಿದ್ದ ಮುಜೀಬ್ ಅವರ ಪುತ್ರಿ ಹೈರಾಫತ್ (4 ವರ್ಷ) ಮೇಲೂ ಹಾಯ್ದ ಕಾರಣ ಆಕೆಯ ಕೆಲವು ಹಲ್ಲುಗಳು ಉದುರಿ ಹೋಗಿವೆ. ಕೋಣದ ದಾಳಿಯಲ್ಲಿ 25ರಷ್ಟು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಕೋಣವನ್ನು ಮೃತ ಸಾದಿಕ್ ಮತ್ತು ಆತನ ತಂದೆ ರಝಾಕ್ ಸಾಬ್ ಕರ್ನಾಟಕದಿಂದ ಲಾರಿಯಲ್ಲಿ ಮೊಗ್ರಾಲ್ ಪುತ್ತೂರಿಗೆ ತಂದಿದ್ದರು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೋಳಿ ಅಂಕಕ್ಕೆ ದಾಳಿ 7 ಮಂದಿ ಬಂಧನ
ಉಪ್ಪಳ: ಪಟ್ಟತ್ತಮೊಗರು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರ ಸಮೀಪದ ಬಯಲಿನಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿ 17 ಕೋಳಿಗಳನ್ನು ಹಾಗೂ 20,550 ರೂ. ವಶಪಡಿಸಿಕೊಂಡಿದ್ದಾರೆ.
ಬಂಬ್ರಾಣ ನಿವಾಸಿ ಪ್ರಶಾಂತ್ ಕುಮಾರ್ (32), ಪಾಣಾಜೆಯ ರವೀಶ (23), ಮೂಡಂಬೈಲು ನಿವಾಸಿಗಳಾದ ಹರಿಜೀವನ್ದಾಸ್ (53), ರಾಜೀವ (55), ಪವಿ (46), ಸುರೇಶ್ (45), ಮಜಿಬೈಲಿನ ಚಂದ್ರಹಾಸ (60) ನನ್ನು ಪೊಲೀಸರು ಬಂಧಿಸಿದ್ದಾರೆ. ಕೋಳಿ ಅಂಕದ ಬಗ್ಗೆ ರಹಸ್ಯ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದರು.
—————————————————-
ಬಚ್ಚಲು ಕೊಠಡಿ ಬೆಂಕಿಗಾಹುತಿ
ಉಪ್ಪಳ: ಅಟ್ಟೆಗೋಳಿ ನಿವಾಸಿ ಉಮೇಶ ಅವರ ಮನೆಗೆ ಹೊಂದಿಕೊಂಡಿರುವ ಬಚ್ಚಲು ಕೊಠಡಿಗೆ ಬೆಂಕಿ ಹತ್ತಿಕೊಂಡು ಸಾವಿರಾರು ರೂ. ನಷ್ಟ ಉಂಟಾಗಿದೆ. ಬಚ್ಚಲು ಕೊಠಡಿ ಸಮೀಪ ಸಂಗ್ರಹಿಸಿಟ್ಟಿದ್ದ 2000ದಷ್ಟು ಒಣ ತೆಂಗಿನ ಕಾಯಿ, ಮರ ಮೊದಲಾದವುಗಳು ಬೆಂಕಿಗಾಹುತಿಯಾಗಿವೆ. ಉಪ್ಪಳದ ಅಗ್ನಿಶಾಮಕ ದಳ ಮತ್ತು ಅಟ್ಟೆಗೋಳಿ ಯುವಕ ಸಂಘ ಗ್ರಂಥಾಲಯದ ಕಾರ್ಯಕರ್ತರು, ಸ್ಥಳೀಯರು ಬೆಂಕಿಯನ್ನು ಆರಿಸಿದರು.
————————————————————–
ದಿರ್ಹಂ ಬದಲು ಕಾಗದದ ಕಟ್ಟ ನೀಡಿ ವ್ಯಾಪಾರಿಗೆ 3 ಲಕ್ಷ ರೂ. ವಂಚನೆ
ಮಂಜೇಶ್ವರ: ಯುಎಇ ದಿರ್ಹಂ ಎಂದು ಸುಳ್ಳು ಹೇಳಿ ಕಾಸರಗೋಡು ಮನ್ನಿಪ್ಪಾಡಿ ಆರ್.ಡಿ. ನಗರ ಕೃಷ್ಣ ನಿಲಯದ ಆನಂದ (62) ಅವರಿಗೆ 3 ಲಕ್ಷ ರೂ. ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ನೀಡಿದ ದೂರಿನಂತೆ ಉಪ್ಪಳದ ಹಾಶಿಂ ಮತ್ತು ಪಶ್ಚಿಮ ಬಂಗಾಲದ ರಾಜು ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.
ಮಾ. 9ರಂದು ಮಧ್ಯಾಹ್ನ ಉಪ್ಪಳ ಬಸ್ ನಿಲ್ದಾಣದಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ದೂರುಗಾರರಾದ ಆನಂದ ಕಾಸರಗೋಡಿನಲ್ಲಿ ವಾಹನದ ಸ್ಪೇರ್ ಪಾರ್ಟ್ಸ್ ವ್ಯಾಪಾರಿಯಾಗಿದ್ದಾರೆ. ಇವರನ್ನು ರಾಜು ಸಂಪರ್ಕಿಸಿ ಯು.ಎ.ಇ. ದಿರØಂ ಹಸ್ತಾಂತರಿಸಲು ಇದೆಯೆಂದು ತಿಳಿಸಿದ್ದನು. ಅದನ್ನು ನಂಬಿದ ಆನಂದ ಅವರು 3 ಲಕ್ಷ ರೂ.ಗಳನ್ನು ರಾಜು ಮತ್ತು ಹಾಶಿಂಗೆ ನೀಡಿದ್ದು, ಅದಕ್ಕೆ ಬದಲಿ ಕಟ್ಟವೊಂದನ್ನು ಆನಂದ ಅವರಿಗೆ ನೀಡಿ ಅಲ್ಲಿಂದ ಕಾಲ್ಕಿತ್ತರು. ಕಟ್ಟವನ್ನು ಬಿಚ್ಚಿ ನೋಡಿದಾಗ ಅದರಲ್ಲಿ ಕಾಗದದ ಕಟ್ಟುಗಳಿರುವುದು ಕಂಡು ಬಂತು. ಈ ಬಗ್ಗೆ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ವಿಷಯ ತಿಳಿಸಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಹಾಶಿಂ ಹಾಗು ರಾಜು ವಿರುದ್ಧ ಪೊಲೀಸರು ಕೇಸು ದಾಖಲಿಸಿ ಅವರಿಗೆ ಶೋಧ ನಡೆಸುತ್ತಿದ್ದಾರೆ.
—————————————————-
ಕಾರು – ಪಿಕಪ್ ಢಿಕ್ಕಿ: ಯುವಕನಿಗೆ ಗಾಯ
ಕುಂಬಳೆ: ಸೀತಾಂಗೋಳಿ ಮರದ ಮಿಲ್ ಬಳಿ ಕಾರು ಹಾಗೂ ಪಿಕಪ್ ಢಿಕ್ಕಿ ಹೊಡೆದು ಕುಡಾಲುಮೇರ್ಕಳ ನಿವಾಸಿ ಸಿದ್ದಿಕ್ (38) ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
——————————————————————
ಮಟ್ಕಾ: ಬಂಧನ
ಕಾಸರಗೋಡು: ನಗರದ ಹಳೆ ಬಸ್ ನಿಲ್ದಾಣ ಪರಿಸರದಲ್ಲಿ ಮಟ್ಕಾ ದಂಧೆಯಲ್ಲಿ ನಿರತನಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ 250 ರೂ. ವಶಪಡಿಸಿಕೊಂಡಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ.
————————————————————
ಕಾರು ಢಿಕ್ಕಿ ಹೊಡೆಸಿ ಕೊಲೆಗೆ ಯತ್ನ: ಇಬ್ಬರು ವಶಕ್ಕೆ
ಕಾಸರಗೋಡು: ಬುಲೆಟ್ ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಎಸ್ಟಿಯು ಕಾರ್ಯಕರ್ತ ಪಾರೆಕಟ್ಟೆಯ ಸಿದ್ದಿಕ್(26) ಅವರಿಗೆ ಕಾರು ಢಿಕ್ಕಿ ಹೊಡೆಸಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಾಸರಗೋಡು ಎಂ.ಜಿ. ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ