Desi Swara: ಬಿಗ್‌ಬೆನ್‌ ಟು ಸೀಲೈಫ್ ನ ಮೋಜಿನ ಪ್ರಯಾಣ

ಜಗತ್ತೇ ಸೋಜಿಗವೆನಿಸಿದ ಸಮಯ

Team Udayavani, Jan 27, 2024, 12:40 PM IST

Desi Swara: ಬಿಗ್‌ಬೆನ್‌ ಟು ಸೀಲೈಫ್ ನ ಮೋಜಿನ ಪ್ರಯಾಣ

ದೇಶ ಸುತ್ತಬೇಕು ಕೋಶ ಓದಬೇಕು ಎಂಬ ಮಾತು ಎಲ್ಲೆಡೆ ಜನಜನಿತವಾಗಿದೆ. ಹೊಸ ಹೊಸ ದೇಶಗಳು ನವ್ಯ ಪ್ರದೇಶಗಳನ್ನು ಸುತ್ತಿದಾಗ ಹಲವಾರು ಜೀವನಾನುಭವಗಳನ್ನು ಪಡೆಯಬಹುದು. ಯಾವುದೇ ಪುಸ್ತಕಗಳನ್ನು ಓದಿದರೂ ಸಹ ಜ್ಞಾನದ ವೃದ್ಧಿಗೆ ಪೂರಕವಾಗುವುದರಲ್ಲಿ ಸಂದೇಹವೇ ಇಲ್ಲ. ನಾನು ಹಾಗೂ ನನ್ನ ಮಡದಿ, ಮಗಳು ಹಾಗೂ ಮೊಮ್ಮಗಳ ಹಾರೈಕೆಯ ದೆಸೆಯಿಂದ ಇಂಗ್ಲೆಂಡಿಗೆ ಬಂದ ಅನಂತರ ಅಲ್ಲಿನ ಹಲವಾರು ಪ್ರದೇಶಗಳನ್ನು ಸುತ್ತಿ ಬಂದೆವು.

ಬಿಗ್‌ಬೆನ್‌
ಲಂಡನ್‌ನಲ್ಲಿ ಅಂಡರ್‌ ಗ್ರೌಂಡ್‌ ರೈಲು ಮಾರ್ಗದ ವ್ಯವಸ್ಥೆ ಬಹಳ ಚೆನ್ನಾಗಿದೆ. ನಮ್ಮ ಮಗಳ ಮನೆ ಹತ್ತಿರದ ಇಲ್ಫೋರ್ಡ್‌ ಸ್ಟೇಷನ್‌ನಿಂದ ಎಲಿಜಬೆತ್‌ ರೈಲನ್ನೇರಿ ವೆಸ್ಟ್‌ ಮಿನಿಸ್ಟರ್‌ ಬಳಿ ಇರುವ ವಾಟರ್‌ ಲೂ ಸ್ಟೇಷನ್‌ನಲ್ಲಿ ಇಳಿದು ಮುಂದೆ ಸಾಗಿದರೆ ನಮ್ಮನ್ನು ಸೆಳೆದದ್ದು ಸುಮಾರು 340 ಅಡಿ (96ಮೀಟರ್‌) ಎತ್ತರದ “ಬಿಗ್‌ಬೆನ್‌’ ಎನ್ನುವ ಲಂಡನ್ನಿನ ದೊಡ್ಡ ಗಡಿಯಾರ. ಅದರ ಹೆಸರು ಕೇಳಿದ್ದೆವು ಹಾಗೂ ಹಲವಾರು ಚಲನಚಿತ್ರಗಳಲ್ಲಿ ಕಂಡಿದ್ದೆವು. ಆದರೆ ಪ್ರತ್ಯಕ್ಷವಾಗಿ ಅದನ್ನು ಕಣ್ಣಾರೆ ನೋಡಿದಾಗ ಬಹಳ ಸಂತೋಷವಾಯಿತು. ಆ ಗಡಿಯಾರಕ್ಕೆ 2012ರ ವರೆಗೆ ಸೇಂಟ್‌ ಸ್ಟೀಫ‌ನ್‌ ಟವರ್‌ ಎಂಬುದಾಗಿ ಕರೆಯುತ್ತಿದ್ದರಂತೆ.

2ನೇ ರಾಣಿ ಎಲಿಜಬೆತ್‌ರ ಪೀಠಾರೋಹಣ ವಜ್ರಮಹೋತ್ಸವದ ಸವಿ ನೆನಪಿನಲ್ಲಿ ಅದನ್ನು ಎಲಿಜಬೆತ್‌ ಟವರ್‌ ಎಂಬುದಾಗಿ ಮರು ನಾಮಕರಣ ಮಾಡಿ ಹೆಸರಿಸಿದರಂತೆ. ಇದು ಬ್ರಿಟಿಷ್‌ ಸಾಂಸ್ಕೃತಿಕ ಐಕಾನ್‌ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಪ್ರಮುಖ ಸಂಕೇತಗಳಲ್ಲಿ ಒಂದಾಗಿದೆ ಮತ್ತು 1987ರಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಲಂಡನ್‌ ಐ
ಅಲ್ಲಿಂದ ಎಡ ಭಾಗದಲ್ಲಿ ದೊಡ್ಡ ಜಾಯಿಂಟ್‌ ವ್ಹೀಲ್‌ನ ಆಕಾರ ನಿಧಾನವಾಗಿ ತಿರುಗುತ್ತಿದ್ದಂತೆ ಭಾಸವಾಯಿತು. ಅದು ಲಂಡನ್‌ ಐ ಅಥವಾ ಮಿಲೇನಿಯಂ ವ್ಹೀಲ್‌. ಅದು 443 ಅಡಿ ಎತ್ತರದ ಒಂದು ಕ್ಯಾಂಟಿಲಿವರ್ಡ್‌ ವೀಕ್ಷಣಾ ಚಕ್ರ ಅಥವಾ ಫೆರ್ರೀಸ್‌ ಚಕ್ರ. ಇದು 10 ಟನ್‌ ತೂಕದ 32 ಹೈಟೆಕ್‌ ಗ್ಲಾಸ್‌ ಕ್ಯಾಪ್ಸೂಲ್‌ಗ‌ಳನ್ನು ಒಳಗೊಂಡಿದೆ. ಕ್ಯಾಪ್ಸೂಲ್‌ಗ‌ಳಲ್ಲಿ ಬಳಸಿರುವುದು ಸುಭದ್ರವಾದ ಟಾಟಾ ಕಂಪೆನಿ ತಯಾರಿಸಿದ ಪೈಪುಗಳು ಎಂಬುದು ಹೆಮ್ಮೆಯ ವಿಚಾರ. ಅದರಲ್ಲಿ ಕುಳಿತು ಲಂಡನ್‌ ನಗರವನ್ನೆಲ್ಲ ನೋಡಬಹುದು ಇದು 2000ನೇ ಇಸವಿಯಲ್ಲಿ ಪ್ರಾರಂಭವಾಯಿತು. ಇದುವರೆಗೆ 50 ದಶಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿದೆಯಂತೆ. ನಾವೂ ಸಹ ಅದರಲ್ಲಿ ಕುಳಿತು ಲಂಡನ್‌ ನಗರವನ್ನು ಹೆಲಿಕಾಪ್ಟರ್‌ನಿಂದ ಒಂದು ಪ್ರದಕ್ಷಿಣೆ ಹಾಕಿದಂತೆ ಅನುಭವ ಪಡೆದೆವು. ಥೇಮ್ಸ್‌ ನದಿಯ ಸುತ್ತ ಮುತ್ತ ಇರುವ ಎಲ್ಲ ಕಟ್ಟಡಗಳನ್ನು ಮೇಲಿನಿಂದಲೆ ವೀಕ್ಷಿಸಿ ಆನಂದದ ಅನುಭವ ಪಡೆದು ರೋಮಾಂಚನಗೊಂಡೆವು ಇದು 30 ನಿಮಿಷಗಳ ಒಂದು ಸವಾರಿ.

ಸೀ ಲೈಫ್
ನೋಡುತ್ತಾ ಮುಂದೆ ಸಾಗಿದರೆ, ಕೌಂಟಿ ಹಾಲ್‌ನಲ್ಲಿರುವ ಅದೇ “ಲಂಡನ್‌ ಐ’ ನ ನೆಲ ಮಹಡಿಯಲ್ಲಿ ಪ್ರಖ್ಯಾತ ಲಂಡನ್‌ ಅಕ್ವೇರಿಯಂ ಸಿಗುತ್ತದೆ. ಮುಂದೆ ಸಾಗಿದಂತೆ ಜಲದಾಳದಲ್ಲಿ ವಾಸಿಸುವ ಜಲಚರಗಳ ಬಾಳಿನ ಅನುಭವದ ಪುಟಗಳು ತೆರೆಯುತ್ತಾ ಹೋಯಿತು. ಸಣ್ಣ ದೊಡ್ಡ ಮೀನುಗಳು, ಪುಟ್ಟ, ಅತೀ ಪುಟ್ಟ ಮೀನುಗಳು, ಆಮೆಗಳು, ಬಣ್ಣ ಬಣ್ಣದ ಕಪ್ಪೆಗಳು, ವಿವಿಧಾಕೃತಿಯ ಮೀನುಗಳು ಇವುಗಳನ್ನು ದೊಡ್ಡ ದೊಡ್ಡ ಕಂಟೇನರ್‌ಗಳಲ್ಲಿ ಕಂಡು ರೋಮಾಂಚನ ಆಯಿತು. ಮುಂದೆ ಸಾಗಿದಂತೆ ಹಲವಾರು ಬಣ್ಣ ಬಣ್ಣದ ಮೀನುಗಳೆಲ್ಲ ಬೇರೆ ಬೇರೆ ದಪ್ಪ ಗಾಜಿನ ಕಂಟೇನರ್‌ಗಳಲ್ಲಿ ಸ್ವತಂತ್ರವಾಗಿ ಈಜಾಡುತ್ತಿದ್ದುದನ್ನು ಕಾಣುತ್ತಾ ಮುಂದೆ ಸಾಗಿದೆವು. ಜಲದಾಳದಲ್ಲಿ ಬೆಳೆವ ವಿವಿಧ ರೀತಿಯ ಸಸ್ಯಗಳು ಬಗೆ ಬಗೆ ಜಾತಿಯ ಸ್ಟಾರ್‌ ಫಿಷ್‌ಗಳು, ಪಾಚಿ ಸಸ್ಯಗಳು, ರೋಮಾಂಚನ ಗೊಳಿಸುವ ಸಮುದ್ರದಾಳದ ವಿವಿಧ ಆಕಾರದ ಜಲ ಚರಗಳು, ವಿವಿಧ ಬಗೆಯ ಆಕ್ಟೋಪಸ್‌ಗಳು ಎಲ್ಲವನ್ನೂ ಗಮನಿಸುತ್ತಾ ಮುಂದೆ ಸಾಗಿದರೆ ನಮ್ಮನ್ನು ಸೆಳೆದದ್ದು ಪೆಂಗ್ವಿನ್‌ ಲೋಕ.

ಇತ್ತಿಂದತ್ತ ಅತ್ತಿಂದಿತ್ತ ಎಡೆಬಿಡದೆ ಈ ಕಡೆಯಿಂದ ಆ ಕಡೆಗೆ, ಆ ಕಡೆಯಿಂದ ಈ ಕಡೆಗೆ ತಮ್ಮ ಕೊಕ್ಕುಗಳಲ್ಲಿ ಕಲ್ಲುಗಳನ್ನು ಎತ್ತಿಕೊಂಡು ಓಡಾಡುತ್ತಿದ್ದವು ಅದನ್ನು ಕಂಡು ಸೋಜಿಗವೆನಿಸಿತು. ಅದರ ಚಲನ ವಲನಗಳನ್ನು ಗಮನಿಸುತ್ತಾ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಇದನ್ನೆಲ್ಲ ವೀಕ್ಷಿಸುತ್ತಾ ಮುಂದೆ ಸಾಗಿದ ಹಾಗೇ ನೆಲದಾಳದ ಜೀವಿಗಳ ಕುರಿತಾದ ಪುಸ್ತಕಗಳು ಹಾಗೂ ಅವುಗಳ ಪ್ರತಿಕೃತಿಗಳ ಮಾರಾಟ ಮಳಿಗೆ ಮಕ್ಕಳು ಹಾಗೂ ಹಿರಿಯರನ್ನೂ ಸೆಳೆದವು.

ಈ ಅಕ್ವೇರಿಯಂ 1997ರಲ್ಲಿ ಲಂಡನ್‌ ಅಕ್ವೇರಿಯಂ ಆಗಿ ಪ್ರಾರಂಭವಾಯಿತು. ಈ ಅಕ್ವೇರಿಯಂ ಅನ್ನು 2008ರಲ್ಲಿ ಮೆರ್ಲಿನ್‌ ಎಂಟರ್‌ ಟ್ರೈನರ್ಸ್‌ ಎನ್ನುವ ಕಂಪೆನಿ ಬಹಿರಂಗ ಪಡಿಸದ ಮೊತ್ತಕ್ಕೆ ಖರೀದಿಸಿ ಸುಮಾರು ಒಂದು ವರ್ಷದ ಕಾಲ ನವೀಕರಣಗೊಳಿಸಿ 2009ರಲ್ಲಿ ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿ ಕೊಟ್ಟಿತು. ಈಗ ಇದು ಸೀ ಲೈಫ್ ಹೆಸರಿಂದ ಪ್ರತೀ ವರ್ಷ ಸುಮಾರು ಒಂದು ಮಿಲಿಯನ್‌ ಸಂದರ್ಶಕರಿಂದ ವೀಕ್ಷಿಸಲ್ಪಡುತ್ತದೆ.

ನೀರೊಳಗಿನ ಹೊಸದಾದ ಸುರಂಗ ಮಾರ್ಗ, ಶಾರ್ಕ್‌ ವಾಕ್‌, ಪರಿಷ್ಕೃತ ಫೆಸಿಫಿಕ್‌ ಸಾಗರದ ಟ್ಯಾಂಕ್‌ ಮತ್ತು ಪ್ರದರ್ಶನದ ಸಂಪೂರ್ಣ ಮಾರ್ಗವನ್ನು ಒಳಗೊಂಡಿದೆ ಇವೆಲ್ಲವನ್ನೂ ವಾಸ್ತುಶಿಲ್ಪಿ ಕೇ ಏಲಿಯೆಟ್‌ ಅವರ ಮೇಲ್ವಿಚಾರಣೆಯಲ್ಲಿ ಪ್ರಾರಂಭವಾದಾಗ ಎಲ್ಲರಿಂದ ಆಕರ್ಷಣೆ ಪಡೆದು ಅಧಿಕೃತವಾಗಿ ಸಮುದ್ರ ಜೀವನದ ಕೇಂದ್ರವಾಯಿತು.

ಮೇ 2011ರಲ್ಲಿ ಅಕ್ವೇರಿಯಂ ಹೊಸ ಪೆಂಗ್ವಿನ್‌ ಪ್ರದರ್ಶನ ಪ್ರಾರಂಭಿಸಿದ ಅನಂತರ ಅದು ಹಿರಿ-ಕಿರಿಯರೆನ್ನದೆ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. ಒಟ್ಟಿನಲ್ಲಿ ಅಕ್ವೇರಿಯಂ ವೀಕ್ಷಿಸಿ ಹೊರ ಬರುವಾಗ ನೆಲದಾಳದಲ್ಲಿ ಅಂದರೆ ಸಮುದ್ರದ ತಳದಲ್ಲಿ ವಾಸಿಸುವ ಜಲಚರಗಳನ್ನೆಲ್ಲ ವೀಕ್ಷಿಸುತ್ತಿರುವಾಗ ಮನಸ್ಸು ಭೂಮಿಯ ಮೇಲೆ ವಾಸಿಸುವ ಪ್ರಾಣಿವರ್ಗ, ಸಸ್ಯ-ಸಂಕುಲಗಳು ಅಲ್ಲದೆ ನೀರಿನಲ್ಲಿಯೂ ಸಹ ಸಣ್ಣ ಅತೀ ಸಣ್ಣ ಪ್ರಾಣಿಗಳಿಂದ ಹಿಡಿದು ಬೃಹದಾಕಾರದ ಶಾರ್ಕ್‌ನಂತಹ ಜೀವಿಗಳೂ ಸಹ ತಮ್ಮ ಸಹಬಾಳ್ವೆ ನಡೆಸುತ್ತಿವೆಯಲ್ಲ ಎಂಬ ಭಾವನೆ ಮೂಡಿ ಮಾನವ ಇದರಿಂದ ಕಲಿಯುವುದು ಸಾಕಷ್ಟಿದೆ ಎಂದೆನಿಸಿ ಈ ಬೃಹತ್‌ ಬ್ರಹ್ಮಾಂಡದ ಸೃಷ್ಟಿಕರ್ತನ ಸೃಷ್ಟಿಯ ಬಗ್ಗೆ ಮನದಲ್ಲಿ ಒಂದು ಬಗೆಯ ಧನ್ಯತಾಭಾವ ಮೂಡಿ ನೂರಾರು ವಂದನೆಗಳನ್ನು ಸಲ್ಲಿಸುತ್ತಾ ಹೊರಬಂದೆವು.

*ಮ.ಸುರೇಶ್‌ ಬಾಬು, ಇಲ್ಫೋರ್ಡ್‌

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.