ದನ ಕಳ್ಳರ ಬಂಧನಕ್ಕೆ ಕ್ರಮ: ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
Team Udayavani, Feb 5, 2022, 7:55 AM IST
ಮಂಗಳೂರು: ದನ ಕಳವಿನ ಮೂರ್ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಕೆಲವು ತಂಡಗಳು ಇದರಲ್ಲಿ ಭಾಗಿಯಾದ ಮಾಹಿತಿ ಲಭಿಸಿದೆ. ಆದಷ್ಟು ಶೀಘ್ರ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ವಾಮಂಜೂರು, ಕಾವೂರು ಪರಿಸರದಲ್ಲಿ ಗೋವುಗಳನ್ನು ಸಾಕುವ ಹಲವು ಕುಟುಂಬಗಳಿದ್ದು, ಈ ಭಾಗದಲ್ಲಿಯೇ ಹೆಚ್ಚು ದನ ಕಳವು ನಡೆಯುತ್ತಿದೆ. ಇದರ ಹಿಂದೆ ಒಂದು ಜಾಲವೇ ಇದೆ. ದೂರುಗಳು ಬಂದಾಗ ಕೇಸು ದಾಖಲಿಸುವಂತೆ ಎಲ್ಲ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದರು.
ಉಳ್ಳಾಲ ಪೊಲೀಸರು ವಶಪಡಿಸಿಕೊಂಡ ಗೋಮಾಂಸ ಎಲ್ಲಿಂದ ಬಂತು, ಮಾಂಸಕ್ಕೆ ಗೋವುಗಳು ಎಲ್ಲಿಂದ ಸಿಕ್ಕಿದವು ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಸಂತ್ರಸ್ತರಿಂದ ಮನವಿ
ಕಾವೂರು, ವಾಮಂಜೂರು ಪರಿಸರದಲ್ಲಿ ನಡೆದ ದನ ಕಳವಿನಿಂದ ಸಂತ್ರಸ್ತರಾದ ಅನೇಕ ಮಂದಿ ಗುರುವಾರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕಾವೂರಿನ ಬೊಲ್ಪುಗುಡ್ಡೆ, ಬೋಂದೆಲ್, ಪಚ್ಚನಾಡಿ ಪರಿಸರದ ಕೆ. ಪ್ರಣಮ್ ಶೆಟ್ಟಿ, ಡೊಮಿನಿಕ್ ಸಲ್ಡಾನ್ಹಾ, ಅರುಣ್ ಸಲ್ಡಾನ್ಹಾ, ಪ್ರಕಾಶ್ ಪಿಂಟೊ, ಭವಾನಿ ಶಂಕರ್, ಶ್ರೀನಿವಾಸ್ ನಾಯ್ಕ, ಲಾರೆನ್ಸ್ ಮತ್ತಿತರರು ಮನವಿ ಅರ್ಪಿಸಿದರು. ವಿ.ಹಿಂ.ಪ.ದ ಶರಣ್ ಪಂಪ್ವೆಲ್ ಜತೆಗಿದ್ದರು.
ಜಿಪಿಎಸ್ ಟ್ರಾನ್ಸ್ಫರ್ ಸಿಸ್ಟಂ
ರಾತ್ರಿ ವೇಳೆ ಓಡಾಡುವ ಶಂಕಾಸ್ಪದ ವ್ಯಕ್ತಿಗಳು ಮತ್ತು ವಾಹನಗಳ ಮೇಲೆ ಪೊಲೀಸರು ನಿಗಾ ವಹಿಸಿ ತಪಾಸಣೆ ನಡೆಸಬೇಕು, ದನ ಕಳವಿನ ಮಾಹಿತಿ ನೀಡಿದಾಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಬೇಕು, ದನ ಕಳವು ಪ್ರಕರಣಗಳಲ್ಲಿ ಸರಕಾರದಿಂದ ಪರಿಹಾರ ಒದಗಿಸಿಕೊಡಲು ಸರಕಾರಕ್ಕೆ ಶಿಫಾರಸು ಮಾಡುವುದು, ದೂರು ನೀಡಿದ ಕೂಡಲೇ ಎಫ್ಐಆರ್ ದಾಖಲಿಸುವುದು, ಗೋವುಗಳಿಗೆ ಜಿಪಿಎಸ್ ಟ್ರಾನ್ಸ್ಫರ್ ಸಿಸ್ಟಂ ಅಳವಡಿಸಲು ಸರಕಾರಕ್ಕೆ ಶಿಫಾರಸು ಮಾಡಬೇಕು ಮತ್ತಿತರ ಬೇಡಿಕೆಗಳನ್ನು ನಿಯೋಗ ಮುಂದಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
Tulu Movie ಮೇ 3: “ಗಬ್ಬರ್ ಸಿಂಗ್’ ತುಳು ಸಿನೆಮಾ ತೆರೆಗೆ
Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Temperature ಕರಾವಳಿಯಲ್ಲಿ ಬಿಸಿ ವಾತಾವರಣದ ಮುನ್ಸೂಚನೆ
MUST WATCH
ಹೊಸ ಸೇರ್ಪಡೆ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ