Debate: ಬಹಿರಂಗ ಚರ್ಚೆಯ ಸವಾಲಿಗೆ ಸಿದ್ಧ-ದಿನಾಂಕ, ಸಮಯ ಹೇಳಿ: ಶಾಗೆ ಬಾಘೇಲ್ ತಿರುಗೇಟು
Team Udayavani, Nov 7, 2023, 12:51 PM IST
ರಾಯ್ ಪುರ್(ಚತ್ತೀಸ್ ಗಢ): ತನ್ನ ಐದು ವರ್ಷಗಳ ಆಡಳಿತಾವಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 15 ವರ್ಷಗಳ ಆಡಳಿತಾವಧಿಯಲ್ಲಿನ ಅಭಿವೃದ್ಧಿ ಕುರಿತ ಕೇಂದ್ರ ಗೃಹ ಸಚಿವ ಅಮಿತ್ ಶಾ ಸವಾಲನ್ನು ಸ್ವೀಕರಿಸಿದ್ದು, ಚರ್ಚೆಗೆ ವೇದಿಕೆ ಸಿದ್ಧವಾಗಿದೆ ಎಂದು ಚತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಟ್ವೀಟರ್ ನಲ್ಲಿ ಪ್ರತಿಸವಾಲೊಡ್ಡಿದ್ದಾರೆ.
ಇದನ್ನೂ ಓದಿ:BOLLYWOOD: ತಪ್ಪಿದ ಬಾಕ್ಸ್ ಆಫೀಸ್ ದಂಗಲ್; ರಿಲೀಸ್ ಡೇಟ್ ಮುಂದೂಡಿದ ʼಯೋಧʼ
“ಕಪ್ಪು ಸೋಫಾ ಹಾಗೂ ಅದರಲ್ಲಿ ಇಬ್ಬರ ಹೆಸರನ್ನು ನಮೂದಿಸಿರುವ ಫೋಟೋವನ್ನು ಎಕ್ಸ್ ನಲ್ಲಿ ಬಾಘೇಲ್ ಶೇರ್ ಮಾಡಿದ್ದು, ನೀವು(ಅಮಿತ್ ಶಾ) ಚರ್ಚೆಯ ದಿನಾಂಕ, ವೇದಿಕೆ ಮತ್ತು ಸಮಯವನ್ನು ಇನ್ನೂ ನಮೂದಿಸಿಲ್ಲ. ಆದರೆ ಸಾರ್ವಜನಿಕರು ಈಗಾಗಲೇ ಚರ್ಚೆಯ ವೇದಿಕೆಯನ್ನು ಸಿದ್ಧಪಡಿಸಿದ್ದು, ದಿನಾಂಕ ಮತ್ತು ಸಮಯ ದಯವಿಟ್ಟು ತಿಳಿಸಿ ಎಂದು ಟ್ವೀಟ್ ಮೂಲಕ” ಶಾಗೆ ತಿರುಗೇಟು ನೀಡಿದ್ದಾರೆ.
15 ವರ್ಷಗಳ ಆಡಳಿತಾವಧಿಯ ನಿಮ್ಮ ಹಗರಣಗಳು ಮತ್ತು ನಮ್ಮ 5 ವರ್ಷಗಳ ಅಭಿವೃದ್ಧಿಯ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಯಬೇಕಾಗಿದೆ. ಈ ಸವಾಲಿಗೆ ಚತ್ತೀಸ್ ಗಢ ಭಯಪಡುವುದಿಲ್ಲ…ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಬಾಘೇಲ್ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.
ಇತ್ತೀಚೆಗೆ ಪಂಡಾರಿಯಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅಮಿತ್ ಶಾ ಅವರು, ಬಾಘೇಲ್ ಗೆ ಸವಾಲೊಡ್ಡಿದ್ದರು. ಚತ್ತೀಸ್ ಗಢ್ ಸಿಎಂ 5 ವರ್ಷಗಳ ಆಡಳಿತಾವಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ 15 ವರ್ಷಗಳ ಕಾಲಾವಧಿಯ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ಎಂದು ಶಾ ಸವಾಲೊಡ್ಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್ ಕಾರ್ಯಕಾರಿ ರಾಜಧಾನಿ
Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು
Anegudde Temple: ಭಕ್ತರ ಸಂಖ್ಯೆ ಹೆಚ್ಚಳ; ವಿಶೇಷ ಪಾನಕ ವಿತರಣೆ