Watch viedo: ವಿಗ್ ಹಾಕ್ಕೊಂಡು 2ನೇ ಮದುವೆಯಾಗಲು ಬಂದ ವರ…ವಿವಾಹ ಮಂಟಪದಲ್ಲೇನಾಯ್ತು?
Team Udayavani, Jul 14, 2023, 11:47 AM IST
ಗಯಾ(ಬಿಹಾರ): ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬ ಗಾದೆಯಂತೆ, ಇಂದು ಸಾವಿರಾರು ಸುಳ್ಳು, ಮೋಸ, ವಂಚನೆಯಿಂದ ವಿವಾಹವಾಗುವ ನೂರಾರು ಪ್ರಕರಣಗಳು ನಡೆಯುತ್ತಿರುತ್ತದೆ. ಅದೇ ರೀತಿ ಬಿಹಾರದ ಗಯಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಸುಳ್ಳು ಹೇಳಿ ವಿಗ್ ಧರಿಸಿ ವಿವಾಹವಾಗಲು ಬಂದು ವಿವಾಹ ಮಂಟಪದಲ್ಲೇ ಸಿಕ್ಕಿಬಿದ್ದು ವಧುವಿನ ಕುಟುಂಬಿಕರಿಂದ ಥಳಿತಕ್ಕೊಳಗಾದ ಘಟನೆ ನಡೆದಿದೆ.
ಇದನ್ನೂ ಓದಿ:ವರ್ಷದಲ್ಲಿ 12 ಬಾರಿ ಹಾವಿನ ಕಡಿತಕ್ಕೊಳಗಾದ ಮಹಿಳೆ… ಬದುಕುಳಿದಿದ್ದೇ ವಿಸ್ಮಯ
ವರದಿಯ ಪ್ರಕಾರ, ಗಯಾದ ಇಕ್ಬಾಲ್ ಪುರ ನಿವಾಸಿಯಾಗಿರುವ ವರ ಮೊದಲನೇ ವಿವಾಹದ ಸಂಗತಿಯನ್ನು ಮುಚ್ಚಿಟ್ಟು ವಿಗ್ ಧರಿಸಿ ಬಜೌರಾ ಗ್ರಾಮಕ್ಕೆ ಬಂದಿದ್ದ. ವಿವಾಹ ಮಂಟಪದಲ್ಲಿ ವಧುವಿನ ಸಂಬಂಧಿಕರು ವರನ ಬೋಳು ತಲೆಯ ವಿಚಾರ ಗಮನಕ್ಕೆ ಬಂದ ಕೂಡಲೇ ಆತನಿಗೆ ಥಳಿಸಿದ್ದಾರೆ.
ಈ ಸಂದರ್ಭದಲ್ಲಿ ವರ ಎರಡು ಕೈಮುಗಿದು ವಿಗ್ ತೆಗೆಯದಂತೆ ವಿನಂತಿಸಿಕೊಳ್ಳುತ್ತಿರುವುದು ವೈರಲ್ ವಿಡಿಯೋದಲ್ಲಿ ಸೆರೆಯಾಗಿದೆ. ಮೊದಲನೇ ವಿವಾಹದ ಬಗ್ಗೆ ತಿಳಿಸದೇ, ವಿಗ್ ಧರಿಸಿ 2ನೇ ವಿವಾಹವಾಗಲು ಬಂದ ವರನಿಗೆ ವಧುವಿನ ಸಂಬಂಧಿಕರು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವುದು ವಿಡಿಯೋದಲ್ಲಿದೆ.
#Gaya, #Bihar
Groom was beaten by the bride’s family as they came to know that he wears a wig.Now such kind of information shouldn’t be kept hidden from a partner and that’s absolutely wrong.
BUT for that purpose, the groom can’t be tortured or beaten by the bride’s family. pic.twitter.com/KvB7F3g2gL
— ミ🇮🇳★ 𝙆𝙪𝙘𝙝𝘽𝙖𝙖𝙩𝙃𝙖𝙞 ★🇮🇳彡 (@KyaaBaatHai) July 13, 2023
ವಧುವಿನ ಕಡೆಯವರು ವರನ ವಿಗ್ ತೆಗೆಯಲು ಮುಂದಾದಾಗ ವರ ಎರಡು ಕೈಗಳನ್ನು ವಿಗ್ ಮೇಲೆ ಇಟ್ಟು ದಯವಿಟ್ಟು ತೆಗೆಯಬೇಡಿ ಎಂದು ಗೋಗರೆಯುತ್ತಿದ್ದ. ಆದರೆ ವಧುವಿನ ಸಂಬಂಧಿಕರು ಯಾವುದೇ ಕರುಣೆ ತೋರಿಸದೇ ತರಾಟೆಗೆ ತೆಗೆದುಕೊಂಡಿದ್ದು, ವರನ ಬೋಳು ತಲೆ ವಿಷಯ ಹಾಗೂ 2ನೆ ವಿವಾಹದ ಬಗ್ಗೆ ತಿಳಿಯುತ್ತಿದ್ದಂತೆ ವಧು ವಿವಾಹವನ್ನು ರದ್ದುಪಡಿಸಿರುವುದಾಗಿ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ