ಉಪಚುನಾವಣೆ: ಕಾಂಗ್ರೆಸ್ -ಬಿಜೆಪಿ ಘರ್ಷಣೆ; ಲಾಠಿ ಪ್ರಹಾರ
Team Udayavani, May 29, 2019, 1:43 PM IST
ಬೆಂಗಳೂರು: ಬಿಬಿಎಂಪಿ ಉಪಚುನಾವಣೆ ನಡೆಯುತ್ತಿರುವ ಕಾವೇರಿಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸರು ಲಾಠಿ ಚಾರ್ಜ್ ನಡೆಸಿ ಉದ್ರಿಕ್ತರನ್ನು ಚದುರಿಸಿದ್ದಾರೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಉಭಯ ಪಕ್ಷಗಳ ಕಾರ್ಯಕರ್ತರು ದೊಣ್ಣೆಗಳಿಂದ ಬಡಿದಾಡಿಕೊಂಡಿರುವಬಗ್ಗೆ ವರದಿಯಾಗಿದೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನ ಕರೆಸಿಕೊಳ್ಳಲಾಗಿದೆ.
ಬಿಬಿಎಂಪಿ ಸದಸ್ಯರ ಅಕಾಲಿಕನಿಧನದಿಂದ ತೆರವಾಗಿದ್ದ ಸಗಾಯಪುರ (ವಾರ್ಡ್ ಸಂಖ್ಯೆ 60) ಹಾಗೂ ಕಾವೇರಿಪುರ(ವಾರ್ಡ್ ಸಂಖ್ಯೆ 103) ಕ್ಕೆ ಇಂದು ಬುಧವಾರ ಬೆಳಗ್ಗೆ 7 ರಿಂದ ಸಂಜೆ 5ರವರೆಗೆಮತದಾನ ನಡೆಯುತ್ತಿದೆ.