ಎಲ್ಲರ ಆಟವೂ ಗೊತ್ತಿದೆ,ಯಾರೂ ಕಣ್ಮುಚ್ಕೊಂಡು ರಾಜಕಾರಣ ಮಾಡ್ತಿಲ್ಲ:ಡಿಕೆಶಿ
ಆನಂದ ಸಿಂಗ್ ಈಗಲೂ ನನ್ನ ಆತ್ಮೀಯ. ರಾಜೀನಾಮೆ ವಾಪಸ್ ಪಡಿತಾರೆ...
Team Udayavani, Jul 2, 2019, 12:08 PM IST
ಬೆಂಗಳೂರು: ಯಾರು ಏನು ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಬಿಜೆಪಿಯವರು ಏನು ಮಾಡುತ್ತಿದ್ದಾರೆ ಎನ್ನುವುದೂ ಗೊತ್ತಿದೆ. ಯಾರೂ ಕಣ್ಣು ಮುಚ್ಚಿಕೊಂಡು ರಾಜಕಾರಣ ಮಾಡುತ್ತಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರಾದ ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ದ ಕುರಿತಾಗಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಶಾಸಕರನ್ನೂ ಮನವೊಲಿಸೋ ಅವಶ್ಯಕತೆ ಇಲ್ಲ. ಸರ್ಕಾರ ಉಳಿಯಬೇಕು ಅನ್ನುವುದು ಎಲ್ಲರ ಆಶಯವಾಗಿದೆ ಎಂದರು.
ವೇಣುಗೋಪಾಲ್ ಅವರು ಎಲ್ಲರ ಜೊತೆ ಮಾತನಾಡಿ ಹೋಗಿದ್ದಾರೆ. ಈ ಸರ್ಕಾರ ಫುಲ್ ಟರ್ಮ್ ಇರುತ್ತದೆ ಎಂದರು.
ನಾಗೇಂದ್ರ ಬುದ್ದಿವಂತ, ಪ್ರಜ್ಞಾವಂತ ಅವರು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಆನಂದ ಸಿಂಗ್ ಈಗಲೂ ನನ್ನ ಆತ್ಮೀಯ. ರಾಜೀನಾಮೆ ವಾಪಸ್ ಪಡಿತಾರೆ ಅನ್ನೋ ವಿಶ್ವಾಸ ಇದೆ ಎಂದರು.
ದಿನೇಶ ಗುಂಡೂರಾವ್ ವಿದೇಶ ಪ್ರವಾಸ ವಿಚಾರ, ಅವರಿಗೆ ಗೊತ್ತಿದೆ. ಅವರಿಗೂ ಖಾಸಗಿ ಜೀವನ ಇದೆ. ಅದಕ್ಕೆ ವಿದೇಶ ಪ್ರವಾಸಕ್ಕೆ ಹೋಗಿದ್ದಾರೆ ಎಂದರು.
ಎಲ್ಲರೂ ಡಿ.ಕೆ.ಶಿವಕುಮಾರ್ ಆಗದುವುದಕ್ಕೆ ಆಗೋಕ್ಕಾಗುತ್ತಾ? ಸಿದ್ದರಾಮಯ್ಯ ಆಗೋಕ್ಕಾಗುತ್ತಾ? ದಿನೇಶ ಗುಂಡೂರಾವ್ ಆಗೋಕ್ಕಾಗುತ್ತಾ ಎಂದು ಪ್ರಶ್ನಿಸಿದರು.