ಸಾಲದ ಹಣ ಮರುಪಾವತಿಯಿಂದ ತಪ್ಪಿಸಿಕೊಳ್ಳಲು ದರೋಡೆ ಕಥೆ ಕಟ್ಟಿದ ಅಳಿಯ ಜೈಲುಪಾಲು!
ಟ್ರೋನಿಕಾ ನಗರದಲ್ಲಿರುವ ಮೋಹಿನಿಯ ಪೋಷಕರ ಮನೆಗೆ ಪ್ರಯಾಣ ಬೆಳೆಸಿದ್ದರು.
Team Udayavani, Apr 10, 2024, 4:52 PM IST
ನವದೆಹಲಿ: ಮಾವನಿಂದ ಪಡೆದಿದ್ದ ಸಾಲದ ಹಣ ಮರುಪಾವತಿಸುವುದರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಅಳಿಯ ನಕಲಿ ದರೋಡೆ ಕಥೆ ಹೆಣೆದ ಘಟನೆ ಉತ್ತರಪ್ರದೇಶದ ಗಾಜಿಯಾಬದ್ ನಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ಬುಧವಾರ (ಏ.10) ತಿಳಿಸಿದ್ದಾರೆ.
ಇದನ್ನೂ ಓದಿ:PUC Result: ರಾಜ್ಯಕ್ಕೆ ದ್ವಿತೀಯ… ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಕೂಲಿಕಾರ್ಮಿಕನ ಮಗಳು
ಪಶ್ಚಿಮ ದೆಹಲಿಯ ಕರೋಲ್ ಬಾಗ್ ನಿವಾಸಿ ಆಶಿಶ್ ಗುಪ್ತಾ ಎಂಬಾತ ತುಂಡು ಭೂಮಿ ಖರೀದಿಗಾಗಿ ತನ್ನ ಮಾವನಿಂದ 8 ಲಕ್ಷ ರೂಪಾಯಿ ಸಾಲ ಪಡೆದಿದ್ದ. ಆದರೆ ಅದರಲ್ಲಿ 2 ಲಕ್ಷ ರೂಪಾಯಿ ಖರ್ಚು ಮಾಡಿದ್ದ. ಆ ಸಾಲದ ಮೊತ್ತವನ್ನು ಪೂರ್ಣ ಮರುಪಾವತಿಸಲು ಗುಪ್ತಾಗೆ ಸಾಧ್ಯವಾಗಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಳಿದ ಆರು ಲಕ್ಷ ರೂಪಾಯಿ ಹಣವನ್ನು ದರೋಡೆಯಾಗಿದೆ ಎಂದು ಬಿಂಬಿಸಲು ಸಂಚು ರೂಪಿಸಿದ್ದ. ಅದರಂತೆ ದಂಪತಿ ದೆಹಲಿಯಿಂದ ಗಾಜಿಯಾಬಾದ್ ನ ಟ್ರೋನಿಕಾ ನಗರದಲ್ಲಿರುವ ಮೋಹಿನಿಯ ಪೋಷಕರ ಮನೆಗೆ ಪ್ರಯಾಣ ಬೆಳೆಸಿದ್ದರು.
ಈ ಸಂದರ್ಭದಲ್ಲಿ ದಾರಿ ಮಧ್ಯೆ ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಮೋಹಿನಿ ಬಳಿ ಬಂದು ಚಾಕು ತೋರಿಸಿ, ಹಣವಿದ್ದ ಬ್ಯಾಗ್ ಅನ್ನು ಕಸಿದುಕೊಂಡು ಪರಾರಿಯಾಗಿದ್ದರು.
ಕಿರುಚಾಟ, ಗಲಾಟೆಯಿಂದ ಎಚ್ಚೆತ್ತ ಸ್ಥಳೀಯರು ಇಬ್ಬರನ್ನೂ ಬೆನ್ನಟ್ಟಿ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದರು. ವಿಚಾರಣೆಯಲ್ಲಿ ಇಬ್ಬರೂ ದರೋಡೆಕೋರರು ಆಶಿಶ್ ಹೆಸರು ಹೇಳಿದ್ದು, ಇದು ಆತನ ಸಂಚು ಎಂದು ತಿಳಿಸಿದ್ದರು. ದೀಪಕ್ ಮತ್ತು ಯೋಗೇಶ್ ಜತೆ ಆಶಿಶ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು