ರೈಲ್ವೇ ನಿಲ್ದಾಣದಲ್ಲಿ ಮೀನುಗಳ ಮಸಾಜ್ : ಪ್ರಯಾಣಿಕರ ಪಾದಗಳಿಗೆ ಕಚಗುಳಿ!
Team Udayavani, Sep 10, 2021, 12:44 PM IST
ಬೆಂಗಳೂರು: ಅಂದುಕೊಂಡಂತೆ ಎಲ್ಲವೂ ನಡೆದರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಶೀಘ್ರದಲ್ಲೇ ಮೀನುಗಳು ಮಸಾಜ್ ಮಾಡಲಿವೆ. ಪಾದಗಳಿಗೆ ಕಚಗುಳಿ ಇಟ್ಟು, ಒತ್ತಡದಲ್ಲಿರುವ ಪ್ರಯಾಣಿಕರನ್ನು “ರಿಲ್ಯಾಕ್ಸ್ ಮೂಡ್ ‘ಗೆ ಕರೆದೊಯ್ಯಲಿವೆ!
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮತ್ತೂಂದು ಪ್ರಥಮಕ್ಕೆ ಸಾಕ್ಷಿಯಾಗುತ್ತಿದೆ. ಈ ಸಂಬಂಧ ಸಿದ್ಧತೆಗಳು ನಡೆದಿದ್ದು, ಹೆಚ್ಚು-ಕಡಿಮೆ ತಿಂಗಳಾಂತ್ಯದಲ್ಲಿ ಸೇವೆಗೂ ಅಣಿಗೊಳ್ಳುವ ಸಾಧ್ಯತೆ ಇದೆ. ಇದರೊಂದಿಗೆ ನಿಲ್ದಾಣಕ್ಕೆ ಭೇಟಿ ನೀಡುವವರಿಗೆ ಮೀನುಗಳು ಮಸಾಜ್ ಮಾಡಿ, ಪಾದಗಳ ಅಂದ ಹೆಚ್ಚುಸುವುದರ ಜತೆಗೆ ಆಹ್ಲಾದಕರ ಅನುಭವದೊಂದಿಗೆ “ಕೂಲ್’ ಮಾಡಿ ಕಳುಹಿಸಲಿವೆ.
ನಿಲ್ದಾಣದ ಕಾಯ್ದಿರಿಸುವ ಕೌಂಟರ್ಗೆ ತೆರಳುವ ಮಾರ್ಗದಲ್ಲಿ (ಡಾಮಿನೊ ಪಿಜ್ಜಾ ಮಳಿಗೆ ಬಳಿ) ಈಗಾಗಲೇ 30/30 ಅಡಿ ಜಾಗದಲ್ಲಿ ಚಿತ್ತಾಕರ್ಷಕ ಕಾರಂಜಿಯನ್ನು ನಿರ್ಮಿಸಲಾಗಿದೆ. ಅದರ ಮೇಲೆ “ಐ ಲವ್ ಕೆಎಸ್ಆರ್ ಬೆಂಗಳೂರು’ ಎಂದು ಕೆತ್ತಲಾಗಿದೆ. ಇದೇ ಜಾಗದಲ್ಲಿ ಭಾರತೀಯ ರೈಲ್ವೆ ನಿಲ್ದಾಣಅಭಿವೃದ್ಧಿ ನಿಗಮವು “ಫಿಶ್ ಸ್ಪಾ’ಗೆ ವ್ಯವಸ್ಥೆ ಮಾಡುತ್ತಿದೆ.
ಏಕಕಾಲದಲ್ಲಿ ಆರರಿಂದ ಎಂಟು ಜನ ಇದರ ಉಪಯೋಗ ಪಡೆಯಬಹುದು. ಕನಿಷ್ಠ 15ರಿಂದ ಗರಿಷ್ಠ30 ನಿಮಿಷಗಳಕಾಲ ಈ ಮಸಾಜ್ಗೆ ಅವಕಾಶ ಕಲ್ಪಿಸಲಾಗುತ್ತಿದೆ. ಈಗಾಗಲೇ ಸುರಂಗ ಅಕ್ವೇರಿಯಂಗೆ ಪ್ರವೇಶ ಶುಲ್ಕ ಇರುವಂತೆಯೇ ಮಸಾಜ್ಗೂ
ಕೈಗೆಟಕುವ ದರ ನಿಗದಿಪಡಿಸಲು ಬೆಂಗಳೂರು ವಿಭಾಗೀಯ ರೈಲ್ವೆ ಉದ್ದೇಶಿಸಿದೆ.
ಇದನ್ನೂ ಓದಿ :ಸರಳ ಆಚರಣೆಗೆ ದುಬಾರಿ ಪಯಣ! ಸುಲಿಗೆ ಮಾಡಿದ ಖಾಸಗಿ ಸಾರಿಗೆಗಳು ; ಮೌನಕ್ಕೆ ಶರಣಾದ ಇಲಾಖೆ
ಆದಾಯದಮೂಲವೂ…ಆರೋಗ್ಯದೃಷ್ಟಿಯೂ…:
ಹೊರಗುತ್ತಿಗೆ ಮೂಲಕ ಇದರ ನಿರ್ವಹಣೆ ಮಾಡಲಿದ್ದು, ಬರುವ ಆದಾಯದಲ್ಲಿ ಪಾಲುದಾರಿಕೆ ಹೊಂದುವ ಚಿಂತನೆ ಇದೆ. ಮೀನು ಮಸಾಜ್ ಉದ್ದೇಶ ಒಂದೆಡೆ ಪ್ರಯಾಣಿಕರ ಆರೋಗ್ಯದ ಹಿತದೃಷ್ಟಿ, ಮತ್ತೂಂದೆಡೆ ಆದಾಯದ ಮೂಲವೂ ಆಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಅಕ್ವೇರಿಯಂ, ಕಾರಂಜಿ, ಫಿಶ್ ಸ್ಪಾ, ರೈಲು ಆರ್ಕೆಡ್ನಂತಹ ಹಲವು ವಿನೂತನ ಪ್ರಯೋಗಗಳೊಂದಿಗೆ ಹೃದಯಭಾಗದಲ್ಲಿರುವ ರೈಲು ನಿಲ್ದಾಣವು ನಗರದ ಪ್ರವಾಸಿ ಕೇಂದ್ರವಾಗಿ ರೂಪುಗೊಳ್ಳಲಿದೆ. ಎಲ್ಲ ಮೀನುಗಳಿಂದ ಮಸಾಜ್ ಆಗುವುದಿಲ್ಲ.
ಇದಕ್ಕಾಗಿ ಹಲವು ಪ್ರಕಾರದ ಮೀನುಗಳಿವೆ. ಉದಾಹರಣೆಗೆ ಹರ್ಬಲ್, ವೈನ್, ಚಾಕೊಲೇಟ್ ಅಂಶಗಳ ಪೆಡಿಕ್ಯೂರ್ ಜನಪ್ರಿಯ. ಅಲ್ಲದೆ, ಓರಿಫ್ಲೇಮ್, ಮ್ಯಾಕ್, ವಿಎಲ್ಸಿಸಿ, ಓರ್ಲಿ ಇಂತಹ ಉತ್ತಮ ಗುಣಮಟ್ಟದ ಬ್ರ್ಯಾಂಡ್ ನ ಪೆಡಿಕ್ಯೂರ್
ಮಾಡಿಸಿಕೊಳ್ಳಬೇಕಾದರೆ ಸಾವಿರಾರು ರೂಪಾಯಿ ನೀಡಬೇಕಾಗುತ್ತದೆ. ಇದರ ಜತೆಗೆ ದೇಶೀಯವಾಗಿಯೂ ಕಡಿಮೆ ವೆಚ್ಚದಲ್ಲಿ ಪೆಡಿಕ್ಯೂರ್ ಮೀನಿನ ಪ್ರಕಾರಗಳೂ ಇವೆ. ಅವುಗಳನ್ನು ಪರಿಚಯಿಸುವ ಯೋಚನೆ ಇದೆ ಎಂದು ಹೆಸರು ಹೇಳಲಿಚ್ಛಿಸದ
ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಏನಿದು”ಫಿಶ್ ಸ್ಪಾ’?
ನೀವು ಪಾದಗಳನ್ನು ನೀರಿನಲ್ಲಿ ಇಳಿಬಿಟ್ಟು ಕೂರುತ್ತಿದ್ದಂತೆ ಬುಳುಬುಳು ಬಾಯಿ ಬಿಡುತ್ತಾಬರುವಮೀನುಗಳು, ಒಡೆದ ಪಾದದ ಚರ್ಮವನ್ನು ತಿಂದು ಹಾಕುತ್ತವೆ. ಮೊಣಕಾಲಿನವರೆಗೆ ಕಾಲುಗಳನ್ನು ತೊಳೆದುಕೊಂಡ ನಂತರ 50ರಿಂದ 60 ಪುಟ್ಟಪುಟ್ಟ ಮೀನುಗಳು ತುಂಬಿದ ನೀರಿನ ತೊಟ್ಟಿಯಲ್ಲಿ ಇಳಿಬಿಟ್ಟರೆ ಸಾಕು. 15 ನಿಮಿಷದಲ್ಲಿಬಿರುಕು ಪಾದವನ್ನು ನಯಗೊಳಿಸಿರುತ್ತದೆ. ನೀರಿನಲ್ಲಿ ನೆನೆಯುತ್ತಾ ಪಾದ ಮೃದುವಾಗುತ್ತಾ ಹೋದಂತೆ ಮೀನು ಮೇಲ್ಭಾಗದ ಚರ್ಮವನ್ನು ತಿಂದು ಹಾಕುತ್ತವೆ.
ಇದನ್ನೂ ಓದಿ :ಟ್ರಕ್ ನಿಂದ ಆಯತಪ್ಪಿ ಬಿದ್ದ ಚಾಲಕ : ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ
ಈ ಮೊದಲು ಸುರಂಗ ಮತ್ಸ್ಯಾಗಾರ ಆರಂಭ
ಜುಲೈನಲ್ಲಷ್ಟೇ ದೇಶದ ಮೊದಲ ಸುರಂಗ ಮತ್ಸ್ಯಾಗಾರವನ್ನು ಅನಾವರಣಗೊಂಡಿದೆ. ಅಮೆಜಾನ್ ನದಿ ಕಲ್ಪನೆಯಡಿ 12 ಅಡಿ ಉದ್ದದ ಈ ಸುರಂಗ ಮತ್ಸ್ಯಾಗಾರ (ಅಕ್ವೇರಿಯಂ) ರೂಪಿಸಲಾಗಿದೆ.
ಸುರಂಗದೊಳಗೆ ಸಾಗುತ್ತಿದ್ದರೆ, ಅಮೆಜಾನ್ ನದಿಯೊಳಗೆ ಸಾಗುತ್ತಿರುವ ಮೀನುಗಳನ್ನು ಪ್ರತ್ಯಕ್ಷ ನೋಡುತ್ತಿರುವಂತೆ ಭಾಸವಾಗುತ್ತದೆ. ಸಾಗರದಲ್ಲಿ ಕಾಣಸಿಗುವ ಮತ್ಸ್ಯ ಪ್ರಭೇದಗಳು, ಸಮುದ್ರ ಜೀವಿಗಳ ಮಾದರಿಗಳು ಇಲ್ಲಿ ಇವೆ. ಈ ಸುರಂಗ ಪ್ರವೇಶಕ್ಕೆ 25 ರೂ ಶುಲ್ಕ ನಿಗದಿ ಮಾಡಲಾಗಿದೆ.
ಏನು ಉಪಯೋಗ?
– ಮೀನುಗಳು ಉಗುರಿನ ಮಧ್ಯ ಇರುವ ಕಸ, ಒಣಗಿ ಸಿಬಿರು ಎದ್ದ ಚರ್ಮವನ್ನು ತಿಂದು ಹಾಕುವುದರಿಂದ ಸ್ಕ್ರಬ್ಬಿಂಗ್ ಆಗುತ್ತದೆ.
– ಒರಟು ಚರ್ಮ ತಿನ್ನುವಾಗ ಚರ್ಮಕ್ಕೆ ಉತ್ತಮ ಮಸಾಜ್ ಸಿಗುತ್ತದೆ. ಚರ್ಮಕ್ಕೆ ಹೊಳಪು ಬರುತ್ತದೆ.
– ಕೆಲ ಪ್ರಷರ್ ಪಾಯಿಂಟ್ ಮೇಲೆ ನಯವಾಗಿ ಒತ್ತುವುದರಿಂದ ಒತ್ತಡ ನೋವು ಶಮನಗೊಳ್ಳುತ್ತದೆ.
– ಮೀನು ಸೋಂಕು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಅಂಗಾಲು ಹುಣ್ಣು, ಗಾಯಕ್ಕೂ ಇದು ಶಮನಕಾರಿ.
– ಮೀನಿನ ಎಂಜಲಿನಲ್ಲಿ ಉತ್ತಮ ಆಂಟಿಸೆಪ್ಟಿಕ್ ಗುಣವಿದ್ದು ಇದರಿಂದ ಹುಣ್ಣು ಬೇಗ ಮಾಯುತ್ತದೆ.
– ವಿಜಯ ಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ